Friday, December 31, 2010

ನದಿಗಳನ್ನು ಪ್ರೀತಿಸುವವನು!

ಚಾರಣ, ಪ್ರವಾಸ ಎಂದ ತಕ್ಷಣ ಬೆಟ್ಟ, ಗುಡ್ಡ ಹತ್ತೋದು. ಯಾವುದೋ ವಿಶೇಷ ಜಾಗಕ್ಕೆ ಹೋಗಿ ಒಂದೆರಡು ದಿನ ಹಾಯಾಗಿ ಇದ್ದು ಬರೋದು...ಇವಿಷ್ಟು ಬಿಟ್ಟರೆ, ಇನ್ನೇನೂ ನೆನಪಾಗದು. ಆದರೆ, ಸ್ವಿಜ್ಜರ್ಲೆಂಡಿನ ಆಂಡಿ ಲೆಹ್ಮನ್‌ಗೆ ಪ್ರವಾಸ ಎಂದರೆ ನದಿಗಳನ್ನು ದಾಟುವುದು, ಅವುಗಳ ವಿಶೇಷತೆಯನ್ನು ತಿಳಿಯುವುದು, ಅಲ್ಲಿನ ನಾಗರಿಕತೆಯನ್ನು ಕಲಿಯುವುದು...! ಈಗಾಗಲೇ ಪ್ರಪಂಚದಾದ್ಯಂತ ನದಿಗಳ ಪ್ರವಾಸ ಮಾಡಿರುವ ಈತ ಭಾರತದ ನದಿಗಳನ್ನೂ ಬಿಟ್ಟಿಲ್ಲ.


ನದಿಯೊಂದು ಸತ್ತರೆ, ನಾಗರೀಕತೆಯೇ ಸತ್ತಂತೆ. ರಸ್ತೆಗಳು ಸಾವುಗಳನ್ನು ಸೃಷ್ಟಿಸುತ್ತವೆ. ನದಿಗಳು ಜೀವಗಳನ್ನು ಉಳಿಸುತ್ತವೆ. ಈ ಪ್ರಪಂಚವನ್ನು ಮುಕ್ಕಾಲು ಭಾಗ ನೀರು ಆವರಿಸಿದ್ದರೂ, ಕುಡಿಯುವ ನೀರಿಗಾಗಿ ಹಾಹಾಕಾರ ಇಂದಿಗೂ ಇದೆ. ಎಲ್ಲಿ ತನಕ ಮನುಷ್ಯನಿಗೆ ನೀರು ಮುಖ್ಯವೋ, ಅಲ್ಲಿ ತನಕ ನನ್ನ ಪಯಣ -ಆಂಡಿ ಲೆಹ್ಮನ್

ಅವನ ಅಪ್ಪ ಮೀನುಗಾರ. ನದಿ, ಸಮುದ್ರಗಳು ಇವರಿಗೆ ಅನ್ನದ ಬಟ್ಟಲು. ಅಪ್ಪ ನದಿ ದಂಡೆಯಲ್ಲಿ ಮೀನಿಗಾಗಿ ಬಲೆ ಬೀಸುತ್ತಿದ್ದಾಗ ಆ ಪುಟ್ಟ ಹುಡುಗ ಅಚ್ಚರಿಯ ಕಣ್ಣುಗಳಿಂದ ಅಪ್ಪನನ್ನೇ ದಿಟ್ಟಿಸುತ್ತಿದ್ದ. ಆ ನದಿಗಳಲ್ಲಿ ಬದುಕುವ ಮೀನುಗಳ ಕುರಿತು, ತನ್ನ ಪಾಡಿಗೆ ತಾನು ಹರಿಯುವ ಆ ನದಿಗಳ ಕುರಿತು ಆತನಲ್ಲಿ ಸಹಜ ಕುತೂಹಲ. ತಾನೂ ನದಿಯಲ್ಲಿ ಈಜಬೇಕು. ಆ ನದಿಗಳ ಕುರಿತು ತಿಳಿದುಕೊಳ್ಳಬೇಕು, ಆ ನದಿಗಳ ಸುತ್ತಮುತ್ತ ಬೆಳೆದಿರಿವ ನಾಗರೀಕತೆ ಕುರಿತು ತಿಳಿಯಬೇಕು...ಹೀಗೇ ಆ ಪುಟ್ಟ ವಯಸ್ಸಿನಲ್ಲಿ ಅವನಲ್ಲಿ ನೂರಾರು ಕನಸುಗಳು.
ಅವನೇ ಪ್ರಪಂಚದ ಪ್ರಪಂಚದ ಪ್ರಸಿದ್ಧ ರಿವರ್ ರೈಡರ್ ಆಂಡಿ ಲೆಹ್ಮನ್.

ಇಂದು ಈತನ ಹೆಸರು ಪ್ರಪಂಚಕ್ಕೆ ಚಿರಪರಿಚಿತ. ಸಾವಿರಾರು "ಹುಟ್ಟು" ಹರಿದ ನದಿಗಳಲ್ಲಿ ಈತನ ಪಯಣ ಸಾಗಿದೆ. ಪ್ರಪಂಚದ ಭಯಾನಕ, ಅಪಾಯಕಾರಿ ನದಿಗಳ ಮೇಲೆ ಈತನ ದೋಣಿ ಹರಿದು ಹೋಗಿದೆ. ದಕ್ಷಿಣ ಅಮೇರಿಕಾದ ಜೀವನದಿಗಳಾದ ಆರ್ ನಿಕೋ ಹಾಗೂ ಅಮೆಜಾನ್, ದಕ್ಷಿಣ ಪೂರ್ವ ಏಷ್ಯಾದ ಮೆಕಾಂಗ್, ಚೀನಾದ ಯಾಂಗ್ಟಿ, ಆಫ್ರಿಕಾದ ಜಾಮೆಂಜಿ... ಹಾಗೇ ಭಾರತದ ನದಿಗಳಾದ ಗಂಗಾ, ಬ್ರಹ್ಮಪುತ್ರ ನದಿಗಳಲ್ಲಿ ಈತ ಸಾಗಿ ಬಂದಿದ್ದಾನೆ. ಬರುವ ಹಾದಿಯಲ್ಲೆಲ್ಲಾ ಸಿಗುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿದ್ದಾನೆ. ನದಿಗಳ ಪ್ರಾಮುಖ್ಯತೆ ಬಗ್ಗೆ ಅವರಿಗೆ ವಿವರಿಸಿದ್ದಾನೆ. ನದಿಗಳ ಉಳಿವಿಗೆ ನಾವೇನು ಮಾಡಬೇಕು ಎಂಬುದರ ಬಗ್ಗೆಯು ಈತ ತಿಳಿಸುತ್ತಾನೆ.
ಹೀಗಾಗಿಯೇ ಆಂಡಿಯನ್ನು ವರ್ಲ್ಡ್ ಬ್ಯಾಂಕ್ ಹಾಗೂ ವಿಶ್ವಸಂಸ್ಥೆಯು ನದಿಗಳ ಸಂರಕ್ಷಣೆ ಬಗ್ಗೆ ಹಾಗೂ ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯನ್ನಾಗಿ ನೇಮಿಸಿದೆ.


ಸಾಗಿದ್ದು ಹೇಗೆ?
ಆಂಡಿ ಹುಟ್ಟಿದ್ದು ೧೯೫೪ರಲ್ಲಿ ಸ್ವಿಜರ್‌ಲ್ಯಾಂಡ್‌ನ ಜ್ಯೂರಿಚ್ ಪ್ರಾಂತದಲ್ಲಿ . ನದಿಗಳಲ್ಲಿ ಈಜುವ ಹವ್ಯಾಸ ಈತನಿಗೆ ಅಚ್ಚುಮೆಚ್ಚು, ಸರ್ಫಿಂಗ್, ಹಾಯಿದೋಣಿಯಂತಹ ಸ್ಪರ್ಧೆಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ. ಕಲಿತ ವಿದ್ಯೆಗೆ ತಕ್ಕ ಕೆಲಸ ಸಿಕ್ಕಿದರೂ ಸಿಕ್ಕ ಕೆಲಸಕ್ಕೆಲ್ಲಾ ಗೋಲಿ ಹೊಡೆದ. ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಒಂದಲ್ಲಾ ಒಂದು ನೆಪ ಹೇಳಿ ಕಾಲು ಕಿತ್ತಿದ್ದ. ಬ್ಯಾಂಕಾಕ್‌ನಲ್ಲಿ ಪುರುಷರ ಬಟ್ಟೆಗಳ ಮಾಡೆಲ್ ಆಗಿ ಕೈತುಂಬಾ ಹಣ ಸಿಗುತ್ತಿದ್ದರೂ ಆ ಕೆಲಸವನ್ನೂ ಬಿಟ್ಟ. ಹವಾಯಿ, ಸ್ವಿಜರ್‌ಲ್ಯಾಂಡ್, ಕೊಲಂಬಿಯಾ, ಅರ್ಜಿಂಟೀನಾ, ಕೆರಿಬಿಯನ್ ಹೀಗೆ ಹಲವಾರು ದೇಶ ಸುತ್ತಾಡಿದರೂ ಮನಸ್ಸಿಗೆ ಒಪ್ಪುವ ಕೆಲಸ ಸಿಗಲಿಲ್ಲ.

ಇದರ ನಡುವೆ ರಸ್ತೆ ಅಫಘಾತವಾಗಿ ಎಂಟು ತಿಂಗಳು ಬೆಡ್‌ರೆಸ್ಟ್. ನಂತರ ಕ್ಯೂಬಾಗೆ ಪಯಣ. ಅಲ್ಲಿ ಬೋಟ್ ತಯಾರಿಕಾ ಕಂಪನಿಯಲ್ಲಿ ಕೆಲಸ. ನದಿಗಳು ಸಮುದ್ರಗಳ ಬಗ್ಗೆ ಮತ್ತೆ ಹೆಚ್ಚಿನ ಆಸಕ್ತಿ."ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು" ಎಂಬಂತೆ ಸಲ್ಲದ ನೆಪ ಹೇಳಿ ಅಲ್ಲಿನ ಕೆಲಸ ಬಿಟ್ಟು ಸ್ಪೇನ್‌ನಲ್ಲಿ ಸಮುದ್ರಯಾನಿಗಳಿಗೆ ಸಹಾಯವಾಗುವ ಪರಿಕರಗಳ ತನ್ನದೇ ಒಂದು "ಶಾಪ್" ಸ್ಥಾಪಿಸಿದ. ಆಗ ಹುಟ್ಟಿದ್ದೇ ವಿಶ್ವ ಪರ್ಯಟನೆಯ ಕನಸು. ಆದರೆ ಸಮುದ್ರದಲ್ಲಿ ಸುಮ್ಮನೆ ಪ್ರಯಾಣ ಮಾಡುವುದಕ್ಕಿಂತ ನದಿಗಳಲ್ಲಿ ಪಯಣಿಸಿ ನದಿಗಳ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವ ನಿರ್ಧಾರ ತಳೆದ. ೨೦೦೩ರಲ್ಲಿ ಆತನ ಕನಸುಗಳು ರೂಪುಗೊಳ್ಳುವ ತನ್ನ ನದಿ ಪರ್ಯಟನೆಯ ಆಸೆ ಈಡೇರುವ ಹಂತ ತಲುಪಿತು.

೨೦೦೩ರಲ್ಲಿ ದಕ್ಷಿಣ ಅಮೆರಿಕಾದ ಆರ್ ನಿಕೋ ನದಿಯಲ್ಲಿ ಹಾಯಿ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ. ಅದರಲ್ಲಿ ಮೂರನೇ ಸ್ಥಾನ ಗಳಿಸಿದ. ಸ್ಪರ್ಧಾತ್ಮಕ ರೇಸ್‌ಗಳಲ್ಲಿ ಭಾಗವಹಿಸಿ ಗೆದ್ದ ಮೊದಲ ಯುರೋಪಿಯನ್ ಎಂಬ ಕೀರ್ತಿಗೂ ಭಾಜನನಾದ. ಮುಂದಿನ ವರ್ಷ ವೆನಿಜುವೆಲಾದಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆ ರಾಜಕೀಯ ಕಾರಣಗಳಿಗಾಗಿ ಮುಳುಗಿತ್ತು. ಆದರೆ ಆಂಡಿ "ಆರ್ ನಿಕೋ" ನದಿಯಲ್ಲಿ ಅದಾಗಲೇ ಪಯಣ ಆರಂಭಿಸಿದ್ದ. ವಿಶ್ವದ ಅತಿ ಅಪಾಯಕಾರಿ ನದಿಯಲ್ಲಿ ೧೭೦೦ಕಿ.ಮೀ ಕ್ರಮಿಸಿದ. ಈ ನದಿಯಲ್ಲಿ ಕೊಲಂಬಿಯಾ, ವೆನಿಜುವೆಲಾ, ಹಾಗೂ ಬ್ರೆಜಿಲ್ ದೇಶಗಳನ್ನು ಸುತ್ತಿದ. ಈತನ ಇಂತಹ ಹುಚ್ಚಾಟಗಳೇ ಆತನಿಗೆ ಬದುಕಿನಲ್ಲಿ ನೆಲೆ ಕಲ್ಪಿಸಿತು. ಆತನ ಯಾನಗಳಿಗೆ ಸ್ಪಾನ್ಸರ್ ಗಳು ದೊರೆತರು. ನಂತರ ೬ ವಿವಿಧ ದೇಶಗಳನ್ನು ಸಂಪರ್ಕಿಸುವ ೨ ಸಾವಿರ ಕಿ.ಮೀ ಉದ್ಧದ ನದಿಯಲ್ಲಿ ಪಯಣಿಸಿದ. ೨೦೦೮ರಲ್ಲಿ ಆಫ್ರಿಕಾ ದೇಶಗಳಾದ ಜಾಂಬಿಯಾ, ನಮಿಬಿಯಾ, ಬೋಟ್ಸವಾನಾ, ಜಿಂಬಾಬ್ವೆ, ಮೊಜಾಂಬಿಕ್ ದೇಶಗಳನ್ನು ಸಂಪರ್ಕಿಸುವ ೨,೯೦೦ಕಿ.ಮೀ ಉದ್ದದ ಜಾಮೆಂಜಿ ನದಿಯಲ್ಲಿ ಪಯಣಿಸಿ, ನದಿಯಲ್ಲಿ ಪಯಣಿಸುವಾಗ ಕಂಡ ವಿಚಾರಗಳನ್ನೆಲ್ಲಾ ಆ ದೇಶಕ್ಕೆ ತಿಳಿಸಿದ. ಜಾಮೆಂಜಿಯಂತಹ ಸುಂದರ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿಕಂಡು ಮುಮ್ಮಲ ಮರುಗಿದ.

