Friday, August 27, 2010

ಶಾಂತವಾಗಿ ನೋಡಿ...ಮೌನ ಸಿನಿಮಾವಾಗಿದೆ

  ಅದು ಹಾಸ್ಯ ಸಿನಿಮಾ ಎಂದರೆ ಹೌದು; ಹಾಗೆಂದುಕೊಳ್ಳುವಂತೆಯೇ ಇದೆ! ಕಲಾತ್ಮಕ ಚಿತ್ರವೆಂದರೆ, ಅದೂ ನಿಜವೇ! ಒಂದೇ ಮಾತಿನಲ್ಲಿ ಹೇಳಿ ಮುಗಿಸುವುದಾದರೆ ವೌನವಾಗಿ ಮಾತಿಗಿಳಿಯುವ ಸುಂದರ ಚಿತ್ರ. ಇರಾನ್ ಕೊರ್ಲಿನ್ ತನ್ನ ಜೀವನದ ಕೆಲವು ಅಂಶಗಳನ್ನಿಟ್ಟುಕೊಂಡೇ ಸುಂದರ ಚಿತ್ರವೊಂದನ್ನು ಹೆಣೆದಿದ್ದಾನೆ. ಒಂದರ್ಥದಲ್ಲಿ 75% ರೀಯಲ್ 25% ರೀಲ್ ಅನ್ನಿಸುವ ‘ದಿ ಬ್ಯಾಂಡ್  ವಿಸಿಟ್ ಚಿತ್ರ
 ಎಣಿಕೆಯಂತೆ ಇದು ಯಾರೆಂದರೆ ಯಾರ ನಿರಿಕ್ಷೇಯನ್ನೂ ಹುಸಿಗೊಳಿಸದ ಚಿತ್ರ. ಮಾತನ್ನೇ ಬಂಡವಾಳ ಮಾಡಿಕೊಂಡ ಇಂದಿನ ಸಿನಿಮಾಗಳ ನಡುವೆ ಈ ಚಿತ್ರ ತುಂಬಾ ವಿಭಿನ್ನ. ಹೆಸರೇ ಹೇಳುವಂತೆ ಒಂದು ಬ್ಯಾಂಡ್ ಸೆಟ್  ಹುಡುಗರು ಬೇರೆ ಪ್ರದೇಶಕ್ಕೆ ಹೋಗಿ ಅಲೆಮಾರಿಯಾಗಿ ಬದುಕನ್ನು ಕಂಡುಕೊಳ್ಳುವ ಚಿತ್ರ. ಸಾಮಾಜಿಕವಾಗಿ ಇವತ್ತಿಗೂ ಇಂಥ ಸ್ಥಿತಿಯನ್ನು ಅನುಭವಿಸುತ್ತಿರುವವರು ಹತ್ತಿರದಿಂದ ಕಾಣಸಿಗುತ್ತಾರಾದ್ದರಿಂದ ಆವತ್ತಿನ ಬದುಕಿಗೂ ಇವತ್ತಿನ ಜೀವನ ಉಪಕ್ರಮಗಳಿಗೂ ಇರುವ ಸಾಮ್ಯತೆಯನ್ನು ಬಿಚ್ಚಿಡುತ್ತದೆ,ಆಪ್ತವಾಗುತ್ತದೆ.
        2007ರಲ್ಲಿ ತರೆಗೆ ಬಂದ ಇಸ್ರೇಲ್ ಚಿತ್ರ ದಿ ಬ್ಯಾಂಡ್ ವಿಸಿಟ್  ಇರಾನ್ ಕೊರ್ಲಿನ್ ಎಂಬ ನಿರ್ದೇಶಕನ ಚೊಚ್ಚಲ ಪ್ರಯತ್ನ. ಚಿತ್ರದ ನಾಯಕ ಹಾಗೂ ಆತನ ಮಗ ಎರಡು ಪ್ರತ್ಯೇಕ ತಲೆಮಾರುಗಳ ಪ್ರತಿನಿಧಿಗಳಂತೆ ಕಾಣುತ್ತಾರೆ. ಇಬ್ಬರ ವಿಚಾರಗಳಲ್ಲೂ ವ್ಯಕ್ತವಾಗುವ ಭಿನ್ನತೆಗಳು ಬದಲಾದ ಸಾಮಾಜಿಕ ಸ್ವರೂಪವನ್ನು ಬಿಂಭಿಸುತ್ತಾ ಮುಂದುವರೆಯುತ್ತದೆ. 2007 ನೇ ಸಾಲಿನಲ್ಲಿ ಇಸ್ರೇಲ್ನಿಂದ ಆಸ್ಕರನ ಅತ್ಯತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಸ್ಪಧಸಿತ್ತು. ಅದೃಷ್ಟ ನೆಟ್ಟಗಿರಲಿಲ್ಲ. ಪ್ರಶಸ್ತಿ ಕೈ ತಪ್ಪಿ ಹೋಯಿತು.
ಕಥೆ ಸಾಗುವುದು ಹೀಗೆ...
