Saturday, December 12, 2009

ತುಳು ಸಮ್ಮೇಳನದಲ್ಲಿ ಮಿನುಗಿದ "ನೇಸರ"



"ಪತ್ರಿಕೋದ್ಯಮ ಒಂದು ಅವಸರದ ಸಾಹಿತ್ಯ" ವೆನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಎನೇ ಆಗಲಿ ಅವಸರದಲ್ಲಿಯೇ ನಡೆಯಬೇಕು ಅಂದರೆ ಮಾತ್ರ ಯಶಸ್ಸು ಸಾಧ್ಯ. ಹಾಗೆಯೆ ವಿಶ್ವ ತುಳು ಸಮ್ಮೇಳನದಲ್ಲಿ ಎಲ್ಲಾ ಪತ್ರಿಕಾಮಿತ್ರರು ತಮ್ಮ-ತಮ್ಮ ಪತ್ರಿಕೆಗೆ ಸುದ್ದಿ ನೀಡುವ ಬ್ಯುಸಿಯಲ್ಲಿದ್ದರೆ.. ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಅವರಿಗಿಂತ ನಾವೇನು ಕಮ್ಮಿ.ಎಂದುಕೊಂಡು ಅವಸರದಲ್ಲೇ ಬಿಡುಗಡೆ ಮಾಡಿದ ನೇಸರ ಪತ್ರಿಕೆ ಬಗ್ಗೆ ಚಿಕ್ಕ ಲೇಖನ.....
"ನೇಸರ-ನವ್ಯ ಜ್ಞಾನದ ಹರಿಕಾರ" ಎಂಬ ಅಡಿಬರಹದೊಂದಿಗೆ ಕಳೆದ ವರ್ಷದಿಂದ ಹೊರಬರುತ್ತಿರುವ ನಾಲ್ಕು ಪುಟದ ಪ್ರಾಯೋಗಿಕ ಪತ್ರಿಕೆ ಇದು. ಸಂಪೂರ್ಣವಾಗಿ ವಿದ್ಯಾರ್ಥಿಗಳೆ ನಿರ್ವಹಿಸುತ್ತಿರುವ ಈ ಪತ್ರಿಕೆಯ ಖರ್ಚು- ವೆಚ್ಚ ವೆಲ್ಲ ಅವರದೆ ಎಂದರೆ ಆಶ್ಚರ್ಯವಾಗದೆ ಇರದು. ಪ್ರತಿ ವಿಶೇಷ ಸಂರ್ಧಭ ಗಳ ಸಮಯದಲ್ಲಿ ವಿಶೇಷ ಸಂಚಿಕೆ ಹೊರತರುತ್ತಾರೆ, ಒಂದೊಂದು ಸಂಚಿಕೆಗೂ ಅದರ ಸಂಪಾದಕರು ಬೇರೆ-ಬೇರೆ.ಸಂಪಾದಕ ಮಂಡಳಿಯಲ್ಲಿರುವ ಎಲ್ಲಾ ಸದಸ್ಯರು ಸಂಪಾದಕ ಎನ್ನುವ ಪಟ್ಟವೆರುತ್ತಾರೆ.
ಉಜಿರೆಯಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನದ ವಿಷಯವನ್ನಾಗಿಸಿಕೊಂಡು ಹೊರಬಂದಿರುವ ನೇಸರದ ವಿಶೇಷ ಸಂಚಿಕೆ ಆ ವಿದ್ಯಾರ್ಥಿಗಳ ಪತ್ರಿಕೋದ್ಯಮ ಆಸಕ್ತಿಗೆ ಸಾಕ್ಷಿ.ಇದನು ಉದಯವಾಣಿಯಲ್ಲಿ ಪತ್ರಕರ್ತರಾಗಿ ಬಹುದೊಡ್ಡ ಹೆಸರು ಗಳಿಸಿರುವ ಮನೋಹರ ಪ್ರಸಾದ್ ಬಿಡುಗಡೆಗೊಳಿಸಿದರು. ಇಡಿ ಪತ್ರಕರ್ತ ಸಮೂಹವೆ ಅಲ್ಲಿ ನೆರೆದಿತ್ತು. ಇದರ ಸಂಪೂರ್ಣ ನೇತೃತ್ವ ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಗಳದ್ದು.. ಒಟ್ಟಾರೆ ಯಾಗಿ ವಿಶ್ವ ತುಳು ಸಮ್ಮೇಳನದಲ್ಲಿ ಮಿನುಗಿತು. ಎಸ್.ಡಿ.ಎಂ ಕಾಲೇಜಿನ "ನೇಸರ"