ಗಂಗಾ ಪಯಣ
ಈತನ ನದಿ ಪಯಣ ೨೦೦೯ರಲ್ಲಿ ಗಂಗಾ ನದಿಯಲ್ಲಿ ನಡೆಯಿತು. ಈ ಸಮಯದಲ್ಲಿ ಈತನ ಯಾನಕ್ಕೆ ಇನ್ನಷ್ಟು ಜನ ಕೈಜೋಡಿಸಿದ್ದರು. ಗಂಗಾ ನದಿ ಬಗ್ಗೆ ಹೇಳುವ ಆತ " ನಾ ಕಂಡ ವಿಶ್ವದ ಅತೀ ಸುಂದರ ನದಿಗಳಲ್ಲಿ ಗಂಗಾ ನದಿಗೆ ಮೊದಲ ಸ್ಥಾನ. ಆದರೆ ಈ ನದಿಯಲ್ಲಿ ಸಾಗುವಾಗ ಸಿಕ್ಕ ಶವಗಳು ನಮ್ಮನ್ನು ಸ್ವಲ್ಪ ಭಯಗ್ರಸ್ಥರನ್ನಾಗಿ ಮಾಡಿತು. ನಂತರ ಇದು ಪುರಾಣ ಪ್ರಸಿದ್ಧಿ ಎಂದು ತಿಳಿದಾಗ ಸಂತೋಷವಾಯಿತು. ಆದರೆ ಇದೇ ರಿತಿಯಲ್ಲಿ ಕಲುಷಿತವಾಗಿ ನದಿ ಮುಂದುವರಿದರೇ ಮುಂದಿನ ದಶಕದಲ್ಲಿ ಗಂಗಾ ನೀರು ಕುಡಿಯುವ ಭಾಗ್ಯ ಇರಲಾರದು" ಎಂದು ಎಚ್ಚರಿಸುತ್ತಾನೆ.

ಈ ವರ್ಷ ಬ್ರಹ್ಮಪುತ್ರ
2010ರಲ್ಲಿ ಆಂಡಿಯ ನದಿ ವಿಹಾರ ಭಾರತದ ಇನ್ನೊಂದು ಪ್ರಸಿದ್ಧ ನದಿ ಬಹ್ಮಪುತ್ರದಲ್ಲಿ. ೫೫ ದಿನಗಳ ಈ ಯಾತ್ರೆ ಈ ವರ್ಷದ ನವೆಂಬರ್ ಗೆ ಕೊನೆಗೊಂಡಿದೆ. ಟಿಬೆಟ್‌ನಲ್ಲಿನ ಬ್ರಹ್ಮಪುತ್ರ ನದಿ ಮೂಲದಿಂದ ಬಂಗಾಳ ಕೊಲ್ಲಿ ವರೆಗಿನ ಸಂಗಮದವರೆಗಿನ ೨,೮೦೦ಕಿ.ಮೀ. ದೂರವನ್ನು ಆಂಡಿ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ತಲುಪಿದ್ದಾನೆ. ಹೆಚ್ಚಿನ ಯಾನಿಗಳು ಬೆಳಗಿನ ಸಮಯದಲ್ಲಿ ಪಯಣಿಸಿದರೆ ಆಂಡಿ ತಂಡ ಮಾತ್ರ ರಾತ್ರಿ ೮ ರಿಂದ ಬೆಳಿಗ್ಗೆ ೪ರವರೆಗೆ ಪಯಣಿಸುತ್ತಾರೆ. ಬೆಳಿಗ್ಗೆ ವಿಶ್ರಾಂತಿ. ಆಹಾರ ತಯಾರಿಸಲು ಒಬ್ಬನಿದ್ದಾನೆ. ತಾನು ಸಾಗುವ ಹಾದಿಯಲ್ಲಿ ನದಿಗಳ ರಕ್ಷಣೆ ಬಗ್ಗೆ ಹೇಳಿದ್ದಾನೆ. ಆಫ್ರಿಕಾದಲ್ಲಿ ನದಿಯಿದ್ದರೂ ನೀರಿಗಾಗಿ ಹಾಹಾಕಾರ ಪಡುವ ವ್ಯಥೆಯನ್ನು, ನೀರಿನ ಹಸಿವನ್ನು, ಅಲ್ಲಿ ರೆಕಾರ್ಡ್ ಮಾಡಿದ ಚಿತ್ರಣವನ್ನು ಜನರಿಗೆ ತೋರಿಸಿ ನಿಮ್ಮ ನದಿ ಹೀಗಾಗಬಾರದಾದರೇ ನದಿಗಳ ಬಗ್ಗೆ ಎಚ್ಚರ ವಹಿಸಿ ಎನ್ನುತ್ತಾನೆ. ಬ್ರಹ್ಮಪುತ್ರ ನದಿಯ ಪಯಣ ಮಾಡಿ ಈ ನದಿಯನ್ನು ಯಶಸ್ವಿಯಾಗಿ ಯಾನ ಮಾಡಿದ ಮೊದಲಿಗ ಎಂಬ ಕೀರ್ತಿಗೂ ಭಾಜನನಾಗಿದ್ದಾನೆ ಆಂಡಿ. "ನಾನು ನದಿಗಳನ್ನು ಪ್ರೀತಿಸುತ್ತೇನೆ. ನದಿಗಳೇ ನನಗೆ ಜೀವ. ನದಿಗಳ ಸ್ಪರ್ಶವಿಲ್ಲದಿರುವ ಜನಾಂಗ ಜಗತ್ತಿನಲ್ಲೇ ಇಲ್ಲ" ಇದು ಆಂಡಿ ಹೋದಲ್ಲೆಲ್ಲಾ ಜನರಿಗೆ ಹೇಳುವ ಮಾತು.



ವಿಹಾರ ಪುರವಣಿಯಲ್ಲಿ ಜನವರಿ 1 ರಂದು ಪ್ರಕಟವಾದ ಬರಹ... ಇಲ್ಲಿ ನೋಡಿ..

ಕಥೆ ಓದಿ, ನಿಮಗೂ ಇಷ್ಟವಾಗಬಹುದು!


ಬಿಹಾರದ ಧರ್‌ಹರಾ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಜೊತೆಗೊಂದು ಗಿಡನೂ ಹುಟ್ಟುತ್ತೆ. ಅದೇ ಆ ಹೆಣ್ಣು ಮಗಳ ಭವಿಷ್ಯ. ಆ ಮರದಿಂದ ಬರುವ ಫಸಲಿನಿಂದಲೇ ಮನೆಮಗಳ ಮದುವೆ ನಡೆಯುತ್ತೆ. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಹೆಣ್ಣಿನ ಹೆಸರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳು ಹುಟ್ಟಿವೆ.




ಅದೊಂದು ಪುಟ್ಟ ಊರು. ಇರುವುದು ಏಳು ಸಾವಿರ ಜನ. ಒಪ್ಪೊತ್ತಿಗೆ ನಿತ್ಯ ಕಾಯಕ. ಇಲ್ಲಿ ಹೆಣ್ಣು ಮಗು ಹುಟ್ಟಿದರೆ, ಗಿಡ ಹುಟ್ಟುತ್ತೆ. ಆ ಊರಲ್ಲಿ ಹೊಸ ಗಿಡವೊಂದು ಕಂಡರೆ ಅಲ್ಲೊಬ್ಬಳು ಹೆಣ್ಣುಮಗಳು ಹುಟ್ಟಿದ್ದಾಳೆಂದೇ ಅರ್ಥ.

ಹೌದು, ಇದು ಬಿಹಾರದ ಧರ್ ಹರಾ ಗ್ರಾಮ. ಇಲ್ಲಿ ಹೆಣ್ಣು ಮಗಳು ಹುಟ್ಟಿದರೆ ಐದು ಲಿಚಿ ಮತ್ತು ಮಾವಿನ ಮರಗಳನ್ನು ನೆಡುವುದು ಕಡ್ಡಾಯ. ಇಂದು ಅಲ್ಲಿರುವ ಮಾವು ಮತ್ತು ಲಿಚಿ ಮರಗಳ ಸಂಖ್ಯೆ ಒಂದು ಲಕ್ಷ ಮುಟ್ಟಿದೆ. ಧರ್ ಹರಾ ಗ್ರಾಮದ ಇಂಚಿಂಚೂ ಹಸಿರ ಐಸಿರಿ. ಬಿಹಾರದ ಮಾರುಕಟ್ಟೆಯಲ್ಲಿ ಲಿಚಿ ಮತ್ತು ಮಾವಿನ ಹಣ್ಣುಗಳಿಂದ ಲಕ್ಷಾನುಗಟ್ಟಲೆ ವಹಿವಾಟು. ಇಂದು ಈ ಗ್ರಾಮದ ಜನರು ಇದೇ ಹಣ್ಣುಗಳಿಂದಲೇ ಲಕ್ಷಾಂತರ ರೂಪಾಯಿ ಎಣಿಸುತ್ತಾರೆ. ಮಗಳ ಮದುವೆ ಮಾಡುತ್ತಾರೆ. ಹಾಗಂತ ಇದ್ಯಾವುದೇ ಸರ್ಕಾರ ನಿರ್ಮಿಸಿದ ಯೋಜನೆಯಲ್ಲಿ ಹುಟ್ಟಿ ಬಂದ ಮರಗಳಲ್ಲ. ಬದಲಾಗಿ ಈ "ಹಸಿರ ಐಸಿರಿ" ಕೂಡ ಮನೆಮಗಳ ಬದುಕಿಗಾಗಿ, ಭವಿಷ್ಯಕ್ಕಾಗಿ! ಇದೇ ಕಾರಣಕ್ಕೆ ಈ ಗ್ರಾಮದಲ್ಲಿ ಈವರೆಗೆ ಒಂದೇ ಒಂದು ವರದಕ್ಷಿಣೆ ಪ್ರಕರಣ ಕೂಡ ವರದಿಯಾಗಿಲ್ಲ.

ಮನೆಮಗಳಿಗೊಂದು ಮರ
ಧರ್‌ಹರಾ ಗ್ರಾಮ ಇರುವುದು ಬಿಹಾರದ ಬಾಗಲ್ಪುರ್ ಜಿಲ್ಲೆಯಲ್ಲಿ. ಹೆಣ್ಣು ಮಗು ಹುಟ್ಟಿದರೆ ಗಿಡ ನೆಡಬೇಕೆನ್ನುವುದು ಹಲವಾರು ತಲೆಮಾರುಗಳಿಂದಲೇ ನಡೆದು ಬಂದಿದೆ. ಹಾಗಂತ, ಇಲ್ಲಿಯ ಜನರ ಬಳಿ ಕೇಳಿದರೆ ನಮ್ಮ ತಾತ-ಮುತ್ತಾತ ಮಾಡಿದರೆನ್ನುವುದು ಅಷ್ಟೇ ಗೊತ್ತು. ಒಟ್ಟಿನಲ್ಲಿ ಅಲ್ಲಿ ಹೆಣ್ಣು ಮಗಳ ಹೆಸರಿನಲ್ಲಿ ಮರಗಳು ತಲೆ ಎತ್ತಿವೆ. ಪರಿಸರ ಹಸಿರಾಗಿದೆ. ಹೆಣ್ಣು ಮಗಳ ಬದುಕು ಹಸನಾಗುತ್ತಿದೆ.

ಗಿಡ ನೆಟ್ಟ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ಆ ಪುಟ್ಟ ಮಗು ದೊಡ್ಡವಳಾಗುವ ತನಕ ಮಗಳನ್ನು ಬೆಳೆಸಿದಂತೆ ಪ್ರೀತಿಯಿಂದ ಆ ಗಿಡಗಳನ್ನು ಬೆಳೆಸುತ್ತಾರೆ, ಅವುಗಳಿಗೂ ಪ್ರತಿದಿನ ನೀರೆರೆದು ಪೋಷಿಸುತ್ತಾರೆ. ಗಿಡ ದೊಡ್ಡದಾಗಿ ಹೂವು ಬಿಡುವ ಹೊತ್ತಿಗೆ ಮಗಳು ಅಂಬೆಗಾಲಿಕ್ಕುತ್ತಾಳೆ. ಇಂದಿಗೂ ಬಿಹಾರದ ಧರ್ ಹರಾ ಗ್ರಾಮದಲ್ಲಿ ೭-೮ ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಅಪ್ಪ-ಅಮ್ಮ ನೆಟ್ಟ ಗಿಡಗಳಿಗೆ ತಪ್ಪದೆ ನೀರೆರೆಯುವುದನ್ನು ಕಾಣಬಹುದು. ಮಗಳು ವಯಸ್ಸಿಗೆ ಬರುವ ಮೊದಲೇ ಆ ಮರಗಳು ಫಲ ಕೊಡುತ್ತವೆ.

ಮಗಳ ಹೆಸರಲ್ಲಿ ಅಕೌಂಟ್
ಹಾಗೆ ಮಾರುಕಟ್ಟೆ ಪ್ರವೇಶಿಸುವ ಈ ಹಣ್ಣುಗಳಿಗೆ ಬಿಹಾರದಲ್ಲಿ ಹೆಚ್ಚಿನ ಬೇಡಿಕೆ. ಅದರಿಂದ ಬಂದ ಹಣವನ್ನು ಇವರು ಬ್ಯಾಂಕಿನಲ್ಲಿಡುತ್ತಾರೆ. ಅದೂ ಮಗಳ ಹೆಸರಲ್ಲಿ...! ಮಗಳು ಮದುವೆಗೆ ರೆಡಿಯಾದಾಗ ಆ ಅಪ್ಪ-ಅಮ್ಮನ ಜೇಬಲ್ಲಿ ಎರಡರಿಂದ ಎರಡೂವರೆ ಲಕ್ಷ. ಅದರಲ್ಲೇ ಮಗಳ ಮದುವೆ. ಕೊನೆಗೆ ಅದೇ ಮರಗಳನ್ನು ಹೆತ್ತವರು ಉಡುಗೊರೆ ರೂಪದಲ್ಲಿ ಮಗಳಿಗೆ ನೀಡುತ್ತಾರೆ. ಒಟ್ಟಿನಿಂದ ಮರಗಳಿಂದ ಮಗಳ ಮದುವೆ!

