"ಪತ್ರಿಕೋದ್ಯಮ ಒಂದು ಅವಸರದ ಸಾಹಿತ್ಯ" ವೆನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಎನೇ ಆಗಲಿ ಅವಸರದಲ್ಲಿಯೇ ನಡೆಯಬೇಕು ಅಂದರೆ ಮಾತ್ರ ಯಶಸ್ಸು ಸಾಧ್ಯ. ಹಾಗೆಯೆ ವಿಶ್ವ ತುಳು ಸಮ್ಮೇಳನದಲ್ಲಿ ಎಲ್ಲಾ ಪತ್ರಿಕಾಮಿತ್ರರು ತಮ್ಮ-ತಮ್ಮ ಪತ್ರಿಕೆಗೆ ಸುದ್ದಿ ನೀಡುವ ಬ್ಯುಸಿಯಲ್ಲಿದ್ದರೆ.. ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಅವರಿಗಿಂತ ನಾವೇನು ಕಮ್ಮಿ.ಎಂದುಕೊಂಡು ಅವಸರದಲ್ಲೇ ಬಿಡುಗಡೆ ಮಾಡಿದ ನೇಸರ ಪತ್ರಿಕೆ ಬಗ್ಗೆ ಚಿಕ್ಕ ಲೇಖನ.....
"ನೇಸರ-ನವ್ಯ ಜ್ಞಾನದ ಹರಿಕಾರ" ಎಂಬ ಅಡಿಬರಹದೊಂದಿಗೆ ಕಳೆದ ವರ್ಷದಿಂದ ಹೊರಬರುತ್ತಿರುವ ನಾಲ್ಕು ಪುಟದ ಪ್ರಾಯೋಗಿಕ ಪತ್ರಿಕೆ ಇದು. ಸಂಪೂರ್ಣವಾಗಿ ವಿದ್ಯಾರ್ಥಿಗಳೆ ನಿರ್ವಹಿಸುತ್ತಿರುವ ಈ ಪತ್ರಿಕೆಯ ಖರ್ಚು- ವೆಚ್ಚ ವೆಲ್ಲ ಅವರದೆ ಎಂದರೆ ಆಶ್ಚರ್ಯವಾಗದೆ ಇರದು. ಪ್ರತಿ ವಿಶೇಷ ಸಂರ್ಧಭ ಗಳ ಸಮಯದಲ್ಲಿ ವಿಶೇಷ ಸಂಚಿಕೆ ಹೊರತರುತ್ತಾರೆ, ಒಂದೊಂದು ಸಂಚಿಕೆಗೂ ಅದರ ಸಂಪಾದಕರು ಬೇರೆ-ಬೇರೆ.ಸಂಪಾದಕ ಮಂಡಳಿಯಲ್ಲಿರುವ ಎಲ್ಲಾ ಸದಸ್ಯರು ಸಂಪಾದಕ ಎನ್ನುವ ಪಟ್ಟವೆರುತ್ತಾರೆ.
ಉಜಿರೆಯಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನದ ವಿಷಯವನ್ನಾಗಿಸಿಕೊಂಡು ಹೊರಬಂದಿರುವ ನೇಸರದ ವಿಶೇಷ ಸಂಚಿಕೆ ಆ ವಿದ್ಯಾರ್ಥಿಗಳ ಪತ್ರಿಕೋದ್ಯಮ ಆಸಕ್ತಿಗೆ ಸಾಕ್ಷಿ.ಇದನು ಉದಯವಾಣಿಯಲ್ಲಿ ಪತ್ರಕರ್ತರಾಗಿ ಬಹುದೊಡ್ಡ ಹೆಸರು ಗಳಿಸಿರುವ ಮನೋಹರ ಪ್ರಸಾದ್ ಬಿಡುಗಡೆಗೊಳಿಸಿದರು. ಇಡಿ ಪತ್ರಕರ್ತ ಸಮೂಹವೆ ಅಲ್ಲಿ ನೆರೆದಿತ್ತು. ಇದರ ಸಂಪೂರ್ಣ ನೇತೃತ್ವ ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಗಳದ್ದು.. ಒಟ್ಟಾರೆ ಯಾಗಿ ವಿಶ್ವ ತುಳು ಸಮ್ಮೇಳನದಲ್ಲಿ ಮಿನುಗಿತು. ಎಸ್.ಡಿ.ಎಂ ಕಾಲೇಜಿನ "ನೇಸರ"
ನಾನು ಒಬ್ಬ ತುಳು ಮಾತಾಡುವವನು ಮಂಗಳೂರು ತುಳು ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ನಾನು ಸಹ ತುಳು ಕಲಿಕೆ ಬಗ್ಗೆ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ
ReplyDeleteraghupramee@gmail.com