  ಈಜಿಪ್ತ್ ನ ಅಲೆಗ್ಸಾಂಡ್ರಿಯಾ ಸೆರಮೋನಿಯಲ್ ಪೋಲಿಸ್ ಆರ್ಕೆಷ್ಟ್ರಾ ಎಂಟು ಮಂದಿಯನ್ನೂಳಗೊಂಡ ಬ್ಯಾಂಡ್ ಸೆಟ್ ತಂಡ. ಇವರಿಗೆ ಇಸ್ರೇಲ್ ನ  ಅರಬ್ ಇಂಟರ ನ್ಯಾಷನಲ್ ಸೆಂಟರ್ ನಿಂದ ಕಾರ್ಯಕ್ರಮ ನಡೆಸಿಕೊಡಲು ಆಹ್ವಾನ ಬರುತ್ತದೆ. ಅಂದುಕೊಂಡಂತೆ ಎಲ್ಲವೂ ಆಗದು ಎಂಬ ಸಂಗತಿಯನ್ನು ಪರೋಕ್ಷವಾಗಿ ಹೇಳಲು ಬಳಸಿಕೊಂಡ ರೂಪಕದಂತೆ ಇವರು ವಿಳಾಸ ತಪ್ಪಿ ಬೇರೆ ಪ್ರದೇಶಕ್ಕೆ ಬಂದಿಳಿಯುತ್ತಾರೆ. ಅಷ್ಟಷ್ಟೇ ಬದುಕಿನ ಅರ್ಥ ಕಂಡುಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಕೆಷ್ಟ್ರಾ ದ ನಾಯಕ ತೌಫೀಕ್ ನ ಬದುಕಿಗೆ ಇಲ್ಲಿ ವಿಚಿತ್ರ ತಿರುವು. ಯಾವುದೇ ಗುರುತು ಪರಿಚಯವಿಲ್ಲದ ಪ್ರದೇಶದಲ್ಲಿ ಹೊಸ ದಿಕ್ಕನ್ನು ಹಿಡಿಯುತ್ತಾನೆ.ಆದರೆ ಸ್ವಗತದಲ್ಲಿ ತನ್ನ ಮಗನ ಬಗ್ಗೆ ತಾನು ನಿಷ್ಠುರ ಧೋರಣೆ ತಾಳಿದ್ದೇ ತನ್ನ ಹೆಂಡತಿಯ ಸಾವಿಗೆ ಕಾರಣವಾಯಿತು ಎಂಬ ದುಃಖ. ಆತನನ್ನು ಖಿನ್ನತೆ ಆವರಿಸುತ್ತದೆ. ಈ ಬಗ್ಗೆ ಆತನಲ್ಲಿ ಜಿಗುಪ್ಸೆ ಇದೆ.ಇದರಿಂದ ಹೊರ ಬರುವ ಸಲುವಾಗಿಯೇ ಬ್ಯಾಂಡ್ ತಂಡ ಬೇಕು... ಆ ಸದ್ದಿನಲ್ಲಿ ಮನಸಿನೊಳಗಿನ ಗದ್ದಲ ಸುಮ್ಮನೇ ಅಳಿಸಿ ಹೋಗಬೇಕು...
   ಅನಾಮಿಕ ಪ್ರದೇಶದ ರೆಸ್ಟೋರೆಂಟ್ನಲ್ಲಿ ಉಳಿದುಕೊಳ್ಳುವ ಈ ತಂಡಕ್ಕೆ ಅಲ್ಲಿ ರೆಸ್ಟೋರೆಂಟ್ ಮಾಲಕಿ ಡೈನಾ ಜೊತೆಯಾಗುತ್ತಾಳೆ ಬಿಟ್ಟು ಹೋದ ಪ್ರಿಯತಮನ ಬಳಿಕ ಆಕೆಯ ಬದುಕಿಗೂ ನೆರಳಿಲ್ಲ. ಒಂದರ್ಥದಲ್ಲಿ ಬರೀ ಬರಡು ಬದುಕು ಬಾಳುತ್ತಿದ್ಗದಾಳೆ .ಇವರಿಬ್ಬರ ಬದುಕು ಚರಂಡಿ ಪಕ್ಕದ ಗೋಡೆ.


 ಡೈನಾ ಜೊತೆ ಸುಂದರ ಸಂಜೆಯಲ್ಲಿ ನಡೆಯುವ ಮಧುರ ಮಾತುಕತೆಯಿಂದ ತನ್ನ ಮಗ ಅರ್ಥವಾಗುತ್ತಾನೆ..ತೌಫೀಕ್ ಗೆ 80ರ ದಶಕದ ದಿನ ಮರುಕಳಿಸಬೇಕು ಎಂಬ ಆಸೆ..ಆದರೆ ಆತನ ಮಗ ಹೊಸ ತಲೆಮಾರಿನ ಪ್ರತಿನಿಧಿ.ಇವರಿಬ್ಬರಿಗೆ ಕೊಂಡಿಯಾಗುವವಳು ಡೈನಾ.
 ತನ್ನೋಳಗಿನ ತಾನನ್ನು ಅಡಗಿಸಿಟ್ಟ ತೌಫೀಕ್ ಅದನ್ನು ಹೊರಜಗತ್ತಿಗೆ ತೋರಿಸುವುದೇ ಚಿತ್ರದ ಒನ್ ಲೈನ್ ಕಥೆ.ಇದೆ ಈ ಚಿತ್ರದ ಪರಿಣಾಮಕಾರಿ ಅಂಶ ಇದರ ನಡುವೆ ನಡೆಯುವ ಜಂಜಾಟಗಳನ್ನು ಇರಾನ್ ಮನೋಜ್ಞವಾಗಿ ಚಿತ್ರಿಸಿದ್ದಾನೆ. 2007ರಲ್ಲಿ ಹೆಚ್ಚಿನ ಅಂತಾರಾಷ್ಟ್ರಿಯ ಪ್ರಶಸ್ತಿಗಳಿಸಿದ ಈ ಚಿತ್ರದ ಕಥೆ ಹೆಚ್ಚಿನ ಜನರ ಜೀವನದಲ್ಲಿ ಸಂಭವಿಸುವಂತದ್ದು ‘!.ಚಿಕ್ಕಪುಟ್ಟ ವಿಷಯಗಳಿಗೆ ಯಡವಟ್ಟುಗಳಾಗುವ ಬದುಕಿನ ಸುಂದರ ವಿಡಂಬನೆ ಚಿತ್ರದಲ್ಲಿದೆ.