ಇತ್ತೀಚೆಗೆ ಜೂನ್‌ನಲ್ಲಿ ಸುಭಾಸ್ ಸಿಂಗ್ ಎಂಬುವವರು ತನ್ನ ಮಗಳು ನಿಕಾಹ್ ಕುಮಾರಿಯನ್ನು ಶಾಲಾ ಶಿಕ್ಷಕನೊಬ್ಬನೊಂದಿಗೆ ವಿವಾಹ ಮಾಡಿದರು. “ನನ್ನ ಮಗಳ ಮದುವೆ ನನಗೆಂದು ಕಷ್ಟವಾಗಲಿಲ್ಲ. ಅವಳು ದುಡಿದ ಹಣದಲ್ಲೇ ನಾನು ಅವಳ ಮದುವೆ ಮಾಡಿದ್ದೇನೆ. ಇದೆಲ್ಲಾ ಅವಳ ಸಂಪತ್ತು. ಇದು ನಮ್ಮ ಗ್ರಾಮದ ಸಂಪ್ರದಾಯ. ಮಗಳು ಹುಟ್ಟಿದರೆ ಹತ್ತು ಫಲ ಬರುವ ಗಿಡಗಳನ್ನು ನೆಡಬೇಕು. ಜಾಗವಿಲ್ಲದಿದ್ದರೇ ಆತ ಜಾಗ ಖರೀದಿಸಿಯಾದರೂ ಗಿಡ ನೆಡಲೇಬೇಕು” ಎನ್ನುತ್ತಾರೆ ಸುಭಾಸ್ ಸಿಂಗ್.

ಒಂದು ಲಕ್ಷ ಮರಗಳು
ಈ ಗ್ರಾಮದಲ್ಲಿ ಹಸಿರೇ ಮನೆ ಮಗಳ ಉಸಿರು. ಕೇವಲ ಏಳು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇರುವ ಮರಗಳ ಸಂಖ್ಯೆ ಬರೋಬ್ಬರಿ ಒಂದು ಲಕ್ಷ! ಪ್ರತಿ ಸೀಸನ್‌ನಲ್ಲಿ ಈ ಮರಗಳಿಂದ ಬರುವ ಆದಾಯವೇ ಎರಡು ಲಕ್ಷ. "ನಮ್ಮ ಗ್ರಾಮದಲ್ಲಿ ಹಳೆಕಾಲದ ಕೃಷಿ ಪದ್ಧತಿ ಮರೆತು ಬಹಳ ದಿನಗಳಾಯಿತು. ನಮ್ಮ ಗ್ರಾಮದ ಯಾವ ಮನೆಯಲ್ಲಿಯೂ ನೇಗಿಲುಗಳಿಲ್ಲ. ಈ ಮರಗಳಿಂದ ನಮ್ಮೂರಿನ ಹಲವಾರು ಹೆಣ್ಮಕ್ಕಳ ಬದುಕು ಹಸನಾಗಿದೆ" ಎನ್ನುವುದು ಶ್ಯಾಮ ಸುಂದರ ಶರ್ಮಾ ಅವರ ಅಭಿಪ್ರಾಯ. ಇಂದಿಗೂ ಬಿಹಾರದ ಹಲವು ಪ್ರದೇಶಗಳಲ್ಲಿ ವರದಕ್ಷಿಣೆ ಹೆಸರಲ್ಲಿ ಹಲವಾರು ಹೆಣ್ಣು ಮಕ್ಕಳು ಸಾವೀಗಿಡಾಗುತ್ತಿದ್ದಾರೆ. ಧರ್ ಹರಾ ಗ್ರಾಮ ಮಾತ್ರ ಇದಕ್ಕೆ ಅಪವಾದ. "ಹೆಣ್ಣು ಹುಟ್ಟಿದರೆ ಗಿಡ ನೆಡಬೇಕು ಎಮಬ ಪದ್ಧತಿ ಯಾರು ಜಾರಿಗೆ ತಂದರು ಅನ್ನೊದು ಗೊತ್ತಿಲ್ಲ. ನಮ್ಮಪ್ಪ..ನನಗೆ ಹೇಳಿದ್ದು. ನಮ್ಮ ತಾತ-ಮುತ್ತಾನೂ ಮಾಡುತ್ತಿದ್ದರಂತೆ. ಹಾಗಂತ ಆರಂಭ ಎಲ್ಲಿಂದ ಅನ್ನೋದು ತಿಳಿಯದು" ಎನ್ನುವುದು ಶ್ಯಾಮ್ ಸುಂದರ್ ಅವರ ಅಭಿಪ್ರಾಯ.

ಇಂದು ಬಿಹಾರದ ಈ ಗ್ರಾಮ ರಾಜ್ಯದೆಲ್ಲೆಡೆ ಸುದ್ದಿಯಲ್ಲಿದೆ. ಈ ಗ್ರಾಮ ಇಷ್ಟೊಂದು ಹಣ್ಣುಗಳನ್ನು ಉತ್ಪಾದನೆ ಮಾಡಲು ಹೇಗೆ ಸಾಧ್ಯ? ಎಂದು ಅಚ್ಚರಿಪಡುತ್ತಾರೆ. ಆದರೆ, ಇದರ ಹಿಂದೆ ಹೆಣ್ಣು ಮಗಳ ಭವಿಷ್ಯವಿದೆ ಅನ್ನೋದು ಬಹಳಷ್ಟು ಜನರಿಗೆ ಅರಿವಾಗುವುದು ತಡವಾಗಿಯೇ. ವರದಕ್ಷಿಣೆ ಪಿಡುಗನ್ನು ನಾಶ ಮಾಡುವ ನಿಟ್ಟಿನಲ್ಲೂ ಇವರ ಪ್ರಯತ್ನ ಸಾಗುತ್ತಿದೆ. ಹಾಗಾಗಿ ಈಗ ಈ ಗ್ರಾಮದ ಹೆಣ್ಣುಮಕ್ಕಳನ್ನು ವರದಕ್ಷಿಣೆ ಹೆಸರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಮಕ್ಕಳಂದ್ರೆ ಖರ್ಚಿನ ಹೊರೆ ಭಾವಿಸುವ ಪ್ರತಿಯೊಬ್ಬರಿಗೂ ಬಿಹಾರದ ಧರ್‌ಹರಾ ಗ್ರಾಮ ಮಾದರಿ, ಅನುಕರಣೀಯ.
ನಿಜ ಹೇಳಿ ಬರಹ ನಿಮಗಿಷ್ಟವಾಗಿಲ್ವೇ?

*ಹೊಸ ದಿಗಂತದ ಧರಿತ್ರಿ ಪುರವಣಿಯಲ್ಲಿ ಡಿಸೆಂಬರ್ 16 ರಂದು ಪ್ರಕಟಗೊಂಡ ಲೇಖನ..
ಲಿಂಕ್ ನೋಡುವುದಾದರೆ..

Friday, December 3, 2010

ಆಕೆಯ ನಿಷ್ಠೆ ನಮಗೆ ಪಾಠವಾಗಲಿ...

ಸೂಕಿ ಬಿಡುಗಡೆ ಅಲ್ಲಿನ ಜನರಲ್ಲಿ ಮತ್ತೇ ಹೊಸ ನೇಸರನ ಆಶಾಕಿರಣ ಮೂಡಿಸಿದೆ. ವಿಶ್ವದ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಅಮೆರಿಕ ಹಾಗು ಬ್ರಿಟನ್‌ ದೇಶಗಳು ಹಲವಾರು ಬಾರಿ ಬರ್ಮಾ ಸೇನಾ ಸರ್ಕಾರಕ್ಕೆ ಸೂಕಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಒಪ್ಪದಿದ್ದ ಜನರಲ್‌ ಥಾನ್‌ ಶ್ವೇಗೆ ಈಗ ಜ್ಞಾನೋದಯವಾಗಿದೆ.
ಬುದ್ಧ ನಡೆದ ನೆಲದಲ್ಲಿ ಇನ್ನಾದರೂ ಶಾಂತಿ ನೆಲಸಲಿ....



ಆಕೆ ಬಯಸಿದ್ದರೆ ಗಂಡ-ಹಾಗೂ ಇಬ್ಬರ ಮಕಕ್ಳ ಜತೆಗೂಡಿ ಯಾರೂ ಕಂಡರಿಯದ ಬಾಳು ಬಾಳಬಹುದಿತ್ತು. ಆದರೆ ಆಕೆಯ ದೇಶ ನಿಷ್ಠೆ ಅವಳ ಸಂಸಾರಕ್ಕಿಂತ ದೊಡ್ಡದಾಗಿತ್ತು.
ಕೋಟಿಗಟ್ಟಲೆ ಲೂಟಿ ಮಾಡಿ ನಕಲಿ ದೇಶನಿಷ್ಠೆ ತೋರಿಸುವ ನಮ್ಮ ರಾಜಕಾರಣಿಗಳ ನಡುವಲ್ಲಿ, ನಮ್ಮ ಪಕ್ಕದ ಮನೆಯ ಆಂಗ್‌ ಸಾನ್‌ ಸೂಕಿ 15 ವರ್ಷಗಳ ಕಾಲ ಗೃಹ ಭಂಧನ ಅನುಭವಿಸಿ ನವೆಂಬರ್ 13 ರಂದು ಬಿಡುಗಡೆಯಾಗಿದ್ದಾಳೆ. ಆಕೆ ಗೃಹ ಬಂಧನ ಅನುಭವಿಸಿದ್ದು ಆಕೆ ಮಾಡಿದ ತಪ್ಪಿಗಾಗಿ ಅಲ್ಲ. ಬರ್ಮಾ ಎಂಬ ಪುಟ್ಟ ದೇಶದ ಜನರಿಗಾಗಿ. ಅಲ್ಲಿನವರ ಕನಸಿಗಾಗಿ.
ಬದುಕು
ಬರ್ಮಾ ದೇಶ ಕಂಡ ನೈಜ ನಾಯಕ ಆಂಗ್‌ ಸಾನ್‌ರ ಮಗಳು ಈಕೆ. 1945 ಜೂನ್‌ 19ರಂದು ಜನನ. ಹುಟ್ಟಿದ ಎರಡು ವರ್ಷಕ್ಕೆ ಈಕೆಯ ಅಪ್ಪನ್ನನ್ನು ಕೊಲೆ ಮಾಡಲಾಯಿತು. ಪಿತಾಮಹನೇನೂ ಕಣ್ಮರೆಯಾದ ಆದರೆ ಆತನ ಸ್ಥಾನವನ್ನು ಸಮರ್ಥವಾಗಿ ಸೂಕಿ ತುಂಬಿದಳು. ಹಾಗಂತ ಸೂಕಿಗೆ ರಾಜಕಾರಣ ಇಷ್ಟವಂತಲ್ಲ. ಪ್ರಜಾಪ್ರಭುತ್ವ ಇಷ್ಟ. ನಮ್ಮ ದೇಶವನ್ನು ನಾವು ಆಳಬೇಕು ಯಾವುದೇ ಸೈನ್ಯಾಧಿಕಾರಿಗಳಲ್ಲ ಎನ್ನುವುದು ಆಕೆಯ ನಿಲುವು, 1972ರಲ್ಲಿ ಮೈಕಲ್‌ ಆರಿಸ್‌ರನ್ನು ಮದುವೆಯಾದ ಆಕೆಗೆ ಅಲೆಗ್ಸಾಂಡರ್ ಹಾಗೂ ಕಿಮ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
1988ರಲ್ಲಿ ನಡೆದ ಘಟನೆ ಆಕೆಯನ್ನು ಬರ್ಮಾದೇಶದ ಬಂಗಾರವನ್ನಾಗಿಸಿತು. ಅಲ್ಲಿನವರೆಗೂ ಇಂಗ್ಲೆಂಡ್‌ನಲ್ಲಿ ಸುಂದರ ಸಂಸಾರದಲ್ಲಿ ಭಾಗಿಯಾಗಿದ್ದ ಆಕೆ ನಂತರ ದೇಶಕ್ಕಾಗಿ ದುಡಿದಳು. ಸಾವಿನಂಚಿನಲ್ಲಿದ್ದ ತಾಯಿಯನ್ನು ಕಾಣಲು ಆಸ್ಪತ್ರೆಗೆ ಬಂದಿದ್ದ ಆಕೆ ಅಲ್ಲಿನ ಜನಸಾಗರ ಕಂಡು ದಂಗಾಗಿ ಹೋಗಿದ್ದಳು..! ಅಪ್ಪನ ಮೇಲೆ ಪ್ರೀತಿ ಇಟ್ಟ ಜನ. ಇಂದು ತಮ್ಮ ದೇಶದಲ್ಲೆ ತಾವೆಣಿಸದ ಬಾಳು ಬಾಳುತ್ತಿದ್ದಾರೆ. ಅಪ್ಪನ ಹಾದಿ ತಾನು ಹಿಡಿಯಬೇಕು ಎಂದು ರಾಜಕೀಯಕ್ಕೆ ಧುಮುಕಿದಳು. ಸೇನಾ ದಬ್ಬಾಳಿಕೆಯಲ್ಲಿ ನಲುಗಿದ್ದ ಜನಕ್ಕೆ ಸೂಕಿ ಆಸರೆಯಾದಳು. ಪ್ರಜಾಪ್ರಭುತ್ವ ಕನಸಾಯಿತು. ನ್ಯಾಷನಲ್‌ ಲಿಗ್‌ ಫಾರ್ ಡೆಮಾಕ್ರಸಿ ಸೇರಿದಾಗ ರಾಜಕೀಯ ಭವಿಷ್ಯ ನಿಚ್ಚಳವಾಯಿತು. ಶಾಂತಿ ಸಾರಿದ ಗಾಂಧೀಜಿ, ನೆಲ್ಸನ್‌ ಮಂಡೆಲಾ ಗುರುವಾದರು. ಹಾಗೇಯೆ ಗೌತಮ ಬುದ್ಧ...
ಕಣ್ಣೆದುರಿನ ಕೌರ್ಯ
8-8-88 ಕೌರ್ಯದಿಂದ ಈ ಪುಟ್ಟ ದೇಶ ವಿಶ್ವದ ಮನೆಮಾತಾಯಿತು. ಸೇನಾ ಆಡಳಿತದ ಕಣ್ಣಿಗೆ ಸೆಪ್ಟಂಬರ್ 8ರಂದು ಪ್ರತಿಭಟನೆಯಲ್ಲಿ ಸೇರಿದ್ದ 5ಸಾವಿರ ಮಂದಿ ಮನುಷ್ಯರಂತೆ ಕಾಣಲೇ ಇಲ್ಲ. ಮಾನವ ನರಬಲಿ ನಡೆದು ಹೋಯಿತು. ಆದರೆ ಸೇನೆ ಕೆಲವೇ ಜನ ಸತ್ತಿದ್ದು ಎಂದು ಹೇಳಿ ಸುಮ್ಮನಾಯಿತು. ಈ ಘಟನೆಯಿಂದ ಸೇನೆ ಇಕ್ಕಟ್ಟಿನ ಪರಿಸ್ಥಿತಿಗೆ ತಂದುಕೊಂಡಿತು. ಒಲ್ಲದ ಮನಸ್ಸಲ್ಲಿ ಮಹಾ ಚುನಾವಣೆಗೆ ಅಣಿ ಮಾಡಿತು. ಅಂದಿನ ಚುನಾವಣೆಯಲ್ಲಿ ನ್ಯಾಷನಲ್‌ ಲೀಗ್‌ ಫಾರ್ ಡೆಮಾಕ್ರಸಿ ಸ್ಪಷ್ಟ ಬಹುಮತ ಪಡೆದಾಗ ಸೂಕಿ ಬರ್ಮಾ ಜನರಿಗೆ ಮಹಾನ್‌ ನಾಯಕಿಯಾಗಿ ಬೆಳೆದಿದ್ದಳು. ಸೂಕಿ ಎಂದರೆ ಎನ್‌ಎಲ್‌ಡಿ ಎಂಬಂತಾದಾಗ ಸಹಜವಾಗಿ ಸೇನೆಯ ಕಣ್ಣು ಈಕೆಯ ಮೇಲೆ ಬಿದ್ದಿತು. ಅಲ್ಲಿನ ಸೇನಾ ಮುಖ್ಯಸ್ಥ ಜನರಲ್‌ ಥಾನ್‌ ಶ್ವೇ ಚುನಾವಣಾ ಫಲಿತಾಂಶಕ್ಕೆ ಮಾನ್ಯತೆ ನೀಡಲಿಲ್ಲ. ಸೂಕಿ ಎಲ್ಲಕ್ಕೂ ಕಾರಣ ಎಂದಾಗ ಅವಳನ್ನು ಗೃಹ ಬಂಧನದಲ್ಲಿರಸಲಾಯಿತು. ಅಲ್ಲಿಂದ ಇಲ್ಲಿಯವೆರೆಗೂ ಒಟ್ಟು ಮೂರು ಬಾರಿ ಸೂಕಿ ಗೃಹ ಬಂಧನ ಅನುಭವಿಸಿದ್ದಾಳೆ.
ನಂತರ ದಿನಗಳಲ್ಲಿ ಸೇನೆಯ ದಾರ್ಷ್ಟ್ಯ ಮುಂದುವರೆಯಿತು. 1989ರಲ್ಲಿ ಬರ್ಮಾ ಮಯನ್ಮಾರ್ ಆಯಿತು. ಅಲ್ಲಿಯವರೆಗೂ ರಂಗೂನ್‌ ಆಗಿದ್ದ ರಾಜಧಾನಿ ಯಾಂಗೂನ್‌ ಆಗಿ ಬದಲಾಯಿತು. ಸೇನೆ ನ್ಯಾಯಯುತವಾಗಿ ನಡೆದುಕೊಂಡಿದ್ದರೆ ಸೂಕಿ ಯಾವಾಗಲೂ ಬಂಧಮುಕ್ತಳಾಗಬೇಕಿತ್ತು. ಅದು ಅವರ ಜಾಯಮಾನವಾಗಿರಲಿಲ್ಲ, 2009 ಆಗಸ್ಟ್ 11ರಂದು ಸೂಕಿ ಬಿಡುಗಡೆಯನ್ನು 18 ತಿಂಗಳು ಮುಂದಕ್ಕೆ ಹಾಕಿದಾಗ ಸಹಜವಾಗಿಯೇ ಬರ್ಮಾದಲ್ಲಿ ಪ್ರತಿಭಟನೆಗಳಾದವು.
ಗಟ್ಟಿಗೊಳಿಸಿದ ಮಾತು
ಗೃಹ ಬಂಧನದಲ್ಲಿ ಆಕೆಯನ್ನು ನೋಡಿಕೊಳ್ಳಲು ಇಬ್ಬರು ದಾದಿಯರಿದ್ದರು. ಮೊಬೈಲ್‌, ಇಂಟರ್ನೆಟ್‌ ನಂತಹ ಯಾವುದೇ ಸೌಲಭ್ಯಗಳು ಆಕೆಗಿಲ್ಲ. ಅಕ್ಷರಶಃ ಜೈಲಿಗಿಂತ ಕಡೆಯ ಬಾಳು ಆಕೆಯದಾಗಿತ್ತು. ಸೂಕಿಯದು ಶಾಂತಿಯುತ ಹೋರಾಟ ಹಾಗಾಗಿಯೇ ಸೇನಾಧಿಕಾರಿಗಳಿಗೆ ಗೃಹಬಂಧನಕ್ಕಿಂತ ಹೆಚ್ಚಿನ ಮಟ್ಟಿಗಿನ ಶಿಕ್ಷೆ ನೀಡಲಾಗಲಿಲ್ಲ. ಅಹಿಂಸೆಯನ್ನು ಧ್ಯೇಯವನ್ನಾಗಿಟ್ಟುಕೊಂಡ ಸೂಕಿ ಮನಸ್ಸಿನ ಮೇಲೆ ಹಲವು ಘಟನೆಗಳು ಪ್ರಭಾವ ಬೀರಿವೆ. "ನನಗೆ ಬೌದ್ಧ ವಿಹಾರಗಳನ್ನು ನೊಡುವುದೆಂದೆರೇ ಭಾರಿ ಖುಷಿ''. 40 ವರ್ಷಗಳ ಹಿಂದೆ ಒಂದು ಬೌದ್ಧ ವಿಹಾರಕ್ಕೆ ಹೋಗಿದ್ದಾಗ ಅಲ್ಲಿದ್ದ ಮಾತು ಆಕೆಯ ಮನಸ್ಸಲ್ಲಿ ಅಚ್ಚಳಿಯದೇ ಉಳಿಯಿತಂತೆ.'' ಜೀವನದಲ್ಲಿ ಒಂದೊಂದು ಕ್ಷಣವೂ ನಿನ್ನನ್ನು ಹೆದರಿಸುವ ಪ್ರಯತ್ನಗಳಾದಾಗ ಭಯಪಡಬೇಡ. ಹಾಗಂತ ಭಯವೇ ಇಲ್ಲದಿರುವುದಿಲ್ಲ. ನಿನ್ನನ್ನು ಹೊಗಳಿದಾಗ ಸಂಭ್ರಮಿಸಬೇಡ. ಹಾಗೆಂದು ನಿನ್ನ ಸಂತೊಷಗಳನ್ನು ಕಳೆದುಕೊಳ್ಳಬೇಡ'' ನನ್ನ ಯಶಸ್ಸಿಗೆ ಇದೇ ಸೂತ್ರ ಎಂದು ಆಕೆ ಹೇಳಿಕೊಂಡಿದಾ್ದಳೆ.
ಈಕೆಯ ಶಾಂತಿಯುತ ಹೋರಾಟಕಾಕ್ಗಿ ಪ್ರತಿಷ್ಠಿತ ನೊಬೆಲ್‌ ಶಾಂತಿ ಪ್ರಶಸ್ತಿ ಸಹ ದೊರೆತಿದೆ.