Friday, December 11, 2009

ವಿತಂಡ ....ವಾದ ಕಂದಕ ....


ಹಾಗೆನಿಸುವ ಮೊದಲೆನೆ ಅಲ್ಲೊಂದು ಕಂದಕ ಸೃಷ್ಟಿಯಾಗಿತ್ತು. ಅದು ಎರಡು ಸಂಸಾರಗಳ ನಡುವಿನ ಕಂದಕವಾಗಿರಲಿಲ್ಲ. ಬದಲಾಗಿ ಅದೊಂದು ರೀತಿಯಲ್ಲಿ ದಂಗೆಯನ್ನೆಬ್ಬಿಸುವಂತಹ ಜನಾಂಗಗಳ ನಡುವಿನ ಕಂದಕವಾಗಿತ್ತು.
ಅಲ್ಲಿ ಏನು ನಡೆಯಬಾರದೋ ಅದು ನಡೆದು ಹೋಗಿತ್ತು. ಅದನ್ನು ಯಾರು ಮಾಡಬಾರದಿತ್ತೋ ಅವರೇ ಮುಂದೆ ಬಿದ್ದು ಬಲು ಆಸ್ಥೆಯಿಂದ ಮಾಡಿದ್ದರು. ಹೀಗೆ ಪರಿಸ್ಥಿತಿ ಕೈ ಮೀರಿ ಹೋಗಿರುವಾಗ ಜನಸಾಮಾನ್ಯರ ಒಳ್ಳೆಯ ಮನಸ್ಸು ಕುದ್ದು ಹೋಗಿತ್ತು.
ಅಲ್ಲಿಯೂ ಅಷ್ಟೇ ಆ ಇತಿಹಾಸದಲ್ಲೂ ಇಂಥಹ ಅನೇಕ ನಡೆಬಾರದ ಘಟನೆಗಳು ಆಗಬಾರದವರ ಕೈಯಲ್ಲಿ ಆಗಿ ಹೋಗಿದ್ದವು.
ಇತಿಹಾಸ ಮರುಕಳಿಸುತ್ತದೆ ಅಂತಾರಲ್ಲ ಅದು ಸತ್ಯ. ಅದೇ ಇಲ್ಲಿ ಪುನರಪಿ ನಡೆದು ಹೋಗಿದ್ದು.

Thursday, December 10, 2009

ಬೇಕು ಇಂತದ್ದೊಂದು ಸಮ್ಮೇಳನ ನಾಡು-ನುಡಿಯ ರಕ್ಷಣೆಗೆ...