ನನಗೇಕೋ ವಿಶೇಷ ವ್ಯಕ್ತಿ ಅನಿಸಿದ..


ಚಿತ್ರ ನೋಡಿದೆ, ಕಾಡುವ ಚಿತ್ರಗಳೆಂದರೆ ಒಂದು ಪಟ್ಟು ಹೆಚ್ಚಿಗೆ ಖುಷಿಯಾಗುತ್ತದೆ.ತೌಫೀಕ್ ನ ಪಾತ್ರ ಕಾಡುತ್ತಿತ್ತು ಇರಾನ್ ನೆನಪಾಗುತ್ತಿದ್ದ..
ಇಂತದ್ದೂಂದು ಅಂತರ್ಗತ ಕಥೆ ನಿರ್ದೇಶಕನಿಗೆ ಹೊಳೆದಿದ್ದಾದರೂ ಹೇಗೆ ಎನ್ನುವ ಕುತೂಹಲ ಕಾಡುತ್ತಿತ್ತು. ಇಂಟರನೆಟ್ ನ ಕಿಂಡಿಯಲ್ಲಿ ಇರಾನ್ ಎಂದು ಬರೆದಾಗ ಸಿಕ್ಕಿದ್ದಿಷ್ಟು..
  ಇಸ್ರೇಲ್ನ ಟಿವಿಗಳಲ್ಲಿ ಬರುತ್ತಿದ್ದ ಸಾಂಪ್ರದಾಯಿಕ ಆರ್ಕೆಷ್ಟ್ರಾ ಗಳು ಟಿವಿಗಳ ಖಾಸಗೀಕರಣದಿಂದ ಮರೆಯಾದವು. ಒಂದು ಕಾಲದಲ್ಲಿ ಇಡಿ ಇಸ್ರೇಲ್ ಜನತೆಯನ್ನು ಹಿಡಿದಿಟ್ಟಿದ್ದ ಆ ಕಾರ್ಯಕ್ರಮ ಟಿವಿ ಚಾನೆಲ್ಗಳಲ್ಲಿ ಬರುವ ಆಧುನಿಕ ಕಾರ್ಯಕ್ರಮದ ನಡುವೆ ಮರೆಯಾದವು.ಇದೆ ಕಥೆಗೆ ನನ್ನ ಜೀವನದ ಕೆಲವು ಘಟನೆಗಳನ್ನು ಸೇರಿಸಿ ಈ ಚಿತ್ರ ಮಾಡಿದ್ದೆನೆ ಎನ್ನುತ್ತಾನೆ.
 ನಿರ್ಜನ ಪ್ರದೇಶಗಳನ್ನು ನಿರ್ಲಜ್ಜವಾಗಿ ಕಾಮೆರಾದಲ್ಲಿ ಸರೆಹಿಡಿದ ರೀತಿಯಂತೂ ಅದ್ಬುತ.ಬರಡು ಬದುಕಿಗೆ ಮಾದರಿ ಎಂಬಂತೆ ತೋರಿಸಿರುವ ಪ್ರತಿಮೆಗಳು...ಒಂದಕ್ಕಿಂತ ಒಂದು ದೃಶ್ಯ ವೈಭವ ಚಿತ್ರವನ್ನುನ್ನು ಸುಂದರವಾಗಿಸಿದೆ. ಸುತ್ತಲೂ ಕತ್ತಲೆ..ಬೋಳು ಬೆಂಚು...ತಲೆ ಮೇಲೆ ಮಂದಬೆಳಕಿನ ಟ್ಯೂಬ್ ಲ್ಐಟು..ತೌಫೀಕ್  ಹಾಗೂ ಡೈನಾ ಮಾತಾಡುವಾಗ ಕ್ಯಾಮೆರಾ ಕಲೆಗಾರಿಕೆ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.
ಕೊನೆ ಕಾಲಂ
 ಪ್ರಪಂಚದಲ್ಲಿ ಹಲವು ಚಿತ್ರಗಳಿವೆ.ನೋಡಿದಾಗ ತಣಿಸುವ..ಇಲ್ಲದಿದ್ದಲ್ಲಿ ಕುಣಿಸುವ..ಚಿತ್ರಗಳ ನಡುವೆ.ಕಾಡುತ್ತದೆ..ದಿ ಬ್ಯಾಂಡ್ ವಿಸಿಟ್..ಇದರ ಡಿವಿಡಿ ಹುಡುಕಿಕೊಂಡು ಚಿತ್ರ ನೋಡಿ,ಮನಸ್ಸು ಹಗುರಾಗುತ್ತದೆ..ಜೀವನದಲ್ಲಿ ಕಳೆದುಕೊಂಡದ್ದು ಸಿಗುತ್ತದೆ. ಈಗೀಗ ಕಾಡುವ ಚಿತ್ರಗಳು ಬರುವುದು ತುಂಬಾ ಕಡಿಮೆ.