ಇದೀಗ ದೇಶದ ಸಾವಿರಾರು ಜನತೆಯ ನೀರಿಕ್ಷೆಗಳು ನಿಜವಾಗಿದೆ. ನಮಗೆ ನಮ್ಮದೊಂದು ಬದುಕು ನೀಡುವ ಸಲುವಾಗಿ ತನ್ನ ಸುಂದರ ಬದುಕನ್ನೆ ಕಲ್ಲಾಗಿಸಿಕೊಂಡ ಆಕೆಯ ಮೇಲೆ ಅಲ್ಲಿನ ಜನರಿಗೆ ಪ್ರೀತಿ ಇದೆ ಅದಕ್ಕಿಂತ ಹೆಚ್ಚಾಗಿ ಮಮತೆ ಇದೆ. 1999ರಂದು ಆಕೆಯ ಪತಿ ನಿಧನರಾದಾಗಲೂ ಆಕೆ ಗೃಹ ಬಂಧನದಲ್ಲಿದ್ದಳು. ಬಿಡುಗಡೆಯಾಗಿರುವ ಆಕೆ ಇಂಟರ್ನೆಟ್‌ ಹೊಂದುವ ಆಸೆ ವ್ಯಕ್ತಪಡಿಸಿದ್ದಾಳೆ. 65 ವರ್ಷದ ಆಕೆ ಟ್ವೀಟರ್ ನಲ್ಲಿ ಟ್ವೀಟ್‌ ಮಾಡುವ ಬಯಕೆ ವ್ಯಕ್ತಪಡಿಸಿದ್ದಾಳೆ. ಆ ಮೂಲಕ ದೇಶದ ಜನತೆಯನ್ನು ಸಂಪರ್ಕಿಸುವ ಆಸೆ ಹೊಂದಿದ್ದಾಳೆ. ಮತ್ತೆ ಪ್ರಜಾಪ್ರಭುತ್ವಕ್ಕಾಗಿ ದನಿ ಎತ್ತುವ ಹಂಬಲದಲ್ಲಿದ್ದಾರೆ. ಒಂದಂತೂ ಸತ್ಯ ಆಕೆಯ ದೇಶನಿಷ್ಠೆ ಸಾಮಾನ್ಯವಾದುದಂತು ಅಲ್ಲ ಅವಳ ಆ ನಿಷ್ಠೆ ನಮಗೆಲ್ಲ ಮಾದರಿ ಆಗಬೇಕು.
ಸೇನಾ ಆಳ್ವಿಕೆಯಲ್ಲಿ ಕಂಗೆಟ್ಟು ಹೊಗಿದ್ದ ಬರ್ಮಾ ಒಡಲಲ್ಲಿ ಮತ್ತೆ ಪ್ರಜಾಪ್ರಭುತ್ವದ ಕನಸುಗಳು ಮೊಳಕೆಯೊಡೆದಿದೆ. ಸೂಕಿ ಬಿಡುಗಡೆ ಅಲ್ಲಿನ ಜನರಲ್ಲಿ ಮತ್ತೇ ಹೊಸ ನೇಸರನ ಆಶಾಕಿರಣ ಮೂಡಿಸಿದೆ. ವಿಶ್ವದ ಅತಿ ಪುರಾತನ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಅಮೆರಿಕ ಹಾಗು ಬ್ರಿಟನ್‌ ದೇಶಗಳು ಹಲವಾರು ಬಾರಿ ಬರ್ಮಾ ಸೇನಾ ಸರ್ಕಾರಕ್ಕೆ ಸೂಕಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರೂ ಒಪ್ಪದಿದ್ದ ಜನರಲ್‌ ಥಾನ್‌ ಶ್ವೇಗೆ ಈಗ ಜ್ಞಾನೋದಯವಾಗಿದೆ.
ಬುದ್ಧ ನಡೆದ ನೆಲದಲ್ಲಿ ಇನ್ನಾದರೂ ಶಾಂತಿ ನೆಲಸಲಿ....

ಪ್ರಕಟವಾದ ದಿನದ ವಿಶೇಷ ಪೇಜ್ ನ ಲಿಂಕ್ ಇಲ್ಲಿದೆ...

http://www.hosadigantha.in/epaper.php?date=11-15-2010&name=11-15-2010-7

Thursday, September 30, 2010

ನೀವು ಕಂಡ ಕನಸುಗಳು ಇನ್ನೂ ಹಾಗೇ ಉಳಿದಿವೆ..


ಶಂಕರ್ ನಾಗ್ ಎಂದೂ ತನಗೆ ಗೌರವ ನೀಡಿ ಎಂದು ಆಪೇಕ್ಷಿಸಿದವರೇ ಅಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ತಾನೊಬ್ಬ ಶ್ರೇಷ್ಠ ನಟ, ನಿರ್ದೇಶಕ ಎಂಬ ಹಮ್ಮು ಅವರಿಗೆ ಇರಲೇ ಇಲ್ಲ. ಆದ್ದರಿಂದ ಇಂದು ಜನ ಶಂಕರನಾಗ್ ರನ್ನು ಜನ ಪ್ರೀತಿಯಿಂದ ಏಕವಚನದಲ್ಲೆ ‘ನಮ್ಮ ಶಂಕರ್’ಹಾಗೇ ‘ಶಂಕ್ರಣ್ಣ' ಎಂದು ಸಂಬೊಧಿಸುತ್ತಾರೆ. ಏಕೆಂದರೆ ಅವರ ಪಾಲಿಗೆ ಶಂಕರ್ ನಾಗ್ ತಮ್ಮಮನೆಮಗ..

1990ರ ಸೆಪ್ಟಂಬರ್ 30, ಆ ದಿನದ ಮುಂಜಾನೆಯಲ್ಲಿ ದಾವಣಗೆರೆಯ ಕರಿ ಹೆಬ್ಬಾವಿನಂಥ ರಸ್ತೆಯ ಮೇಲೆ ಹೆಣವಾಗಿ ಬಿದ್ದ ಅವರೊಂದಿಗೆ ಚಿತ್ರಜಗತ್ತಿನ ಬಂಗಾರದ ಕನಸುಗಳು ನಡೆದು ಬಿಟ್ಟವು ಸದ್ದೇ ಇಲ್ಲದಂತೆ ! ಆತ ಅಗಲಿ ಇಪ್ಪತ್ತು ವರ್ಷವಾಯಿತು ಬೆಂಗಳೂರಿನ ಮೆಟ್ರೊ ಕಾಮಗಾರಿ ನೋಡುವಾಗಲೆಲ್ಲಾ ಆತ ನೆನಪಾಗುತ್ತಾನೆ. ಮನಸ್ಸಿಗೆ ಸುಪ್ತವಾಗಿ ಕಾಡಿ "ಅವನಿದ್ದಿದ್ದರೇ" ಎಂಬ ಭಾವ ಬರಿಸಿ, ಮರೆಯಾಗುತ್ತಾನೆ. ಆತ ಇಲ್ಲದಿರುವಾಗ ಆತನ ಬಗ್ಗೆ ಚಿಕ್ಕ ನೆನೆಪು ಮಾಡಿಕೊಳ್ಳೋಣ.