ಇನ್ನು ಹೆಚ್ಚೇನು ದಿನಗಳಿಲ್ಲ. ನಮ್ಮ ನಾಡು-ನುಡಿ ರಕ್ಷಣೆಗಾಗಿ ನಾವುಗಳು ಮುಂದೆ ತುಂಬಾ ಕಷ್ಟಪಡಬೇಕು. ಅತ್ತ ಬೆಳಗಾವಿ ಮಹರಾಷ್ಟ್ರಕ್ಕೆ ಇನ್ನು ಕೆಲವೆ ದಿನಗಳಲ್ಲಿ ಸೇರಬಹುದು. ಕಾಸರಗೋಡುನ್ನು ಕೇರಳದವರು ಬೇಕೆಂದು ಬಡಿದುಕೊಳ್ಳತ್ತಿದ್ದಾರೆ.ತಮಿಳುನಾಡು ಮತ್ತು ಆಂಧ್ರಪ್ರದೇಶದ್ದು ಇದೆ ಕತೆ. ಇಂಥ ಸಂದರ್ಭ ದಲ್ಲಿ ನಡೆಸುವ ಸಾಹಿತ್ಯಸಮ್ಮೇಳನಗಳು ಬರಿ ಗಲಾಟೆ ಕೇಂದ್ರ ಗಳಾಗಿವೆ. ಈ ಸಂದರ್ಭದಲ್ಲಿ ಕನ್ನಡಿಗರ ಮನ ಗೆದ್ದು ಆರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ಬಗ್ಗೆ ವಿಶೇಷ ಲೇಖನ.
೨೦೦೯ ರ ನುಡಿಸಿರಿಯನ್ನು ಉದ್ಘಾಟಿಸಿದವರು ಸಾಹಿತಿ. ಚಿಂತಕ ಹಂ,ಪ,ನಾಗರಜಯ್ಯ ಇವರು ಮಾತನಾಡಿ ವ್ಯಕ್ತಿಗಳಿಗೆ ಮುಪ್ಪು ಮರೆವು ಮರಣ ವಿದ್ದರೂ ಕನ್ನಡಕ್ಕಿಲ್ಲ.ಅದರ ಅಗಾಧ ಶಕ್ತಿಯ ಬೇರಿಗೆ ಎಲ್ಲರೂ ನೀರುಣಿಸಿದ ಕಾರಣ ಕನ್ನಡ ಸರ್ವ ಜನಾಂಗದ ಆಸ್ತಿ. ಹೀಗೆ ಕನ್ನಡಕ್ಕೆ ಜನರ ,ಸಾಹಿತಿಗಳ, ವಿಮರ್ಶಕರ ಕೊಡುಗೆಗಳಿಂದ ಈ ಭಾಷೆ ಈ ಮಟ್ಟಕ್ಕೆ ಬೆಳದಿದೆ. ನಿಜಕ್ಕೂ ನಮ್ಮ ನುಡಿ ರಕ್ಷಣೆಗಾಗಿ ನುಡಿಸಿರಿ ನೀಡುತ್ತಿರುವ ಕೊಡುಗೆ ಅಪಾರ. ಈ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳಲ್ಲಿ ನಡೆಯುವ ಕಾರ್‍ಯಕ್ರಮಗಳು ಕಣ್ಣಿಗೆ ಹಬ್ಬದೂಟ ಉಣಬಡಿಸುತ್ತವೆ. ಪ್ರಧಾನ ವೇದಿಕೇಯಾದ ರತ್ನಾಕರವರ್ಣಿ ವೇದಿಕೆಯಲ್ಲಿ ಬೆಳಗಿನಿಂದ ಕಾರ್‍ಯಕ್ರಮಗಳು ನಡೆದರೆ, ಇನ್ನು ಕು.