Saturday, August 21, 2010

ಮುಂಗಾರು ಮತ್ತೆ ಹಿತ ನೀಡಬಹುದೇ...

 ತನ್ನ ಜೀವನದ ಅಮೂಲ್ಯ ಘಟ್ಟವನ್ನು ಕತ್ತಲ ಕೋಣೆಯಲ್ಲಿ ಕಳೆದು ಬ್ರಹ್ಮಚಾರಿಯಾಗಿಯೆ ಉಳಿದಿರುವ ಮೂವಳ್ಳಿನಾರಾಯಣ್ ಎಂಬುವವರ ಕಥೆ ಆಧರಿಸಿದ ಚಿತ್ರ.. ನಿಜ..ಚಿತ್ರ ನೋಡದೆ ಆ ಚಿತ್ರದ ಬಗ್ಗೆ ಬರೆಯಬಾರದು ಎಂಬ ಧೃಡ ನಿರ್ಧಾರದಲ್ಲಿದ್ದೆ ..ಆದರೆ ದೃಶ್ಯ ಮಾಧ್ಯಮಗಳಲ್ಲಿ ಆ ಚಿತ್ರದ ಬಗ್ಗೆ ಮೊದಲು ಅಷ್ಟೊಂದು ಪ್ರಚಾರ ಸಿಕ್ಕಿರಲಿಲ್ಲಲ್ಲ ವಾಗಿತ್ತು.. ಬಿಎಂಟಿಸಿ ಬಸ್ಗಳಲ್ಲಿ ಹೋಗುವಾಗ ಹೊಸ ಚಿತ್ರಗಳ ಬ್ಯಾನರ್ ಗಳನ್ನುನೋಡುವ ಹವ್ಯಾಸ ನನಗಿದೆ..ಹೀಗೆ ಒಂದು ಸಾರಿ ನೋಡುವಾಗ ಆ ಚಿತ್ರದ ಬ್ಯಾನರ್ ನೋಡಿದ್ದೆ....ಭಾರತದ ಒಂಭತ್ತು ಪ್ರಧಾನಿಗಳಿಗೆ ತಿಳಿಯದೆ ಹೋದ ಕಥೆ....  ಮತ್ತೆ ಮುಂಗಾರು....ಕಡಲ ತೀರದ ಕವಿತೆ.   
ಮುಂಗಾರು ಮಳೆ ಎಂಬ ಮೃದುಲ ಹಿಟ್ ಚಿತ್ರ... ಮೊಗ್ಗಿನ ಮನಸು ಎಂಬ ಹುಡುಗಿಯರ ಬಾಳ ಕವಿತೆಯ ಚಿತ್ರ ಮಾಡಿ ಜನರಿಗೆ ನೀಡಿದ್ದ ಎಂ.ಕೃಷ್ಣಪ್ಪ ನವರ ಚಿತ್ರ... ಮುಂಗಾರು ಮತ್ತೆ ಬರಲು ಈ ಕಥೆಯೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ..ಶ್ರೀನಗರ ಕಿಟ್ಟಿ ಹಾಗು ತನ್ನ ಹನ್ನೋಂದು ಮಂದಿ ಗೆಳೆಯರ ಕತೆ ಈ ರೀಲ್ನಲ್ಲಿ....ನಾರಾಯಣ ಮತ್ತು ತನ್ನ ಹನ್ನೋಂದು ಮಂದಿ ಗೆಳೆಯರ ಕಥೆ ರಿಯಲ್ನಲಲ್ಲಿ?...  ನಿಜಕ್ಕು...ಕಲಿಯದವರು,ಕಲಿತವರು,ಜೀವನದಲ್ಲಿ ಗೆದ್ದವರು,ಸೋತವರು ಎಲ್ಲರಿಗೂಬಾಂಬೆ ಎಂಬ ಮಾಯೆ ತನ್ನ ಕೈ ಚಾಚಿ ತಬ್ಬಿಕೊಲತ್ತಾಳೆ.ನಾರಾಯಣ್ ಅವರ ಜೀವನದಲ್ಲಿ ಆದದ್ದು ಅದೆ..ಹೊಟ್ಟೆ ಹೊರೆಯುವುದಕ್ಕಾಗಿ ಮಾಯಾಕೂಪದ ನಗರಿಗೆ ಪಾದ ಬೆಳೆಸಿದ ಅವರಿಗೆ ಮೋಸವಾಗಲಿಲ್ಲ.. ಯಾಕೆಂದರೆ ಬಾಂಬೆ ಯಾವತ್ತು ಯಾರಿಗೂ ಮೋಸಮಾಡುವುದಿಲ್ಲ ತುತ್ತು ಅನ್ನಕ್ಕೆ ಅಲ್ಲಿ ಎಂದೂ ಭರವಿಲ್ಲ. ಆದರೆ ಭದ್ರತೆ ಬಗ್ಗೆ ಅಲ್ಲಿಯಾರೂ ಖಾತ್ರಿಕೊಡುವುದಿಲ್ಲ.ನಾವೆ ನೋಡಿಕೊಳ್ಳಬೆಕು...