ಶಂಕರ್ ನಾಗ್‌ ಯಾನೆ ಶಂಕರ್ ನಾಗರಕಟ್ಟೆ .
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಾಗರಕಟ್ಟೆಯಲ್ಲಿ ಹುಟ್ಟಿದ ಶಂಕರ್ ನಾಗ್‌(ಇವರ ಅಣ್ಣ ಅನಂತ್‌ನಾಗ್‌) ಕನಸು ಕಂಗಳಲ್ಲಿ ಜೀವನದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ. ನಾಟಕ, ರಂಗಭೂಮಿ, ಕಲಾತ್ಮಕ ಚಿತ್ರಗಳೆಂದರೆ ಪಂಚಪ್ರಾಣ. ಹಾಗಂತ ಕೇವಲ ಚಿತ್ರ ನಿರ್ಮಾಣ ನಿರ್ದೇಶನ ಮಾಡುತ್ತಾ ಕೂರಲಿಲ್ಲ. ತನ್ನ ಮನಸ್ಸಿಗೆ ಬಂದ ಅಭಿವೃದ್ದಿಯ ಕನಸನ್ನು ಸರ್ಕಾರದ ಮುಂದಿಡುತ್ತಿದ್ದರು. ಲಂಡನ್‌ನಲ್ಲಿ ಮೆಟ್ರೊ ರೈಲುಗಳನ್ನು ನೋಡಿದ್ದ ಶಂಕರ್ ನಾಗ್, ಇದೇ ಮಾದರಿಯ ರೈಲುಗಳು ಬೆಂಗಳೂರಿಗೆ ಸೂಕ್ತ ಎಂದವರೇ ಸರ್ಕಾರಕ್ಕೆ ಎರಡು ಪುಟಗಳ ವರದಿ ಸಲ್ಲಿದ್ದರು. ಆದರೆ ಸರ್ಕಾರ ಅದನ್ನು ಬುಟ್ಟಿಗೆಸೆಯಿತು. ಇಂದು ಅವರ ಕನಸು ನನಸಾಗುವ ಹಂತದಲ್ಲಿದೆ ಆದರೆ ಅವರೇ ಇಲ್ಲ..!
ನಟಿಸಿದ ಮೊದಲ ಚಿತ್ರಕ್ಕೆ ಪ್ರಶಸ್ತಿ
  12 ವರ್ಷಗಳ ಚಿತ್ರಜೀವನದಲ್ಲಿ ಹೆಚ್ಚು ಕಡಿಮೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್ ನಾಗ್ ಅವರ ಪ್ರತಿಭೆ ಮೊದಲು ಗುರುತಿಸಿದವರು ಗಿರೀಶ್‌ ಕಾನಾರ್ಡ್‌ ಅವರು ನಿರ್ದೇಶಿಸಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಗಂಡುಗಲಿ ಪಾತ್ರಕ್ಕೆ ಆಯ್ಕೆಯಾದ ಇವರು ಆ ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದುಕೊಂಡರು. ನಂತರ ವಾಣಿಜ್ಯ ಚಿತ್ರಗಳೆಡೆ ವಾಲಿದ ಶಂಕರ್ ‘ಸೀತಾರಾಮು' ಚಿತ್ರ ಭರ್ಜರಿ ಯಶಸ್ಸು ಕಂಡಿತು. ನಂತರ ಆಟೋರಾಜ, ಸಿಬಿಐ ಶಂಕರ್, ಸಾಂಗ್ಲಿಯಾನ ಯಶಸ್ವೀಯಾದದ್ದೇ ತಡ ಸಾಲು ಸಾಲು ನಿರ್ಮಾಪಕರು ಇವರನ್ನು ನಾಯಕನಾಗಿ ಆಯ್ಕೆ ಮಾಡಿದರೂ ಅವರೇ ಕನಸೇ ಬೇರೆಯದಿತ್ತು. ಏನಾದರೂ ಹೊಸದನ್ನು ನೀಡಬೇಕು ಎನ್ನುವ ಮನಸ್ಸಾದಾಗ ನಿರ್ದೇಶಕರ ಪಾತ್ರ ನಿಭಾಯಿಸಿದರು. ಶಂಕರ್ ನಿರ್ದೇಶಿಸಿದ ಪ್ರಥಮ ಚಿತ್ರ ‘ಮಿಂಚಿನ ಓಟ’ಕ್ಕೆ ಏಳು ರಾಜ್ಯ ಪ್ರಶಸ್ತಿ ಪಡೆದು ತಮ್ಮ ಶಕ್ತಿ ತೋರಿಸಿದ್ದರು. ನಂತರ ರಾಷ್ಟ್ರ ಪ್ರಶಸ್ತಿ ಪಡೆದ ಆಕ್ಸಿಡೆಂಟ್‌, ಗೀತಾ, ಜನ್ಮ ಜನ್ಮದ ಅನುಭಂಧ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಡಾ. ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ ಒಂದು ಮುತ್ತಿನ ಕಥೆ ಇವೆಲ್ಲಾ ಶಂಕರ್ ನಾಗ್‌ ಗರಡಿಯಲ್ಲಿ ಬಂದ ಚಿತ್ರಗಳು.
    ಇಂದಿಗೂ ಶಂಕರ್ ನಾಗ್ ರನ್ನು ಹಲಾವಾರು ಕಾರಣಗಳಿಗೆ ನೆನಪಿಸಿಕೊಳ್ಳುತ್ತಾರೆ. ಆಗ ಟಿವಿ ಎಂದರೆ ದೂರದರ್ಶನ ಮಾತ್ರ. ಈಗಿನ ಹಾಗೆ ಹಳ್ಳಿಹಳ್ಳಿಗೂ ಟಿವಿ ಚಾನೆಲ್‌ಗಳು ಇರಲಿಲ್ಲ. ಅಂತದ್ದರಲ್ಲಿ ಶಂಕರ್, ಆರ್‌.ಕೆ. ನಾರಾಯಣ್‌ ಅವರ ಮಾಲ್ಗುಡಿ ಡೇಸ್‌ನ್ನು ಧಾರವಾಹಿಯನ್ನಾಗಿಸಿದರು. ಬಹು ಜನಪ್ರಿಯಗೊಂಡ ಈ ಧಾರವಾಹಿ ಶಂಕರ್ ನಾಗ್‌ ಎಂಬ ಕನ್ನಡದ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಕನ್ನಡಕೊಬ್ಬ ಸಮರ್ಥ ನಿರ್ದೇಶಕ ದಕ್ಕಿದಂತಾಯಿತು ಎಂದು ನಿಟ್ಟುಸಿರಿಟ್ಟರು. ನಂತರ ಸ್ವಾಮಿ ಎಂಬ ಧಾರವಾಹಿ ನಿರ್ದೇಶಿಸಿದರು.
ಬೆಂಗಳೂರ ಕನಸು.
 ಇಂದು ಬೆಂಗಳೂರಿನಲ್ಲಿ ವಿಶಾಲವಾದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿಗೆ ಇದು ಅನಿವಾರ್ಯವೆಂದು ಹೇಳಿದವರು ಶಂಕರ್ ನಾಗ್, ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಠಿಯಲ್ಲಿ ನಂದಿ ಬೆಟ್ಟಕ್ಕೆ ರೋಪ್ ಕಟ್ಟುವ ಯೋಜನೆ ರೂಪಿಸಿದ್ದರು ಅದನ್ನು ಒಪ್ಪಿದ್ದ ಸರ್ಕಾರ ಅದರ ಭೂಮಿಪೂಜೆಯನ್ನು ನಡೆಸಿದ್ದರು. ಆದರೆ ಶಂಕರ್ ನಾಗ್ ಮರಣದ ನಂತರ ಅವರ ಜೊತೆಯಲ್ಲಿಯೇ ಅವರ ಈ ಬಹುದೊಡ್ಡ ಕನಸು ಮಣ್ಣು ಸೇರಿತ್ತು.
 ಶಂಕರ್ ನಾಗ್ ಚಿತ್ರದಲ್ಲಿ ನಟಿಸುವುದು ಕೇವಲ ಹೊಟ್ಟೆಪಾಡಿಗಾಗಿ ಮಾತ್ರ. ಆದರೆ ಅವರ ಆಸಕ್ತಿ ರಂಗಭೂಮಿಯ ಮೇಲೆ ಇತ್ತು ಇದಕ್ಕಾಗಿಯೇ ‘ಸಂಕೇತ್’ ಎಂಬ ರಂಗಭೂಮಿ ತಂಡವನ್ನು ರಚಿಸಿದ್ದರು ಇದರ ಮೂಲಕ ಕಾರ್ನಾಡ್ ರ ‘ನಾಗಮಂಡಲ', ‘ಅಂಜುಮಲ್ಲಿಗೆ' ಹಾಗೆ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎನ್ನುವ ನಾಟಕವನ್ನು ನಿರ್ದೇಶಿಸಿದ್ದರು. ಇಂದಿಗೂ ಸಂಕೇತ್ ತಂಡ ರಂಗಭೂಮಿ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿ ಮುನ್ನಡೆಯುತ್ತಿದೆ. ಆದರೆ ಕನ್ನಡಕ್ಕೆ ಕರ್ನಾಟಕದಲ್ಲೇ ಸುಸಜ್ಜಿತವಾದ ಸ್ಟುಡಿಯೋ ಬೇಕೆಂಬ ದಿಸೆಯಲ್ಲಿ ಆರಂಭಿಸಿದ್ದ ‘ಸಂಕೇತ್' ಸ್ಟುಡಿಯೋ ಉಳಿಸಿಕೊಳ್ಳಲಾಗಲಿಲ್ಲ ಆದರೆ ಅವರ ಕನಸಿನ ಕೂಸು ರಂಗಶಂಕರ ಇಂದು ಜೆ.ಪಿ.ನಗರದಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿದೆ. ಪ್ರತಿನಿತ್ಯದ ರಂಗಭೂಮಿ ಕಾಯಕದಲ್ಲಿ ತೊಡಗಿರುವ ರಂಗಶಂಕರ ಶಂಕರನಾಗ್ ನೆನಪನ್ನು ಇನ್ನೂ ಹಸಿರಾಗುಳಿಸಿದೆ.
ದೇವರು ಕರೆಸಿಕೊಂಡ
ತನ್ನ 12 ವರ್ಷಗಳ ಚಿತ್ರಜೀವನದಲ್ಲಿ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿತ್ತು.ಒಂದೇ ಸಮಯದಲ್ಲಿ ಮೂರ್ನಾಲ್ಕು ಕೆಲಸ ಮಾಡುತ್ತಿದ್ದ ಶಂಕರನಾಗ್  ಶರವೇಗದ ಕೆಲಸ ನೋಡಿ ಆ ದೇವರಿಗೂ ಅಸೂಯೆಯಾಗಿದ್ದಿರಬೇಕು. ಸೆಪ್ಟಂಬರ್ 30ರಂದು ಜೋಕುಮಾರಸ್ವಾಮಿ ಚಿತ್ರದ ಮಾತುಕತೆಗಾಗಿ ಬೆಂಗಳೂರಿಗೆ ಹೆಂಡತಿ ಅರುಂಧತಿ ನಾಗ್ ಮಗಳು ಕಾವ್ಯ ಜೊತೆಯಲ್ಲಿ ಬರುತ್ತಿದ್ದ ಶಂಕರನಾಗ್ ಕಾರು ದಾವಣಗೆರೆಯ ಆನುಗೋಡಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತಕ್ಕಿಡಾಯಿತು. ಅಷ್ಟೇ, ಶಂಕರನಾಗ್ ಎಂಬ ಪಾದರಸದ ಯುವಕ ಹೆಣವಾಗಿದ್ದ..! ಆತ ಅಭಿನಯಿಸಿದ್ದ ಕೊನೆಯ ಚಿತ್ರ ನಿಗೂಢ ರಹಸ್ಯ.  
ಅಲ್ಲಿಗೆ ಕನ್ನಡ ಚಿತ್ರರಂಗದ ಅಪೂರ್ವ ಕುಡಿಯೊಂದು ಕಂಡು ಕಾಣದಂತೆ ಕಣ್ಮರೆಯಾಯಿತು. ಆದರೆ ಶಂಕರನಾಗ್ ಎಂಬ ಕನಸು ಕಂಗಳ ಯುವಕ ಇಂದಿಗೂ ಪ್ರತಿಯೊಬ್ಬ ಆಟೋ ಡ್ರೈವರ್  ಕಂಗಳಲ್ಲಿದ್ದಾನೆ. ಆತನ ಮುಗುಳ್ನಗುವಿನ ಚಿತ್ರ ಬೆಂಗಳೂರಿನ ಹೆಚ್ಚಿನ ಆಟೋಗಳ ಮೇಲೆ ರಾರಾಜಿಸುವಾಗ ಶಂಕರನಾಗ್ ಎಂಬ ಅಸಮಾನ್ಯ ಪ್ರತಿಭೆ ಹೇಗೆ ಜನಸಾಮಾನ್ಯರಲ್ಲಿ ಆಪ್ತವಾಗಿ ಬೇರೂರಿದ್ದ ಎನ್ನುವುದು ಸ್ಪಷ್ಠವಾಗುತ್ತದೆ.

ಅಯೋಧ್ಯೆ ತೀರ್ಪು..ಸುದ್ದಿಮನೆಯ ಹಾಡು...