ಶಿ. ಹರಿದಾಸ ಭಟ್ಟ ವೇದಿಕೆ, ಯಕ್ಷಮಂಟಪ, ಹಾಗೂ ಕೆ. ವಿ ಸುಬ್ಬಣ್ಣ ಬಯಲು ರಂಗ ಮಂದಿರ ಸಂಜೆಯಾಗುತ್ತಿದ್ದಂತೆ ಗರಿ ಬಿಚ್ಚಿಕೊಳ್ಳುತ್ತವೆ. ಪ್ರಧಾನ ವೇದಿಕೆಯ ವಿನ್ಯಾಸ ನಿಜಕ್ಕೂ ಗಮನಸೆಳೆಯುವಂತದ್ದು, ಹಾಗೆ ವೇದಿಕೆಯಲ್ಲಿ ಬೆಳಿಗ್ಗೆ ೮;೩೦ ರಿಂದ ಆರಂಭವಾಗುವ ಕಾರ್‍ಯಕ್ರಮಗಳು ರಾತ್ರಿ ೯;೦೦ ಗಂಟೆಯ ವರೆಗೂ ಅವಿರತವಾಗಿ ನಡೆಯುತ್ತದೆ. ಹೀಗೆ ಕಾರ್‍ಯಕ್ರಮಗಳು ನಡೆದರೂ ಎಲ್ಲೂ ಬೇಸರ ತರಿಸುವುದಿಲ್ಲ. ಇಲ್ಲಿ ಭಾವಲಹರಿ, ಕವಿಸಮಯ, ಕವಿನಮನ, ವಿಚಾರ ಗೋಷ್ಠಿ, ಕಥಾಸಮಯ ದಂತ ಹಲವು ಪ್ರಕಾರದ ಕಾರ್‍ಯಕ್ರಮಗಳು ಇಲ್ಲಿ ನಡೆಯುತ್ತವೆ. ಹಾಗೆ ಸಂಜೆ ಐದು ಗಂಟೆ ಗೆ ನಡೆಯುವ ಮಾತಿನ ಮಂಟಪ ಕಾರ್‍ಯಕ್ರಮದಲ್ಲಿ ನಾಡಿನ ಖ್ಯಾತ ಹಾಸ್ಯಗಾರರು ನಗಿಸುವ ಪರಿ ಅದ್ಭುತ..
ಭಾಷೆ ಸಾಹಿತ್ಯದ ವಿಚಾರ ಬಂದಾಗ ನುಡಿಸಿರಿಯಲ್ಲಿ ನಡೆಯುವ ಕಾರ್‍ಯಕ್ರಮಗಳು ಎಲ್ಲರಿಗೂ ಮಾದರಿ. ಈ ಸಂದರ್ಭದಲ್ಲಿ ನಡೆಯುವ ಪುಸ್ತಕ ಪ್ರದರ್ಶನ ಮತ್ತು ಮಾರಟದಲ್ಲಿ ನಾಡಿನ ಖ್ಯಾತ ಪ್ರಕಾಶನಗಳು ಇಲ್ಲಿಗೆ ಬರುತ್ತವೆ. ಈ ವರ್ಷ ಕಾಲೇಜಿನ ಎದುರಿಗೆ ಪ್ರದರ್ಶನಕ್ಕಿಟ್ಟಿರುವ ಚಿತ್ರಗಳು , ಅಕ್ವೆರಿಯಂಗಳು, ಕಾಲೇಜಿನ ಬಲಭಾಗ-ಎಡಭಾಗದಲ್ಲಿರುವ ಬೃಹತ್ ಯಕ್ಷಗಾನ ಪ್ರತಿಮೆಗಳು ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ನಿಜಕ್ಕೂ ಆಳ್ವಾಸ್ ನುಡಿಸಿರಿಯಲ್ಲಿ ಯಥೇಚ್ಛವಾಗಿ ಕಾಣ ಸಿಗುವುದು ಅಲ್ಲಿನ ವಿದ್ಯಾರ್ಥಿಗಳ ಶಿಸ್ತು. ಊಟದ ವ್ಯವಸ್ಥೆಯಲ್ಲಿ,ಸಹಾಯದಲ್ಲಿ, ನಗುಮುಖದ ಅವರ ಆದರ ಆದಿತ್ಯಗಳನ್ನು ಕಂಡಾಗ ಮನ ಖುಷಿಗೂಳ್ಳುತ್ತದೆ. ಕನ್ನಡ ಮನಸ್ಸು -ಸಮನ್ವಯದೆಡೆಗೆ ಎಂಬ ಪರಿಕಲ್ಪನೆ ಯಲ್ಲಿ ಆರಂಭವಾಗಿರುವ ಈ ವರ್ಷದ ನುಡಿಸಿರಿ ಯಶಸ್ವಿಯಗಿ ಆರಂಭವಾಗಿದೆ. ಇಂತದ್ದೂಂದು ಸಮ್ಮೇಳನ ನಾಡು -ನುಡಿಯ ರಕ್ಷಣೆಗೆ ನಿಜವಾಗಿಯೂ ಅಗತ್ಯವಿದೆ ಎಂದೆನಿಸುವುದಿಲ್ಲವೆ.