ನಾರಾಯಣ ಹಾಗೂ ಅವರ ಹನ್ನೂಂದು ಮಂದಿ ಗೆಳೆಯರಿಗೆ ಹಡಗಿನಲ್ಲಿ ಕೆಲಸ ಸಿಕ್ಕಿತು...ಆದರೆ ಅವರ ಜೀವನದ ಹಡಗು ವಿರುದ್ದ ದಿಕ್ಕಿಗೆ ತಿರುಗಿತು..ಹಡಗು ಭಾರತೀಯ ಗಡಿ ದಾಟಿ ಪಾಕಿಸ್ತಾನದ ಬಾಗಿಲಿನಲ್ಲಿ ನಿಂತಿತ್ತು...ಮುಂದೆ 24 ವರ್ಷಗಳ ಕತ್ತಲ ಕೋಣೆಯ ಶಿಕ್ಷೆ ಜಾರಿ...ಅದರೆ ಇಷ್ಟಾದರೂ ಭಾರತದ ಪ್ರಧಾನಿಯಾಗಿದ್ದ.ಪ್ರಧಾನಿಯಾದ ಯಾರಿಗೂ ಈ ವಿಷಯ ಗಮನಕ್ಕೆ ಬರಲಿಲ್ಲ..ಇದೆ ಈ ಚಿತ್ರದ ಸಾರ.. ಹಾಗಂತ ನಿರ್ದೇಶಕ ದ್ವಾರ್ಕಿ ಅವರ ಶ್ರಮ ಕಥೆ ಕಟ್ಟುವಲ್ಲಿ ನಿಜವಾಗಿಯೂ ಇದೆ.ಚಿತ್ರಕ್ಕೋಂದು ಪ್ರೇಮ ಕಥೆ ನೀಡಿ ಸುಂದರ ಚಿತ್ರವಾಗಿಸಿದ್ದಾರೆ..!!! ನಾರಾಯಣ ಪಾಕ್ ಕಾಲಾಪಾನಿಗೆ ಹೊಗುವಾಗ ಅವರ ವರ್ಷ 24 ಬಿಡುಗಡೆಯಾದಾಗ..48..ಯೌವ್ವನ ಕತ್ತಲ ಕೋಣೆಯಲ್ಲಿ ನಶಿಸಿ ಹೊಗಿತ್ತು....
ಕಥೆ ಇರಬೇಕು ಮನಸ್ಸಿಗೆ ಮುಟ್ಟುವ ಹಾಗೆ... 
ಬೆಂಗಳೂರೆಂದರೆ... ಸುಮ್ಮನೆ ಸರಿದು ಹೋಗುವ ಮೊಡವಲ್ಲ...ಇಲ್ಲಿನ ಗಲ್ಲಿ ಗಲ್ಲಿ ಜನರ ನಡುವೆ ಒಂದು ಕಥೆ ಇರುತ್ತದೆ. ಆ ಕಥೆ ಮಾತ್ರ ಸಿನಿಮಾವಾಗುತ್ತದೆ ಎಂಬ ಕಾಲವಿತ್ತು... ಹೌದು....ಹಿಂದೊಂದು ಕಾಲ ಹಾಗೆಯೆ ಇತ್ತು...ಯಾಕೆಂದರೆ ಆಗ ಗಾಂದಿನಗರ ಎಂಬ ಸಿನಿಮಾ ಲೋಕ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿತ್ತು..ಯಾವತ್ತು ಕಥೆ ನಮ್ಮ ಸುಪ್ತ ಮನಸ್ಸಿಗೆ ಇಷ್ಟವಾಗಬೇಕು...ಹಾಗೆ ಅಂತಹ ಕಥೆಯನ್ನು ಕ್ಯಾಮೆರಾ ಕಣ್ಣಿನಲ್ಲಿ ತೋರಿಸುವ ಕಲೆ ಇರಬೇಕು..

Sunday, August 8, 2010

ಅವನೆಂಬ ನಿಗೂಢವೂ... ಆತನ ಸಿನಿಮಾಗಳೆಂಬ ಗುಂಗೀ ಹುಳವೂ!




ಬಹುಶಃ ಆತನೊಬ್ಬನೇ ಇರಬೇಕು!
 45 ವರ್ಷದ ಚಿತ್ರ ಜೀವನದ ಇತಿಹಾಸದಲ್ಲಿ ಆತನ ಗಮನ ಸಸ್ಪೆನ್ಸ್ ಥ್ರಿಲ್ಲರ್‌ ಬಿಟ್ಟರೆ ಬೇರೆ ಯಾವ ಪ್ರಕಾರಗಳತ್ತಲೇ ಹರಿದಿಲ್ಲ... ಲವ್‌ಸ್ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್‌ ಯಾವುದಾದರೂ ಸರಿ ಅಲ್ಲೊಂದು ಸಸ್ಪೆನ್ಸ್ ನೀಡದಿದ್ದರೆ ಅದು ಆತನ ಮಟ್ಟಿಗೆ ಚಿತ್ರವೆ ಅಲ್ಲ....