ಬಹು ನಿರೀಕ್ಷಿತ ಅಯೊಧ್ಯೆ ತೀರ್ಪು ಹೊರಬಿದ್ದಿದೆ..ಮಾಧ್ಯಮ ಮಂದಿ ಎಚ್ಚರಿಸುವಂತೆ ಏನೂ ಆಗಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಮೂಗು ದಾರ ಹಾಕಿದ್ದು ಕಾರಣವಾದರೂ, ಪತ್ರಿಕೆಗಿಂತ, ಟಿವಿ ಮಾದ್ಯಮದವರ ಅವಸ್ಥೆ ಕಂಡು ನಮ್ಮ ಸುದ್ದಿಮನೆಯಲ್ಲಿ ನಗುವುದೊಂದೆ ಬಾಕಿ..ಕನ್ನಡದ ಪ್ರತಿಷ್ಟತ ನ್ಯೂಸ್ ಚಾನೆಲ್ ಒಂದು ಬೆಳಗಿನ್ನಿಂದಲೆ ಒದರುತ್ತಾ ಸಾಗುತ್ತಿತ್ತು..ಅದಕ್ಕೆ ಲೆಕ್ಕವಿಲ್ಲ ದಷ್ಟು ಬ್ರೇಕಿಂಗ್ ನ್ಯೂಸ್ ಗಳು ಬರುತ್ತಿದ್ದವು. ಬೆಳಿಗ್ಗೆ ಬೆಳಿಗ್ಗೆ ನಿರೂಪಕಿ ಮೀನ್ಸ್ ಆಂಕರ್ ಕೆಳಿದ ಪ್ರಶ್ನೆ ಅಭಾಸದ ಪರಮಾವಧಿ ಎಂದರೆ ತಪ್ಪಾಗಲಿಕ್ಕಿಲ್ಲ.. ಎಲ್ಲಾ ಕಡೆ ಗಲಾಟೆ, ದೊಂಬಿ ಆಗಬಾರದು ಎಂದು ಪೋಲೀಸ್ ಸರ್ಪಗಾವಲು ಇದ್ದಿದ್ದರೆ..ಆಕೆ ಪೋನ್ ಇನ್ ಕಾಲ್ ಅಲ್ಲಿ ಇವತ್ತು ಗಲಾಟೆ ಆಗುವ ಸಂಭವ ಕಾಣುತ್ತಿದೆಯಾ ಎಂದು ಮೂರು-, ನಾಲ್ಕು ಬಾರಿ ಕೆಳಿದಳು. ಆಕೆಯ ಪ್ರಕಾರ ಗಲಾಟೆ ಆದರೆ ಮತ್ತೊಂದು ಬ್ರೆಕಿಂಗ್ ನ್ಯೂಸ್ ಆಗುತ್ತದೆ ಎಂದು ಭಾವಿಸಿರಬೇಕು..ಮೀಡಿಯಾಗಳು ದುರಂತದ ಹಾದಿಯಲ್ಲಿ ಸಾಗುತ್ತಿರುವ ಉದಾಹರಣೆ ಗೆ ಈದು ಹೊಸ ಸೆರ್ಪಡೆ..ಅಷ್ಟೆ.
ಇನ್ನು ನಮ್ಮ ಸುದ್ದಿ ಮನೆಯಲ್ಲಿ...
ಅಯೋಧ್ಯೆ ಎಂದರೆ ಬಹಳ ದೊಡ್ಡ ನ್ಯೂಸ್ ಆಗುವ ಪೇಪರ್..ಆ ದಿನ ನನ್ನ ಪ್ರತಿನಿತ್ಯದ ಪೇಜ್ನ್ನು ಅಯೋಧ್ಯೆ ಗಾಗಿ ಮೀಸಲಿಟ್ಟಿದದರಿಂದ ಸ್ವಲ್ಪ ಆರಾಮದಿಂದಿದ್ದೆ ಆದರೆ ಗಂಟೆ 12 ದಾಟುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಧಾವಂತ ಆರಂಭವಾಗಿತ್ತು. ಇಂದು ಅಯೋಧ್ಯೆ ತೀರ್ಪು ಏನಾಗಲಿದೆಯೂ..ಎಂಬ ಬಗ್ಗೆ ಆಲೋಚಿಸುತ್ತಿದ್ದೆ..ಹಾಗಾಗಿ ನನ್ನಿಂದ ಒಂದ್ಕ್ಷರವನ್ನು ಬರೆಯಲಾಗಲಿಲ್ಲ..ಆಫೀಸಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದೆ..ಎಲ್ಲರ ಕಂಪ್ಯೂಟರ್ ಮೇಲೂ (ಅದರ ಅಕ್ಕ-ಪಕ್ಕದಲ್ಲೂ) ಅಯೋಧ್ಯೆಯ ನ್ಯೂಸ್ ಗಳ ಪುರಾಣಗಳು..ಜನರಲ್ ಡೆಸ್ಕ್ನಲ್ಲಿದ್ದ ಎಲ್ಲರೂ ಅದರ ಬಗ್ಗೆ ಉತ್ಸುಕರಾಗಿದ್ದರು. ಇಂದು ಆಫೀಸ್ ನಲ್ಲಿ ಯಾರಿಗೂ ರಜಾ ನೀಡದ್ದರಿಂದ ಕಚೇರಿ ತುಂಬಿ ತುಳುಕುತ್ತಿತ್ತು.
3.30 ಆದಾಗ ಎಲ್ಲರ ಕಂಪ್ಯೂಟರ್ ನಲ್ಲೂ ಅಯೋಧ್ಯೆಗೆ ಸಂಬಂಧ ಪಟ್ಟ ವೆಬ್ ತಾಣಗಳು ಕಂಪ್ಯೂಟರ್ ಮೇಲೆ ರಾರಾಜಿಸಿದ್ದವು. ನಾನು ಸಿಎನ್ಎನ್ ಐಬಿನ್ ಚಾನೆಲ್ಗಳ ಮೇಲೆ ಕಣ್ಣಿಟ್ಟಿದ್ದೆ. ಪ್ರತಿಕ್ಷಣ ಹೊಸ ಹೊಸ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. 4 ಗಂಟೆಗೆ ತೀರ್ಪು ಪ್ರಕಟಗೊಳ್ಳುತ್ತದೆ ಎಂದಾಗ ಸ್ವಲ್ಪ ನಿರಾಳ. ಹಾಗೆ ನನ್ನ ಸಪ್ಲಿಮೆಂಟ್  ಪೇಜ್ ನೋಡಿ ಮುಗಿಸಿದಾಗ ಗಂಟೆ ಸರಿಯಾಗಿ 4 ಆಗಿತ್ತು.. ರಿಪೋರ್ಟಿಂಗ್ ಸೆಕ್ಷನ್ ನಲ್ಲಿ ಆಗಲೇ ಯಾರ್ಯಾರ ಪ್ರತಿಕ್ರಿಯೆ ತೆಗೆದುಕೊಳ್ಳಬೇಕೆಂಬ ಚರ್ಚೆ ಆರಂಭವಾಗಿತ್ತು.. ಪ್ರತಿದಿನ 5 ಗಂಟೆಗೆ ಸಭೆಸೇರುವ ಸೀನಿಯರ್ಗಳ ತಂಡ ಅಂದು ಬೇಗನೇ ಸಭೆ ಸೇರಿ ಆಗಬೇಕಾದ ಕೆಲಸಗಳ ಬಗ್ಗೆ ತಿರ್ಮಾನಿಸಿತ್ತು. ಅಲ್ಲಿಗೆ. ಟಿವಿಯಲ್ಲಿ ಅಯೋದ್ಯೆ ಕುರಿತಾದ ತೀರ್ಪು ಹೊರಬಂದಿತ್ತು.
ತಮ್ಮ ಸ್ವಸ್ಥಾನ ದಿಂದ ಎಲ್ಲರೂ ಎದ್ದು ಡೆಸ್ಕ್ ವಿಭಾಗದಲ್ಲಿರುವ ಟಿವಿ ಹತ್ತಿರ ಸೇರಿದ್ದರು. ಕ್ಷಣ ಕ್ಷಣವೂ ಕುತೂಹಲ. ಅದರಲ್ಲಿ ಡಿಶಿಶನ್ ಎನಂತ ಹಾಕಿದ್ದಾರೆ ಆ ಚಾನೆಲ್ ಹಾಕಿ, ಈ ಚಾನೆಲ್ ಹಾಕಿ ಎಂಬ ಸಣ್ಣ ಧ್ವನಿಗಳು ಕೇಳಿಬರುತ್ತಿದ್ದರೂ..ಅಂತೂ ಎನ್ ಡಿಟಿವಿ ಯಲ್ಲಿ, ಆಜ್ ತಕ್ ಚಾನೆಲ್ ನಲ್ಲಿ ಡಿಶಶನ್ ಹೊರಬಿದ್ದದ್ದು ಕೆಳಿಸಿಕೊಂಡಾಗ ಒಂದು ಸಾರಿ ಚಪ್ಪಾಳೆ ತಟ್ಟಿ ಖುಷಿ ಪಟ್ಟೆವು. ನಂತರ ಟೀ ಕುಡಿದು ತೀರ್ಪು ಬಗ್ಗೆ ಚರ್ಚೆಗಳಾದವು ಕೆಲವರಿಗೆ ಸಮಾದಾನವಾಗಲಿಲ್ಲ.."ನನಗೂ ಸೇರಿ", ನಂತರ ಕೆಲಸದ ಸಮಯ..ಅಂತೂ ರಾಮನ ಭೂಮಿ ರಾಮನಿಗೆ ಸಿಕ್ಕತು ಅನ್ನೊದಷ್ಟೆ ಸಂತೋಷ.

Tuesday, September 28, 2010

ದಿಕ್ಕಿಲ್ಲದ ‘ಗಜ'ರಾಜ..

 ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಉಳಿಸಿಕೊಳ್ಳಲು ನಾವು ಹರಸಾಹಸ ಪಡುತ್ತಿದ್ದೆವೆ. ಇಂದು ಆನೆಗಳ ಗತಿ ಅದೇ ದಾರಿಯಲ್ಲಿ ಸಾಗುತ್ತಿದೆ. ಪಾರಂಪರಿಕ ಪ್ರಾಣಿ ಎಂದು ಘೋಷಿಸಿದರೂ ಆನೆಗಳ ಉಳಿವಿಗೆ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ.