Friday, November 6, 2009

ಕಷ್ಟ ಪಡದೆ ಮನುಷ್ಯ ಜೀವನದಲ್ಲಿ ಮೇಲೆ ಬರಲಾರ ...........


"ನನ್ನ ಜೀವನದ ಕಷ್ಟ ಗಳು ,ಸಂಕಟಗಳು ,ದುಃಖಗಳು ನನ್ನಿಂದ ಕವಿತೆ ಬರೆಯುವಂತೆ ಮಾಡಿಸಿತು ,ಇಲ್ಲದಿದ್ದರೆ ಸಾಮಾನ್ಯ ಕಲ್ಲು ಕುಟಿಗನ ಮಗನಾಗಿದ್ದವನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ". ಆಳ್ವಾಸ್ ನುಡಿಸಿರಿಯ ಎರಡೆನೇ ದಿನದ ಕವಿಸಮಯದ ಕಾರ್ಯಕ್ರಮದಲ್ಲಿ ಕವಿ ಸತ್ಯಾನಂದ ಪಾತ್ರೋಟ ಈ ಮಾತನ್ನು ಹೇಳಿದಾಗ ಆ ಮಾತಿಗೆ ನನ್ನ ಯೋಚನೆ ಸೇರಿಸುವುದು ಅನಿವಾರ್ಯವಾಗಿತ್ತು.
ನಾವು ಕನ್ನಡ ಸಾಹಿತ್ಯದಲ್ಲಿ ಅಥವಾ ಬೇರೆ ಸಾಹಿತ್ಯ ಗಳಲ್ಲಿರುವ ಕವಿಗಳನ್ನು, ಅವರ ಹಿಂದಿನ ಇತಿಹಾಸ ಕೆದಕಿದಾಗ ಎಲ್ಲ ಕಡೆ ಇಂತ್ತದ್ದೊಂದು ಕಷ್ಟಗಳು ,ಸಂಕಟಗಳು ,ಒಂದುತುತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಕವಿಗಳು ಸಿಗುತ್ತಾರೆ."ಕಷ್ಟ ಪಡದೆ ಯಾವ ಮನುಷ್ಯನು ಜೀವನದಲ್ಲಿ ಮೇಲೆ ಬರಲಾರ" ಎಂಬ ತತ್ವ ವನ್ನು ನಂಬಿದವನು ನಾನು .ಆದರೆ ಎಲ್ಲ ಕಷ್ಟ ಗಳು ಕವಿಗಳಿಗೆ ಏಕೆ ಬರುತ್ತದೆಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ . ಹಾಗೇನು ನಾನು ಕವಿಗಳನ್ನು ತೆಗಳುತ್ತಿಲ್ಲ "ಒಂದು ಮಾತು ಹೇಳಬಲ್ಲೆ ನಾವೆಲ್ಲರೂ ಮಾತನಾಡಿ ನಮ್ಮ- ನಮ್ಮ ದುಃಖ ವನ್ನು ನಿಗಿಸಿಕೊಳ್ಳುತ್ತೇವೆ. ಆದರೆ ಸಾಹಿತಿಗಳು ,ಕವಿಗಳಿಗೆ ಅಕ್ಷರವೇ ಮಾತು ,ಅಕ್ಷರವಿಲ್ಲದೆ ಅವರಿಲ್ಲ . ಅದರಿಂದಲೇ ಅವರ ದುಃಖವನ್ನು ತೋಡಿಕೊಳ್ಳುತ್ತಾರೆ " ಇದಕ್ಕೆ ಉತ್ತಮ ಉದಾಹರಣೆಯಾಗಿ ದ.ರಾ. ಬೇಂದ್ರೆ ಸಿಗುತ್ತಾರೆ ಹುಟ್ಟಿನಿಂದ ಸಾಯುವವರೆಗೂ ಕಷ್ಟದಲ್ಲೇ ಬದುಕಿದವರು ಇವರು , ತನ್ನ ಮಗ ತೀರಿಹೋದಾಗ ಅವರ ಹೆಂಡತಿ ಅವರನ್ನೇ ನೋಡುತ್ತಿರುವುದನ್ನು ಗಮನಿಸಿ ಅಂತ ದುಃಖ ದಲ್ಲೂ "ನಿ ಹಿಂಗ ನೋಡ ಬ್ಯಾಡ ನನ್ನ " ಎಂದು ಗೀತೆ ರಚಿಸಿದವರು. ಕಷ್ಟ ಸಂಕಟ ಗಳು ಮನುಷ್ಯನನ್ನು ಪರಿಪಕ್ವ ನನ್ನಾಗಿಸುತ್ತದೆ . ಅವರ ಅನುಭವಗಳು ಅಕ್ಷರ ರೂಪ ಪಡೆದು ಕವನವಾಗಿ ಹುಟ್ಟುವುದೇ ರೋಚಕ . ಇಂತ ಕವಿ ಗಳಿಗೆ ನನ್ನ ಪ್ರಣಾಮಗಳು ..........