  
 ‘ಜನರು ಚಿತ್ರ ನೋಡಬೇಕಾದರೆ ಅವರಿಗೆ ಚಿತ್ರಮಂದಿರದ ಕುರ್ಚಿಯಲ್ಲಿ ಒಂದು ನಿಮಿಷವೂ ಬಿಡದೆ ಕೂರುವಂತೆ ಮಾಡುವ ತಾಕತ್ತು ಚಿತ್ರದಲ್ಲಿ ಇರಬೇಕು. ಅದು ಸಸ್ಪೆನ್ಸ್ ಚಿತ್ರಗಳಿಂದ ಮಾತ್ರ ಸಾಧ್ಯ’ಅನ್ನುತ್ತಾನೆ,ಆಲ್‌ಫ್ರೆಡ್‌ ಹಿಚ್‌ಕಾಕ್‌
ಕೌತುಕ,ಹಾಸ್ಯ,ಕಾಮ ಈ ಮೂರು ವಿಷಯಗಳು ಅತನ ಚಿತ್ರದ ಕಥಾವಸ್ತು. 45ವರ್ಷಗಳವರೆಗೆ, 50ಕ್ಕಿಂತ ಹೆಚ್ಚು ಚಿತ್ರಕಥೆಗಳು ಈ ಮೂರು ಕಥಾವಸ್ತುವಿನ ಮೇಲೆ ಆತನ ತಲೆಯಲ್ಲಿ ಮೂಡಿದ್ದು ಆಶ್ಚರ್ಯವೇ ಸರಿ...
ಬಾಲ್ಯ
ಆಲ್‌ಫ್ರೆಡ್‌ ಜೋಸೆಫ್‌ ಹಿಚ್‌ಕಾಕ್‌..ಇದೆ ಆಗಸ್ಟ್ 13ಕ್ಕೆ ಅತನ 111ನೆ ವರ್ಷದ ಹುಟ್ಟುಹಬ್ಬ.1899 ರಲ್ಲಿ ಇಂಗ್ಲೆಂಡ್‌ನ ಲೆಯ್‌ಟಾನ್‌ಸ್ಟೀನ್‌ ಊರಿನ ಅಪ್ಪಟ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ.ಲಂಡನ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದಾಗ ಅತನ ಕಣ್ಣಲ್ಲಿ ಚಿತ್ರರಂಗ ಹೊಕ್ಕುವ ಮಿಂಚು ಸುಳಿದಾಡಿತ್ತು.
 ಅದಕ್ಕಾಗಿ ಅತ ಪ್ಲೇಯರ್‌‌ ಲಾಸ್ಕಿ ಸ್ಟುಡಿಯೋದಲ್ಲಿ ಚಿತ್ರಗಳ ಟೈಟಲ್‌ ಕಾರ್ಡ್‌ ಹಾಗೂ ಮೂಕಿ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಮಾಡುತ್ತಾ ತನ್ನ ಚಿತ್ರ ಜೀವನ ಆರಂಭಿಸಿದ..
 ಅಲ್ಲಿ ಆತ, ಕಲಾನಿರ್ದೇಶನ,ಚಿತ್ರಕಥೆ ರಚನೆ,ಎಡಿಟಿಂಗ್‌ನ ಒಳಗೂ ಹೊರಗೂ ಅರಿತುಕೊಂಡು, 1922ರಲ್ಲಿ ಸಹಾಯಕ ನಿರ್ದೇಶಕನಾಗುತ್ತಾನೆ. ಅದೇ ವರ್ಷ ಮಿಸೆಸ್‌.ಪೀಬಾಡಿ ಚಿತ್ರ ನಿರ್ದೇಶಿಸಿದ.ಆದರೆ ಆತನ ನಿಧನದ ನಂತರವೂ ಆ ಚಿತ್ರ ಬಿಡುಗಡೆಯಾಗಲೇ ಇಲ್ಲ.ನಂತರ 1925ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮಾಡಿದ ವೊದಲ ಚಿತ್ರ ದಿ ಪ್ಲೇಶರ್‌ ರ್ಗಾಡನ್‌. ಇದು ಮೂಕಿ ಚಿತ್ರವಾಗಿತ್ತು.1929ರಲ್ಲಿ ಈತನ ವೊದಲ ವಾಕ್‌ ಚಿತ್ರ ಬ್ಲಾಕ್‌ಮೇಲ್‌ ಬಿಡುಗಡೆಯಾಗುವ ಸಮಯದಲ್ಲಿ ದೊಡ್ಡ ಪರದೆಯ ಮೇಲೆ ಚಿತ್ರ ಬರುವುದೆಂದರೆ ವಿಸ್ಮಯ ಎನ್ನುವ ಕಾಲವಾಗಿತ್ತು. ಅಂತದ್ದರಲ್ಲಿ....ಚಿತ್ರಗಳು ಮಾತನಾಡುತ್ತವೆ ಎಂದರೆ.... ದೊಡ್ಡ ಪರದೆಯ ಮೇಲೆ ತನ್ನ ಕಲ್ಪನೆಯ ಚಿತ್ರಗಳು ಮಾತನಾಡುವುದನ್ನು ನೋಡಿ ಒಂದು ಕ್ಷಣ ಆತನೇ ದಿಗ್ಬ್ರಾಂತನಾಗಿದ್ದ...
   1934ರಲ್ಲಿ ಮೆನ್‌ ವು ನೊ ಟು ಮಚ್‌ ಚಿತ್ರ ಆತನಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು.ಕೌಟುಂಬಿಕ ಸಂಬಂಧಗಳ ಬಗ್ಗೆ ತನಿಖೆ ನಡೆಸುವ ಸಸ್ಪೆನ್ಸ್ ಚಿತ್ರದ ಮೂಲಕ ಚಿತ್ರ ಜನರ ಬಳಿ ಸೇರಿತ್ತು....
ತನ್ನ ಕಣ್ಣಲ್ಲಿ ಅರಳುವ ಚಿತ್ರಗಳನ್ನೆ ಯಥಾವತ್ತಾಗಿ ಕ್ಯಾಮೆರಾ ಕಣ್ಣಿನಲ್ಲೂ ತೋರಿಸುವ ಚಾಕಚಕ್ಯತೆ ಆತನಲ್ಲಿತ್ತು.ಅದಕ್ಕಾಗಿಯೇ ಆತ ಯಶಸ್ವಿಯಾದ...