ಆನೆಗಳ ಸಾವು ಮಾಮೂಲಿಯಾಗಿರುವಾಗ ದೇಶದಲ್ಲಿ ಇನ್ನೊಂದು ಬಹುದೊಡ್ಡ ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಸಿಲುಕಿ ಬರೋಬ್ಬರಿ ಏಳು ಆನೆಗಳು ಮೃತಪಟ್ಟಿವೆ..
ಹಾಗಾದರೆ ಇದಕ್ಕೆಲ್ಲ ಕೊನೆ ಎಂದು.
 ಎಲಿಫೆಂಟ್ ಟಾಸ್ಕ್ ಫೋರ್ಸ ಬಿಡುಗಡೆಗೊಳಿಸಿದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 1987ರಿಂದ ಇಲ್ಲಿಯವರೆಗೆ ಒಟ್ಟು 150 ಆನೆಗಳು ರೈಲಿಗೆ ಆಹಾರವಾಗಿವೆ..! ಆದರೆ ಭಾರತದ ರಾಜಕಾರಣಿಗಳು ಇದೆಲ್ಲ ಮಾಮೂಲಿ ಎಂಬಂತೆ ಹೇಳುತ್ತಿರುವುದು ನಿಜಕ್ಕೂ ದುರಂತ. ಆನೆಗಳು ರೈಲಿಗೆ ಸಿಲುಕಿ ಸಾವೀಗೀಡಾಗುತ್ತಿರುವ ವಿಚಾರದಲ್ಲಿ ಪಶ್ಚಿಮ ಬಂಗಾಳ ದ್ವಿತೀಯ ಸ್ಥಾನಿಯಾಗಿದ್ದರೆ ಮೊದಲ ಸ್ಥಾನದಲ್ಲಿರುವ ಅಸ್ಸಾಂನಲ್ಲಿ ಶೇ.36 ಆನೆಗಳು ರೈಲಿಗೆ ಸಿಲುಕಿ ಸಾವಿಗೀಡಾಗುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು..
 ಹಾಗೆ ಉತ್ತರ ಖಂಡದಲ್ಲಿ ಶೇ. 14, ಜಾರ್ಖಂಡ್ ನಲ್ಲಿ ಶೇ.10, ತಮಿಳುನಾಡಿನಲ್ಲಿ ಶೇ.6 ಉತ್ತರ ಪ್ರದೇಶದಲ್ಲಿ ಹಾಗು ಕೇರಳದಲ್ಲಿ ಶೇ.3 ರಷ್ಟು ಆನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಆದರೆ ಇದಾವುದರ ಪರಿವೇ ಇಲ್ಲದ ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ಸುಖ ಕಂಡು ಕೊಳ್ಳುತ್ತಿದ್ದಾರೆ. ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಿದ ಮರುದಿನವೇ ಏಳು ಆನೆಗಳ ಮೃತಪಟ್ಟರಿವುದಕ್ಕೆ ನಮ್ಮ ಕೇಂದ್ರ ಪರಿಸರ ಸಚಿವ ರೈಲ್ವೆ ಮಂಡಳಿ ಜೊತೆ ಮಾತನಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಪಾಪ ರೈಲ್ವೇ ಅಧಿಕಾರಿಗಳು ಏನು ತಾನೆ ಮಾಡಿಯಾರು..?
ಆ ಪ್ರದೇಶದಲ್ಲಿ ಆನೆಗಳ ಸಾವು ಇದೆ ಮೊದಲಲ್ಲ ಹಲವಾರು ಬಾರಿ ಸಂಭವಿಸಿದೆ ಎಂದು ಸಚಿವರೇ ಹೇಳಿದ್ದಾರೆ. ಮೊದಲ ಬಾರಿ ಇಂತಹ ಘಟನೆ ಸಂಭವಿಸಿದ್ದಾಗ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲವೇನೋ.
ಇಷ್ಟಲ್ಲದೇ..
ಆನೆಗಳು ಹೀಗೆ ಅಚಾತುರ್ಯದಿಂದ ಸಾಯುವುದಲ್ಲದೇ ಇನ್ನು ಹಲವಾರು ಕಾರಣಗಳಿಗೆ ಸಾಯುತ್ತವೆ. ಕಾಡುಗಳ್ಳ ವೀರಪ್ಪನ್ ಮರೆಯಾದರೇನಂತೆ ಇಂದಿಗೂ ಅರಣ್ಯಗಳಲ್ಲಿ ಹಲವಾರು ವೀರಪ್ಪನ್ ಗಳು ದಂತಕ್ಕಾಗಿ ಆನೆಯನ್ನು ಭೇಟೆಯಾಡುತ್ತಲೆ ಇದ್ದಾರೆ. ಅಲ್ಲದೇ ಕಾಡುಗಳ ನಾಶದಿಂದ ಆನೆಗಳು ನಾಡಿಗೆ ದಾಳಿ ಇಡುವ ವರದಿಗಳು ಹೆಚ್ಚುತ್ತಲಿವೆ ಕರ್ನಾಟಕದಲ್ಲಿ ಹಾಸನ, ಮಡಿಕೇರಿ, ವೀರಾಜಪೇಟೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತವೆ. ರಾಜ್ಯದಲ್ಲಿ ಬನ್ನೇರುಘಟ್ಟ, ಬಂಡೀಪುರ, ಬಿಳಿಗಿರಿರಂಗಸ್ವಾಮಿ, ಕೊಳ್ಳೆಗಾಲದಲ್ಲಿ ಆನೆಗಳು ಹೆಚ್ಚಿವೆ. ಭದ್ರಾ ಹಾಗೂ ದಾಂಡೇಲಿಯಲ್ಲಿ ಆನೆಗಳ ಸಂತತಿ ತುಂಬಾ ಕಡಿಮೆ ಇದೆ. ಆನೆಗಳು ನಾಡಿಗೆ ದಾಳಿ ಮಾಡುತ್ತದೆ ಎನ್ನುವುದನ್ನೆ ನೆಪ ಮಾಡಿಕೊಂಡ ಹಲವರು ಕಾಡಾನೆಗಳನ್ನು ದಂತಕ್ಕಾಗಿ ಉಪಯೋಗಿಸುತ್ತಿದ್ದಾರೆ.
ಸರ್ಕಾರದ ಹೊಣೆ ಏನು?
ಆನೆಗಳ ಸಂತತಿ ರಕ್ಷಣೆಯ ಕಾರ್ಯವನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.
ಕರ್ನಾಟಕದಲ್ಲಿ ಅರಣ್ಯ ಇಲಾಖೆ ಹಾಕಿರುವ ವಿದ್ಯುತ್ ಬೇಲಿ 12ವೋಲ್ಟನದ್ದಾಗಿದ್ದು ಇದರಿಂದ ಆನೆ ಸಾವು ಸಂಭವಿಸುವುದಿಲ್ಲ ಆದರ ಇಂದು ಇದರ ನಿರ್ವಹಣೆಯ ಕೊರತೆಯೇ ಜಾಸ್ತಿಯಾಗಿ ಕಣ್ಣಿಗೆ ಕಾಣುತ್ತಿದೆ. ಆದರೆ ಗ್ರಾಮಗಳಲ್ಲಿ ತಂತಿ ಬೇಲಿಗೆ ನೇರವಾಗಿ ವಿದ್ಯತ್ ಪ್ರವಹಿಸುತ್ತಾರೆ. ಇದರಲ್ಲಿ 230 ವೋಲ್ಟ್ ವಿದ್ಯುತ್ ಇರುವುದರಿಂದ ಇದನ್ನು ಸರ್ಶ್ಪಿಸುವ ಆನೆಗಳು ಸಾವನಪ್ಪುತ್ತವೆ ಇದನ್ನು ಮೊದಲು ತಡೆಯಬೇಕು.
ವಿದೇಶದಲ್ಲಿ ಈ ಕಾರ್ಯ
*ಆಫ್ರಿಕಾ ಆನೆಗಳ ತವರೂರು. ಇಲ್ಲಿ ಹೆಚ್ಚಾಗಿ ಕಂದಕಗಳನ್ನು ನಿರ್ಮಾಣ ಮಾಡುವ ಉಪಾಯ ಕಂಡುಕೊಂಡಿದ್ದಾರೆ.
 * ಜೇನು ಗೂಡು ಇರುವ ಮರಗಳಿಗೆ ಆನೆಗಳು ದಾಳಿ ಮಾಡುವುದಿಲ್ಲ ಹಾಗಾಗಿ ಕೀನ್ಯಾ ಮತ್ತು ಜಿಂಬಾಬ್ವೆಗಳಲ್ಲಿ ಜೇನುಹುಳು ಸಾಕಾಣಿಕೆ ಮಾಡುವ ಮೂಲಕ ಆನೆಗಳ ದಾಳಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.
* ಹಾಗೆ ಅಲ್ಲಿ ಹಗ್ಗವನ್ನು ಬೇಲಿಗಳಿಗೆ ಕಟ್ಟಿ ಅದಕ್ಕೆ ಮೆಣಸಿನ ಪುಡಿಯನ್ನು ಹಚ್ಚುತ್ತಾರೆ.
* ಹಾಗೆ ಕೆಲವು ಕಡೆ ರೈತರು ತಮ್ಮ ಬೇಲಿಗಳಿಗೆ ಕನ್ನಡಿಯ ಚೂರುಗಳನ್ನು ಹಾಗೆ ‘ಸೀಡಿ'ಗಳನ್ನು ಕಟ್ಟುತ್ತಾರೆ. ಚಂದ್ರನ ಬೆಳಕಲ್ಲಿ ಅದು ಹೊಳೆಯುವುದರಿಂದ ಆನೆಗಳು ದಾಳಿ ಮಾಡುವುದಿಲ್ಲ ಎಂಬ ನಂಬಿಕೆ ಅವರಲ್ಲಿದೆ.
ಎಲ್ಲವೂ ದಂತಕ್ಕಾಗಿ..
 70 ರಿಂದ 80 ಸಾವಿರದಷ್ಟು ಬೆಲೆಬಾಳುವ ಆನೆದಂತಗಳ ಕಳ್ಳಸಾಗಾಣಿಕೆ ಇಂದು ಅವ್ಯಾಹತವಾಗಿದೆ.ಎಲ್ಲರೂ ದಂತ ಸಾಗಿಸುವಾಗ ಸಿಕ್ಕಿ ಬೀಳುತ್ತಾರೆಯೆ ಹೊರತು ಆನೆಯನ್ನು ಸಾಯಿಸುವಾಗ ಸಿಕ್ಕಿ ಬೀಳುವುದಿಲ್ಲ. ಸರಾಸರಿ 20ಕೆ.ಜಿ ತೂಕದ ಆನೆಯ ದಂತ ಹಲಾವರು ಕರಕುಶಲ ವಸ್ತುಗಳ ಉತ್ಪಾದನೆಗಾಗಿ ಬಳಕೆ ಆಗುತ್ತವೆ. ಕೆಲವರಿಗೆ ಆನೆಯ ದಂತಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿರುವುದರಿಂದ ಹಾಗಾಗಿ ಇಂದು ನಮಗೆ ಆನೆಗಳು ಕಾಣ ಸಿಗುವುದು ಬಾರಿ ಕಡಿಮೆ ಆದರೆ ಆನೆಯ ದಂತಗಳು ಪ್ರತಿನಿತ್ಯ ಸುದ್ದಿಯಾಗುತ್ತವೆ.
ರಕ್ಷಿಸುವ ಹೊಣೆ ಎಲ್ಲರದ್ದಾಗಿರಲಿ..
ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಉಳಿಸಿಕೊಳ್ಳಲು ನಾವು ಹರಸಾಹಸ ಪಡುತ್ತಿದ್ದೆವೆ. ಇಂದು ಆನೆಗಳ ಗತಿ ಅದೇ ದಾರಿಯಲ್ಲಿ ಸಾಗುತ್ತಿದೆ. ಪಾರಂಪರಿಕ ಪ್ರಾಣಿ ಎಂದು ಘೋಷಿಸಿದರೂ ಆನೆಗಳ ಉಳಿವಿಗೆ ಹಾಗೂ ಅದರ ರಕ್ಷಣೆಗೆ ಸರ್ಕಾರ ಯಾವೊಂದು ಕ್ರಮವನ್ನು ಕೈಗೊಳ್ಳದಿರುವುದು ಬೇಸರದ ಸಂಗತಿಯೇ. ರೈಲಿಗೆ ಸಿಲುಕಿ ಸತ್ತದ್ದಕಾಗಿಯೇ ಏನೂ ಸಚಿವ ಜೈರಾಂ ರಮೇಶ್ ಆನೆಗಳ ರಾಷ್ಟ್ರೀಯ ಸಂರಕ್ಷಣಾ ಪ್ರಾಧಿಕಾರ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೆ ರೈಲ್ವೆ ಸಚಿವೆ ಕೆಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಗಳ ಜೊತೆ ಮುಂದಿನವಾರ ಮಾತನಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರೂ ಅವರ ಮಾತುಕತೆಗಳು ಹಾಗೂ ಇನ್ಯಾವುದೋ ಅಧಿವೇಶನಗಳು ಆನೆಗಳ ಜೀವವನ್ನು ಕಾಪಾಡುವುದಿಲ್ಲ ಹಾಗಾಗಿ ಆನೆಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ. ಪ್ರಾಧಿಕಾರ ಸ್ಥಾಪನೆ ಮಾಡುವ ಭರವಸೆ ನೀಡಿ ನಂತರ ಜಾರಿಕೊಳ್ಳುವ ಬದಲು ಇಂತಹ ಹೇಳಿಕೆಗಳು ನೀಡದೇ ಇರುವಂತಹ ಸೌಜನ್ಯವನ್ನು ರಾಜಕಾರಣಿಗಳು ಬೆಳೆಸಿಕೊಳ್ಳಲಿ.

ಹೊಸದಿಗಂತ ಪತ್ರಿಕೆಯ ವಿಶೇಷ ಪುಟದಲ್ಲಿ ಸೆಪ್ಟಂಬರ್ 26 ರಂದು ಪ್ರಕಟವಾದ ಬರಹ

Sunday, September 19, 2010

ನಾಲ್ಕು ಚಿತ್ರ, ನೂರಾರು ಚರ್ಚೆಗಳು...

ತನ್ನ ರಾಜ್ಯಕ್ಕೆ ಇರುವ ಸಮಸ್ಯೆಗಳನ್ನೇ ಚಿತ್ರ ಮಾಡಲು ಆಸಕ್ತಿ ತೋರಿಸಿ, ಅದನ್ನು ಸರ್ಕಾರದ ಮನಗಾಣಿಸುವುದರಿಂದಲೇ ದೇಶದ ಹೆಸರಾಂತ ನಿರ್ದೇಶಕರಿಗಿಂತ  ಶೆಟ್‌ಗಾಂವಕರ್ಎಂಬ ಯುವಕ  ಆಪ್ತವಾಗುತ್ತಾನೆ.
ಮುರಿದು ಹೋದ ಬದುಕು....

"ಪಾಲ್ತಡಾಚೋ ಮುನಿಸ್‌". ಗೋವಾದ ಯುವ ನಿರ್ದೇಶಕ ಲಕ್ಷ್ಮೀಕಾಂತ್‌ ಶೆಟ್‌ಗಾಂವಕರ್ ಚಿತ್ರ. 2002ರಲ್ಲಿ ಚಿತ್ರರಂಗಕ್ಕೆ ಬಂದರೂ  ಇಲ್ಲಿಯವರೆಗೂ ಆತ ಮಾಡಿದ್ದು ನಾಲ್ಕೇ ಚಿತ್ರ.ಆದರೆ ಯಾವ ಚಿತ್ರವೂ ತೆಗೆದು ಹಾಕುವಂತಿಲ್ಲ. ಕಮರ್ಶಿಯಲ್‌ ಮಸಾಲಾ ಮಿಶ್ರಣಗಳಿಂದ ದೂರವುಳಿದಿರುವ  ಈತನ ಚಿತ್ರಗಳು ಆಪ್ತವಾಗುತ್ತವೆ.
ಬಯಾಗ್ರಫಿ...
ಗೋವಾದ ಸಾಲ್ಸೆಟ್‌ನ ಕನ್‌ಕೊಲಿಮ್‌ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಶೆಟ್‌ಗಾಂವಕರ್‌ಗೆ  ಸಿನಿಮಾ ಮಾಧ್ಯಮದ ಮೇಲೆ ವಿಪರೀತ ಆಸಕ್ತಿ. ಹಾಗಾಗಿಯೇ  ಗೋವಾದ ಕಲಾ ಅಕಾಡೆಮಿಯಲ್ಲಿ ಥಿಯೇಟರ್ ಆಟ್ì  ಕುರಿತಂತೆ ಪದವಿ ಪೂರೈಸಿ, ನಂತರ ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ನಟ ಹಾಗೂ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾನೆ. ಅಷ್ಟರಲ್ಲಾಗಲೇ ಸಮಾಜದಲ್ಲಿರುವ ಸಮಕಾಲೀನ ಸಮಸ್ಯೆಗಳಿಗೆ ಸಿನಿಮಾ ಮಾಧ್ಯಮದ ಮೂಲಕ ಉತ್ತರಿಸಬೇಕು ಎಂದು ಬಹುಕಾಲದಿಂದ ಕಾಡುತ್ತಿದ್ದ ಕನಸು ನನಸಾಗಲು ಮಹೂರ್ತ ಕೂಡಿ ಬರುತ್ತದೆ. ಇದೇ ಕಾರಣಕ್ಕೆ  ಮುಂಬೈಗೆ ಜಿಗಿಯುತ್ತಾರೆ. ಅಲ್ಲಿ ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕ, ಚಿತ್ರಕಥೆ ಬರೆಯುವವರಾಗಿ ಪಡೆದ ಅನುಭವಕ್ಕೆ ಅವರು ಈಗಲೂ ಕೃತಜ್ಞತೆ ಸಲ್ಲಿಸುತ್ತಾರೆ.
ನಾಲ್ಕು ವರ್ಷದ ಅನುಭವದ ಮೊದಲ ಚಿತ್ರ..
ಈ ದಿಸೆಯಲ್ಲಿ ತನ್ನ ಸ್ವಂತ ಊರು ಗೋವಾಕ್ಕೆ ಆಗಮಿಸಿದ ಲಕ್ಷ್ಮೀಕಾಂತ್‌ ಅಲ್ಲಿ ತನ್ನದೇ ಮನಸ್ಥಿತಿಯುಳ್ಳ  ಸ್ನೇಹಿತರನ್ನು ಸೇರಿಸಿಕೊಂಡು "ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್‌ ಆಫ್‌ ಗೋವಾ" ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಗೋವಾದಲ್ಲಿ ಸಿನಿಮಾ ಕ್ರಾಂತಿಯನ್ನೇ ಎಬ್ಬಿಸಿತು. ತನ್ನ ಸುತ್ತಮುತ್ತಲ ಘಟನೆಗಳನ್ನು ತನ್ನ ಕಲ್ಪನೆಯ ಮೂಲಕ ದೃಶ್ಯ ಸಂಯೋಜಿಸಿ "ಸೀ ಸೈಡ್‌ ಸ್ಟೋರಿ" ಚಿತ್ರ ಮಾಡಿದರು. ಈ ಚಿತ್ರ ಮುಂಬೈ ಇಂಟರ್ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಉತ್ತಮ ಕಲ್ಪನಾತ್ಮಕ ಚಿತ್ರೆವೆಂದು ಪ್ರಶಸ್ತಿ ಗಳಿಸಿತು. ಕೇವಲ 45 ನಿಮಿಷದ ಚಿತ್ರವಾಗಿದ್ದ  ಇದು  ಅಲ್ಲಿನ ಜನರ ಮನಸೂರೆಗೊಂಡಿತು. ಗೋವಾದಲ್ಲಿ ಈ ಚಿತ್ರದಿಂದ ಶೆಟ್‌ಗಾಂವಕರ್ ಜನಮನ್ನಣೆಗೆ ಪಾತ್ರರಾದರು.