Saturday, October 3, 2009

ಸಂಜಯ್ ಅಂದ್ರೆ....ಇಂದಿರಾ ಗಾಂಧಿ ಮಗ ಅಲ್ವ.....


"ಇಂದಿರೆಯ ಮಗ ಸಂಜಯ" ನೆಹರು-ಇಂದಿರಾ ಗಾಂಧಿ -ಸಂಜಯ್ -ರಾಜೀವ್-ಸೋನಿಯಾ-ಮೇನಕಾ ಗಾಂಧಿ ವ್ಯಕ್ತಿತ್ವಗಳ ನಿರೂಪಣೆ .ಬೆಳೆಗೆರೆ ಹೇಳಿದ್ದಕ್ಕೆ ಭಿನ್ನವಾಗಿ ಹೇಳುವುದಾದರೆ ,ಆತ ಪುಂಡ ,ಒಳ್ಳೆಯ ವಿದ್ಯಾರ್ಥಿ ಅಲ್ಲವೇ ಅಲ್ಲ ,ರಾಜಕಾರಣ ತಿಳಿದಿತ್ತು ,ಇಂದಿರಾಗೆ ಒಳ್ಳೆಯ ಮಗನಾಗಲಿಲ್ಲ,ರಾಜೀವನಿಗೆ ಒಳ್ಳೆಯ ತಮ್ಮನಾಗಲಿಲ್ಲ,ಕಪಟ ಉದ್ಯಮಿ ಆದ ,ಇವಿಷ್ಟು ಸಂಜಯ್ ಗಾಂಧೀ.
ರವಿ ಬೆಳೆಗೆರೆ ಹೇಳಿದಂತೆ ,give the devil it's share ಅಂತಾರೆ ,ಇತಿಹಾಸ ಎಂತವನಿಗಾದರೂ ತನ್ನ ಸವಿಸ್ತಾರ ಶಿಲಾಶಾಸನ ದಲ್ಲಿ ಒಂದು ಸಾಲಿನಸ್ಟು ಜಾಗ ಕೊಟ್ಟೆ ಕೊಡುತ್ತದೆ .ಅದಕ್ಕೆ ಈತ ಅರ್ಹ .ಆತನಲ್ಲಿರುವ ಅಪರೂಪದ ಗುಣಗಳು ಮಾದರಿಯಾಗಬೇಕು .ಸಮಸ್ಯೆಗಳು ತಿಳಿದಿತ್ತು ಆದರೆ ಅದಕ್ಕೆ ಸ್ಪಂದಿಸುವ ರೀತಿಯಲ್ಲಿ ಸೋತಿದ್ದ .ಪುಸ್ತಕ ಓದುತ್ತ ಹೋದಂತೆ ನಂಬರ್ 1 ,ಸಫ್ದರ್ಜಂಗ್ ರಸ್ತೆಯ ಬಂಗಲೆ (ಪ್ರಧಾನಿ ಬಂಗಲೆ ) ಕರಾಳ ಅಧ್ಯಾಯ ಕಣ್ಣ ಮುಂದೆ ಬರುತ್ತದೆ .ಈ ಪುಸ್ತಕ ಓದಿದಂತೆ ಇಂದಿರಾಗಾಂಧಿ -ಸಂಜಯಗಾಂಧಿ ಜೀವನ ವಿಚಿತ್ರ ಅನಿಸಬಹುದು .ಆದರೆ ಆಡಳಿತದ ರೀತಿ ನೋಡಿ ವಿಪರೀತ ಸಿಟ್ಟು ಬರುತ್ತದೆ .ಇಂದಿರಾ ಆಡಳಿತದಲ್ಲಿ ಸಂಜಯ್ ಎಷ್ಟು ಬೆರೆತಿದ್ದ ಎಂದು ಆತ ಸತ್ತ ನಂತರ ನಡೆಯುವ ಅವಾಂತರಗಳೇ ಬಿಡಿಸಿ ಹೇಳುತ್ತಿದ್ದವು