ದಿ 39 ಸ್ಟೆಪ್ಸ್(1935),ಸೀಕ್ರೇಟ್‌ ಎಜೆಂಟ್‌(1936)ಹೀಗೆ ಚಿತ್ರಗಳು ವರ್ಷಕ್ಕೂಂದರಂತೆ ಬರುತ್ತಿತ್ತು.ಜಮೈಕಾ ಇನ್‌(1939) ಆತನ ಕೊನೆಯ ಬ್ರಿಟಿಷ್‌ ಚಿತ್ರ...
ತಾನೂ ಕೇವಲ ಬ್ರಿಟಿಷ್‌ ಚಿತ್ರಗಳಿಗೆ ಸೀಮಿತವಾಗಬಾರದು ಎಂದುಕೊಂಡವನೇ ಡಾಪ್ನೇ ಡು ಮೋರಿಯರ್‌ಅವರ ಕಾದಂಬರಿಯನ್ನು 1940ರಲ್ಲಿ ರಿಬೆಕ್ಕಾ ಚಿತ್ರ ಮಾಡಿ ಅದರಲ್ಲಿ ಯಶಸ್ವಿಯಾದ.

   ಪ್ರಮುಖ ಚಿತ್ರಗಳು ಇಡಿ ಹಾಲಿವುಡ್‌ ಚಿತ್ರಜಗತ್ತಿನಲ್ಲಿ ಹಿಚ್‌ಕಾಕ್‌ ಚಿತ್ರಗಳೆಂದರೆ ಜನರನ್ನು ಸೆಳೆಯುವಂತೆ ಮಾಡಿದ್ದು 1941ರಲ್ಲಿ ಬಂದ ಸಸ್ಪೀಶಿಯನ್‌ ಚಿತ್ರ.ತನ್ನ ಗಂಡ ಒಬ್ಬ ಕೊಲೆಗಾರ ಎಂದು ಚಿಂತಿಸುವ ಮಹಿಳೆಯ ಕಥೆ ಆಧಾರಿತ ಚಿತ್ರವನ್ನು ಕೌಟುಂಬಿಕ ಚೌಕಟ್ಟಿನೊಳಗೆ ಅದ್ಭುತವಾಗಿ ಆತ ಚಿತ್ರಿಸಿದ್ದ.ಹಾಲಿವುಡ್‌ನಲ್ಲಿ ಹಿಚ್‌ಕಾಕ್‌ ಯುಗ ಆರಂಭವಾಗಿದ್ದು ಈ ಚಿತ್ರದ ಮೂಲಕ.
 ಆತನ ಚಿತ್ರಗಳಲ್ಲೆ ಮತ್ತೆ ಮತ್ತೆ ಮನಸ್ಸಿಗೆ ಕಾಡುವ ಚಿತ್ರ 1943ರ ಶಾಡೋ ಆಫ್‌ ಡೌಟ್‌. ಕೊಲೆಯಾದ ತನ್ನ ಅಂಕಲ್‌ನನ್ನು ಅಮೇರಿಕಾದ ಮಧ್ಯಮವರ್ಗದ ಜನರಲ್ಲಿ ಕಾಣುವ ಅಮಾಯಕ ಯುವತಿಯ ಕಥೆ ಇದರಲ್ಲಿ ಆಕೆಯ ಪಾತ್ರ ಪೋಷಣೆ ಅದ್ಭುತವಾಗಿ ದಾಖಲಾಗಿತ್ತು.
ಹಿಚ್‌ಕಾಕ್‌ನ ಪರ್ವಕಾಲ
   ಈತ ಈಗಲೂ ನೆನಪಾಗುತ್ತಾನೆ ...1950 ರಿಂದ 60ರ ಕಾಲ ಹಿಚ್‌ಕಾಕ್‌ ಚಿತ್ರಗಳ ಪರ್ವಕಾಲ. ಒಂದರ ಹಿಂದೆ ಒಂದರಂತೆ ನೆನಪಿಸಿಕೊಳ್ಳುವ,ಕಾಡುವ ಚಿತ್ರಗಳನ್ನು ಕೊಟ್ಟಿದ್ದು ಅತ ಈ ಕಾಲದಲ್ಲಿ ಐ ಕಾನ್‌ಫೆಸ್‌(1953),ಹೆಸರಲ್ಲೆ ಕ್ರಾಂತಿ ಮಾಡಿದ ಚಿತ್ರ ಡಯಲ್‌ ಎಂ ಫಾರ್‌ ಮರ್ಡ್‌ರ್‌(1954),ಟು ಕ್ಯಾಚ್‌ ಎ ಥೀಫ್‌(1955),ಮೆನ್‌ ವು ನೊ ಟು ಮಚ್‌ ಚಿತ್ರದ ರೀಮೇಕ್‌(1956),ಹಾಸ್ಯಾತ್ಮಕ ಸಸ್ಪೆನ್ಸ್ ಚಿತ್ರ ದಿ ಟ್ರಬಲ್‌ ವಿತ್‌ ಹ್ಯಾರಿ(1955),ಡಾಕೊಡ್ರಾಮಾ(1956) ಎಲ್ಲವೂ ಆತನಿಗೆ ಹೆಸರು ತಂದುಕೊಟ್ಟಿತು.