"ಸಂಜಯ್ ಬದುಕಿದ್ದರೆ ಆಪರೇಷನ್ ಬ್ಲೂ ಸ್ಟಾರ್ ಪ್ರಕರಣ ನಡೆಯುತಿತ್ತಾ ....?ಎನ್ನುವ ಪ್ರಶ್ನೆ ಪುಸ್ತಕದ ಕೊನೆಯ ಹಾಳೆ ಓದಿದಾಗ ಮೂಡುವುದು ಸಹಜ. ವಿನೋದ್ ಮೆಹ್ತಾ ರವರ "ಸಂಜಯ್ ಸ್ಟೋರಿ "ಎಂಬ ಉತ್ತಮ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ ರವಿ ಬೆಳೆಗೆರೆ ಅವ್ರಿಗೆ ಥ್ಯಾಂಕ್ಸ್ ಹೇಳಲೇಬೇಕು .
ಪ್ರತಿಯೊಬ್ಬರೂ ಭಾರತದ ಇತಿಹಾಸ ತಿಳಿದುಕೊಳ್ಳಬೇಕಾದ್ದು ಅಗತ್ಯ. ಎಲ್ಲರ ಮನೆಯ ದೋಸೆ ತೂತು ಎಂಬ ಗಾದೆ ನೆನಪಾಗುವುದು ಸಹಜ .ತುರ್ತು ಪರಿಸ್ತಿತಿ ಯ ಹೀನಾಯ ಪರಿಸ್ಥಿತಿಯಿಂದ ಕಾಂಗ್ರೆಸನ್ನು ಅಧಿಕಾರದ ಗದ್ದುಗೆ ಏರಿಸಿದ ಕೀರ್ತಿ ಸಂಜಯ್ ಗಾಂಧಿಗೆ ಸಲ್ಲಬೇಕು .
ವಿಮಾನ ಚಾಲನೆ ಗೊತ್ತಿಲ್ಲದವ ಆಗಸದಲ್ಲಿ ಮಾಯವಾದ (ಸಂಜಯ್),ರಾಜಕಾರಣ ಗೊತ್ತಿಲ್ಲದವ ರಾಜಕೀಯದಿಂದ ನಶಿಸಿ ಹೋದ (ರಾಜೀವ್) ಎಂತ ವಿಪರ್ಯಾಸ .ನೀವು ಕೊಂಡು ಓದಿ ಅದ್ಭುತ ಪುಸ್ತಕ .ಓದಿದ ನಂತರ ನಿಮಗೂ ಸಂಜಯ್ ನ ಬಗ್ಗೆ ಏನಾದರು ಅನಿಸಬಹುದು ....

Thursday, September 24, 2009

ಈ ಹೆಸರೆ ಯಾಕೆ ಅಂತಂದ್ರೆ....