ಕೊನೆಗೆ ನಿರ್ಮಾಪಕ
ವರ್ಷಕ್ಕೆ ಒಂದು ಎರಡರಂತೆ ಹಿಚಕಾಕ್‌ ಚಿತ್ರ ಮಾಡುತ್ತಲೆ ಇದ್ದ ಅತನ 1969 ರಲ್ಲಿ ಬಿಡುಗಡೆಯಾದ ಟೋಪೆಜ್‌ ಚಿತ್ರದ ಸೋಲು ಆತನಿಗೆ ಅರಗಿಸಿಕೊಳ್ಳಲಾಗಲಿಲ್ಲ.ಕೊನೆಗೆ ಆತನೆ ಚಿತ್ರ ನಿರ್ಮಿಸುವ ನಿರ್ಧಾರಕ್ಕೆ ಬಂದು 1972ರಲ್ಲಿ ಫ್ರೇನ್‌ಜಿ ಚಿತ್ರ ಮಾಡಿದ ಅದರ ಚಿತ್ರಕಥೆ ತಯಾರಿಸಿ ಚಿತ್ರ ಬಿಡುಗಡೆಯಾಗಲು ತೆಗೆದುಕೊಂಡಿದ್ದು ಬರೋಬ್ಬರಿ ನಾಲ್ಕು ವರ್ಷ....
ಒಬ್ಬ ಅಮಾಯಕ ಮನುಷ್ಯ ಸಿರಿಯಲ್‌ ಕಿಲ್ಲರ್‌ ಆಗುವ ಕಥಾಹಂದರವಿದ್ದ ಈ ಚಿತ್ರ ಹಾಲಿವುಡ್‌ ನಲ್ಲಿ ಮತ್ತೆ ಹಿಚ್‌ಕಾಕ್‌ ಯುಗ ಮರಳಿಸಿತ್ತು.. 1976ರಲ್ಲಿ ಬಂದ ಫ್ಯಾಮಿಲಿ ಪ್ಲಾಟ್‌ ಈ ಸಸ್ಪೆನ್‌‌ಸ ಥಿಲ್ಲರ್‌ ಹರಿಕಾರನ ಕೊನೆಯ ಚಿತ್ರ...
ಕೊನೆಗಾಲ
  50ಕ್ಕಿಂತ ಹೆಚ್ಚು ತನ್ನ ಮೂರು ಕಥಾವಸ್ತುವಿನ ಹಂದರದಿಂದ ಹೊರಬೀಳದೆ ಇದ್ದರೂ, ತನ್ನ ಚಿತ್ರದಲ್ಲಿ ಎಲ್ಲೂ ಜನರಿಗೆ ಬೇಸರವಾಗದಂತೆ ಚಿತ್ರಮಂದಿರದ ಕುರ್ಚಿಯಲ್ಲಿ ಭದ್ರವಾಗಿ ಕೂರುವಂತೆ ಮಾಡುತ್ತಿದ್ದ್ದ... ಹೀಗೆ ಹೇಳುವ ಬದಲು ಆತನ ಚಿತ್ರವೆಂದರೆ ಜನ ಕುರ್ಚಿ ಬಿಟ್ಟು ಎಳುತ್ತಿರಲ್ಲಿಲ್ಲ ಎನ್ನುವುದೇ ಸಮಂಜಸವಾಗುತ್ತದೆ.ತನ್ನ ಕೊನೆಗಾಲದಲ್ಲಿ ಹೃದಯದ ತೊಂದರೆ ಹಾಗೂ ಲಿವರ್‌ ಫೇಲ್ಯೂರ್‌ ನಿಂದ ವೀಪರೀತ ಸಮಸ್ಯೆಗೊಳಗಾಗಿದ್ದ ಹಿಚ್‌ಕಾಕ್‌ ಎಂಬ ಮಹಾನ್‌ ಸಸ್ಪೆನ್ಸ್ ಥಿಲ್ಲರ್‌ ದೈತ್ಯ ಎಪ್ರಿಲ್‌ 28ರಂದು ಜಗತ್ತಿನಿಂದ ಮರೆಯಾದ.
ಕೊನೆಹನಿ
   ವಿಶ್ವ ಚಿತ್ರರಂಗದ ವೊದಲ ಚಿತ್ರ ದಿ ಗ್ರೇಟ್‌ ಟ್ರೈನ್‌ ರಾಬರಿಯಿಂದ ಇತ್ತಿಚೇಗೆ ಬಿಡುಗಡೆಯಾದ ಚೆಲುವೆಯೇ ನಿನ್ನ ನೋಡಲು...ಚಿತ್ರದವರೆಗೆ ಸಿನಿಮಾ ಸಮುದ್ರದ ಇತಿಹಾಸ ಬಹಳ ದೊಡ್ಡದು.
ಇಲ್ಲಿ ಬಂದು ಜೀವನ ಕಂಡುಕೊಂಡವರಿದ್ದಾರೆ ಹಾಗೇ ಕಳೆದುಕೊಂಡವರು ಇದ್ದಾರೆ. ಚಿತ್ರಗಳಲ್ಲಿ ಹೊಸ ಹೊಸ ಪ್ರಕಾರಗಳನ್ನು ಹುಡುಕುವ ನಿರ್ದೇಶಕರ ನಡುವೆ ಹಿಚ್‌ಕಾಕ್‌ ನಂತವರೂ ಬಲು ಅಪರೂಪವಾಗುತ್ತಾರೆ.