ಮರಳಿನ ಮನೆ ......ಇಂತದ್ದೊಂದು ಹೆಸರು ನನ್ನ ಬ್ಲಾಗಿಗೆ ಇಡಬೇಕೋ ಬೇಡವೋ ಅಂತ ತುಂಬಾ ಜಿಜ್ನಾಸೆಯಲ್ಲಿದ್ದೆ. ಈ ಹೆಸರು ಉದ್ಭವವಾಗಿದ್ದೊಂದೇ ವಿಚಿತ್ರ .ಕವನಗಳು ನನ್ನ ಪಾಲಿಗೆ "ತಿರುಕನ ಕನಸು ". ಆದರೆ ಇತ್ತೀಚೆಗೆ ಪೆನ್ನು ಹಿಡಿದಾಗ ನಾಲ್ಕು- ನಾಲ್ಕು ಸಾಲಿನ ಇಪ್ಪತ್ತನಾಲ್ಕು ಸಾಲುಗಳುಕಣ್ಣು ಮುಚ್ಚುವಷ್ಟರಲ್ಲಿ ಬಂದವು.ಕೊನೆಯ ಸಾಲು ತುಂಬಾ ಇಷ್ಟವಾಗಿ ಬರೆದಿದ್ದೆ .
"ಸರಿಯೋ ತಪ್ಪೋ
ಮನಸ್ಸಂತೂ ಮರಳಿನ ಮನೆಯಾಗಿದೆ
ನೀರು ತಾಕಿದಾಗ
ಧರೆಗೆ ಬೀಳುವ ದಾರಿ ಕಾದಿದೆ "
ಈ ಸಾಲು ನನ್ನ ಗೆಳೆಯರೆಲ್ಲರಿಗೂ ಇಷ್ಟವಾಗಿತ್ತು . ಅದರಲ್ಲಿನ ಮರಳಿನ ಮನೆ ಎಂಬ ಶಬ್ದ "ಚಿಕ್ಕ ಮಕ್ಕಳಿಗೆ ಸಿಕ್ಕ ಲಾಲಿ ಪಾಪ್ "ನಂತಾಗಿತ್ತು .ಸಿಕ್ಕ -ಸಿಕ್ಕ ಕಡೆಯಲೆಲ್ಲ ಮರಳಿನ ಮನೆ ಎಂದು ಕೆತ್ತನೆ ಆರಂಭ ವಾಗಿತ್ತು
ಇಷ್ಟೆಲ್ಲಾ ಆದ ನಂತರ ನನ್ನ ಕನಸಿನ ಕೂಸು ಆದ ಬ್ಲಾಗಿಗೆ ಬೇರೆ ಹೆಸರಿಡುವ ಮನಸ್ಸಾಗಲಿಲ್ಲ .ಅದಕ್ಕಾಗಿಯೇ "ಮರಳಿನ ಮನೆ "ಎಂದು ನಾಮಕರಣ ಮಾಡಿದ್ದೇನೆ .ಈ ಹೆಸರಲ್ಲಿ ಹಲವಾರು ಅರ್ಥ ಗಳಿವೆ.
*ಮರಳಿಲ್ಲದೆ ಯಾರು ಮನೆಯನ್ನು ಕಟ್ಟುವುದಿಲ್ಲ ,ಹಾಗೆ ಬರಿ ಮರಳಿನಿಂದಲೇ ಯಾರು ಮನೆಯ ಕಟ್ಟುವುದಿಲ್ಲ .
*"ಸಾಗುತ ದೂರ ದೂರ " ಈ ಮರಳಿನ ಮನೆ ಎಂಬ ಬ್ಲಾಗು ಬರವಣಿಗೆಯಲ್ಲಿ ದೂರ ದೂರ ಸಾಗುತ್ತಲಿರಬೇಕು ಎಂಬ ಹಂಬಲದೊಂದಿಗೆ .....ಈ ಬ್ಲಾಗ್ ಮಂಡಲ ....