ವೇಶ್ಯಾವಾಟಿಕೆ ಬಗ್ಗೆ , ಸಮಾಜದಲ್ಲಿ ಈ ಕತ್ತಲವೃತ್ತಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ  ಕಥೆ ಹೊಂದಿದ್ದ  Let's talk about it..ಚಿತ್ರವನ್ನು ಗೋವಾದ ಕಾಲೇಜುಗಳಲ್ಲಿ, ಪಂಚಾಯತ್‌ಗಳಲ್ಲಿ, ಹಾಗೇ ಸರ್ಕಾರಿ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ  ಪ್ರದರ್ಶನ ಮಾಡಲಾಯಿತು.
ಅಂತಾರಾಷ್ಟ್ರೀಯ ಭಾರತೀಯ ಚಿತ್ರೋತ್ಸವ 2004ರಿಂದ ಗೋವಾದಲ್ಲಿ ಪ್ರತೀ ವರ್ಷ ನಡೆಸಬೇಕೆಂದು  ಅಲ್ಲಿನ ಸರ್ಕಾರ ತೀರ್ಮಾನಿಸಿದಾಗ  ಗೋವಾದಲ್ಲಿ ಮೊದಲ ಬಾರಿಗೆ ಚಲನಚಿತ್ರಗಳ ಬಗ್ಗೆ ಚರ್ಚೆ ಆರಂಭವಾಯಿತು. ಕೊಂಕಣಿ ಚಿತ್ರಗಳ ಸಣ್ಣ ಮಾರುಕಟ್ಟೆಯಿಂದ ಶೆಟ್‌ಗಾಂವಕರ್ 2004ರಲ್ಲೇ ಮಾಡಿದ್ದ ಚಿತ್ರವನ್ನು ಬಿಡುಗಡೆ ಮಾಡಲಾಗಲಿಲ್ಲ.
ಎಷ್ಟೋ ಬಾರಿ ಶೆಟ್‌ಗಾಂವಕರ್ ಚಿತ್ರಕಥೆಗಳು ಸರ್ಕಾರದ ಮನಗೆಲ್ಲಲು ವಿಫಲವಾಯಿತು.ಕಷ್ಟಪಟ್ಟಿದ್ದಕ್ಕೆ ಬೆಲೆ ಇದೆ ಎನ್ನುವಂತೆ 2009 ರಲ್ಲಿ ನಿರ್ದೇಶಿಸಿದ ಪಾಲ್ತಡಾಚೋ ಮಾನಿಸ್‌ ಇಡಿ ಜಗತ್ತಿನ ಗಮನ ಸೆಳೆದಿದೆ. ಈ ಚಿತ್ರಕ್ಕೆ 2009ರ ಟೋರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ FIPRESCI ಪ್ರಶಸ್ತಿ ಗಳಿಸಿತು. ಕೊಂಕಣಿ ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳುವುದೆ ಸಾಧನೆ ಅನ್ನುವಂತಿದ್ದ ಕಾಲದಲ್ಲಿ ಶೆಟ್‌ಗಾಂವಕರ್ ಚಿತ್ರ ಪ್ರಶಸ್ತಿ ಸಹ ಗಳಿಸಿತ್ತು. ನಂತರ ಹಾಂಗ್‌ಕಾಂಗ್‌,ಕೈರೋ, ಮುಂಬೈ ಮುಂತಾದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದಿಂದ ಗೋವಾದಲ್ಲಿ ಸಿನಿಮಾ ಕುರಿತಾದ ಹೊಸ ಚಳುವಳಿಯೆ ಆರಂಭವಾಯಿತು. ಸಿನಿಮಾಗಳ ಬಗ್ಗೆ ಗೋವಾದ ಜನತೆ ಆಸಕ್ತಿ ಹಚ್ಚಿಸಿದ ಹಾಗೂ ಆ ಕ್ಷೇತ್ರದಲ್ಲಿನ ಆತನ ಸಾಧನೆಗೆ 2009ರ ಅಕ್ಟೋಬರ್ 2 ರಂದು ಗೋವಾ ಸರ್ಕಾರ ಆತನಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಪಾಲ್ತಡಾಚೋ ಚಿತ್ರ 2009ರ ಇಂಡಿಯನ್‌ ಪನೋರಮಾದಲ್ಲಿ ಮೊದಲ ಚಿತ್ರವಾಗಿ ಪ್ರದರ್ಶಿತವಾಯಿತು. ಇದರಿಂದ ಭಾರತದಲ್ಲಿ ಹೊಸ ಸಿನಿಮಾ ಕಲ್ಚರ್ ಬೆಳವಣಿಗೆಗೊಂಡಿತು.
ಪಾಲ್ತಡಾಚೋ ಮಾನಿಸ್‌ನಲ್ಲಿ  ಅಂಥದ್ದೇನಿದೆ...
ಗೋವಾ ಮತ್ತು  ಕರ್ನಾಟಕದ ಗಡಿ ಭಾಗದ ಪಶ್ಚಿಮಘಟ್ಟದ ಸುಂದರ ಪರಿಸರದಲ್ಲಿ  ಚಿತ್ರಿತವಾದ ಈ ಚಿತ್ರ, ಸಭ್ಯ ರೋಮ್ಯಾನ್ಸ್ ನ ಕಲಾತ್ಮಕ ಸಿನಿಮಾ. ಚಿತ್ರದ ನಾಯಕ ವಿನಾಯಕ್‌ ಫಾರೆಸ್ಟ್ ಗಾರ್ಡ್‌ ಪಶ್ಚಿಮ ಘಟ್ಟದ ಕಾಡುಗಳನ್ನು ನೋಡಿಕೊಳ್ಳುತ್ತಾ ಒಬ್ಬಂಟಿಯಾಗಿ ಬರಡು ಜೀವನ ಬಾಳುತ್ತಿದ್ದಾನೆ. ಆ ಕಾಡಿಗೆ ಸಾಗುವಾನಿ ಮರದ ಕೆಲಸಕ್ಕಾಗಿ ಬರುವ ಕೆಲಸಗಾರರೊಂದಿಗೆ ಮಾತ್ರ ಆತನ ಮಾತುಕತೆ... ಜನರ ಒಡನಾಟವೇ ಆತನಿಗಿಲ್ಲ. ಆ ದಟ್ಟ  ಆ ಕಾಡಿನಲ್ಲಿ ಆತನಿಗೆ ನೆನಪುಗಳೆಂದು ಉಳಿದುಕೊಂಡಿರುವುದು  ಸತ್ತ ತನ್ನ ಹೆಂಡತಿಯ ಬಗ್ಗೆ ಮಾತ್ರ.ಆ ನೆನಪೇ ಆತನನ್ನು ಇನ್ನೂ ಬದುಕಿಸಿದೆ.
ಆತ ಉಳಿದುಕೊಂಡಿರುವ ಮನೆಯಲ್ಲಿ ಅಕ್ಕ ಪಕ್ಕ ಮಾನಸಿಕ ಹತೋಟಿ ಕಳೆದುಕೊಂಡ ಹುಡುಗಿ. ಮನುಷ್ಯರ ಸಂಪರ್ಕವೇ ಇಲ್ಲದ ಆತನಿಗೆ ಅವಳ ಸಂಪರ್ಕ ಸಹ್ಯವಾಗುತ್ತದೆ. ತನ್ನ ಊಟದಲ್ಲಿ ಅವಳಿಗೂ ಅರ್ಧ ನೀಡುತ್ತಾನೆ. ಒಂಚೂರು..ಒಂಚೂರು ಎಂಬಷ್ಟು ಆಪ್ತರಾಗುವ ವೇಳೆಗೆ ಅಲ್ಲಿಯೇ ಪಕ್ಕದ ಊರಿನಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಗುಸು ಗುಸು ಆರಂಭವಾಗಿರುತ್ತದೆ. ಆದರೆ ವಿನಾಯಕ್‌ ಅದಕ್ಕೆ ಗಮನ ನೀಡುವುದಿಲ್ಲ ಇವರ ಸಂಬಂಧ ಆಕೆ ಗರ್ಭೀಣಿಯಾಗುವಲ್ಲಿಗೆ ತಲುಪುತ್ತದೆ. ಮುಂದೆ ಜನ ಆತನನ್ನು ಕಾಣುವ ಪರಿ ಇವೆಲ್ಲವನ್ನು ಶೆಟ್‌ಗಾಂವಕರ್ ಸುಂದರ ಚಿತ್ರವಾಗಿಸಿದ್ದಾರೆ.
ಈ ಚಿತ್ರದಲ್ಲಿ ಒಂದು ಹಗ್ಗದ ಸೇತುವೆಯ ದೃಶ್ಯ ಇದೆ. ಈ ನಾಜೂಕು ಸೇತುವೆಯೇ ಆ ದಟ್ಟ ಕಾಡಿಗೂ ಸೋ ಕಾಲ್ಡ್ ನಾಗರೀಕತೆ ಇರುವ ಜನಾಂಗಕ್ಕೂ ಇರುವ ಏಕೈಕ ಕೊಂಡಿ. ಈ ಚಿತ್ರದ ಚಿತ್ರಕಥೆಗಾಗಿ ಬ್ರಿಟಿಷ್‌ ಕೌನ್ಸಿಲ್‌ ಪ್ರಶಸ್ತಿ ನೀಡಿದೆ.
ಇಲ್ಲಿಯವರೆಗೂ ಮಾಡಿದ್ದು ನಾಲ್ಕು ಚಿತ್ರಗಳು..ಗೋವಾದಲ್ಲಿ ಚಿತ್ರ ಮಾಡಿದರೆ ಅಲ್ಲಿ ಚಿತ್ರಮಂದಿರದ್ದೇ ಸಮಸ್ಯೆ ಆದರೆ ಶೆಟ್‌ಗಾಂವಕರ್ ತಮ್ಮ ಚಿತ್ರವನ್ನು ಹಳ್ಳಿ ಮಂದಿಗೆ ವೀಡಿಯೋ ಪ್ರೊಜೆಕ್ಷನ್‌ ಮೂಲಕ ತೋರಿಸುತ್ತಾರೆ. ಪ್ರತಿ ಹಳ್ಳಿಗಳಲ್ಲೂ ತನ್ನ ಚಿತ್ರಗಳ ಬಗ್ಗೆ ಮಾತನಾಡುವಂತಾಗಬೇಕು, ಹಾಗೇ ಸಿನಿಮಾಗಳ ಬಗ್ಗೆ ಅವರಲ್ಲೂ ಕನಸುಗಳು ಮೂಡಬೇಕು ಎಂದು ಶೆಟ್‌ಗಾಂವಕರ್ ಹೇಳುತ್ತಾರೆ.
ಆತ ಮಾಡಿದ್ದು ನಾಲ್ಕೇ ಚಿತ್ರ ಅದರೆ ಅತನ ಚಿತ್ರಗಳ ಬಗ್ಗೆ ಗೋವಾದಲ್ಲಿ ದಿನವೂ ನೂರಾರು ಚರ್ಚೆಗಳು ನಡೆಯುತ್ತವೆ. ಒಂದು ಭಾಷೆ ಬೆಳೆಯುವಲ್ಲಿ ಸಿನಿಮಾ ಮಾಧ್ಯಮದ ಬೆಳವಣಿಗೆ ಅಷ್ಟೇ ಪ್ರಮುಖವಾದದ್ದು,ತನ್ನ ರಾಜ್ಯಕ್ಕೆ ಇರುವ ಸಮಸ್ಯೆಗಳನ್ನೇ ಚಿತ್ರ ಮಾಡಲು ಆಸಕ್ತಿ ತೋರಿಸಿ, ಅದನ್ನು ಸರ್ಕಾರದ ಮನಗಾಣಿಸುವುದರಿಂದಲೇ ದೇಶದ ಹೆಸರಾಂತ ನಿರ್ದೇಶಕರಿಗಿಂತ  ಶೆಟ್‌ಗಾಂವಕರ್ಎಂಬ ಯುವಕ  ಆಪ್ತವಾಗುತ್ತಾನೆ.

ಹೊಸ ದಿಗಂತ ಪತ್ರಿಕೆಯಲ್ಲಿ ಸೆಪ್ಟಂಬರ್ 19 ರಂದು ಬರೆದ ಬರಹ

Sunday, September 5, 2010

ಗಾಂದಿ ನಗಗರದ ಸಿದ್ಧ ಸೂತ್ರಗಳಿಗೆ ಸೆಡ್ಡು ಹೊಡೆದ ಚಿತ್ರ..

ತುಂಬಾ ದಿನಗಳ ನಂತರ ನೋಡುವಂತ ಒಂದು ಚಿತ್ರ ಬಂದಿದೆ ಕೊಟ್ಟ ಕಾಸಿಗಂತೂ ಮೋಸವಿಲ್ಲ


ಯೋಗರಾಜ್ ಭಟ್ ರಿಗೆ ಸಿನಿಮಾ ಬಗ್ಗೆ ಪ್ರೀತಿ ಇದೆ ಏನಾದರೂ ವಿಭಿನ್ನ ವಾದುದನ್ನು ಚಿತ್ರರಂಗಕ್ಕೆ ನೀಡಬೇಕು ಎನ್ನುವ ಹಂಬಲವೇ ಪಂಚರಂಗಿ ಎಂಬ ಸಿನಿಮಾ ಆಗಿದೆ..
ಮುಂಗಾರು ಮಳೆ ಮೂಲಕ "ಮಳೆ" ಎಂಬ ಫಾರ್ಮುಲಾ ಕೊಟ್ಟ ಬಟ್ಟರು ಪಂಚರಂಗಿ ಮೂಲಕ " ಮಾತುಗಾರಿಕೆ"ಯ ಫಾರ್ಮುಲಾ ಬಳಸಿದ್ದಾರೆ..ಆಫ್ ಕೋರ್ಸ ಅದು ಇಲ್ಲಿ ಯಶಸ್ವೀಯಾಗಿದೆ...ಇನ್ನು ಉಳಿದ ನಿದೇಶಕರಿಗೆ ಫಾರ್ಮುಲಾ ಹಳತು ಮಾಡುವ ಕೆಲಸ.
ಇಲ್ಲಿ, ಸುಂದರ ಪರಿಸರಗಳು, ಮನಸ್ಸಿಗೆ ಮುದ ನೀಡುವ ಹಾಸ್ಯಗಳು,ಭರಪೂರಿತ ಸಾಂಗುಗಳು, ಯಡವಟ್ಟು ಹೀರೋಗಳು, ಆಕೆಗೊಬ್ಬ ಹೀರೋಯಿನ್ಗಳು...ಎಲ್ಲವೂ ಗಳುಗಳು..ಎಲ್ಲವೂ ನಿರ್ಜಿವ ನಾಯಕಿ " ನಿನ್ಯಾಕೆ ಎಲ್ಲರಿಗೂ ಗಳು ಎಂದು ಸೇರಿಸುತ್ತೀಯ" ಎಂದು ಕೇಳಿದ ಪ್ರಶ್ನೇಗೆ ಕೊನೆಯಲ್ಲಿ ಸಮುದ್ರ ದಂಡೆಯಲ್ಲಿ ನಾಯಕ ನೀಡುವ ಉತ್ತರ ಮನಸ್ಸಿಗೆ ಕಾಡುತ್ತದೆ..
ಇಲ್ಲಿ ಹಾಸ್ಯ ಇದೆ ಹಾಗೆ ಬದುಕಿನ ಸುಂದರ ವಿಡಂಬನೆ ಇದೆ..ಹುಡುಗರ ಪರಿತಾಪಗಳಿವೆ..ಬದುಕಿನ ಬಗ್ಗೆ ಆಸಕ್ತಿ ಇಲ್ಲದೆ ಎಲ್ಲರನ್ನು ಬಯ್ಯುವ ನಾಯಕನ ಬಗ್ಗೆ ಭಟ್ಟರು ಎರಡುವರ ತಾಸಿನಲ್ಲಿ ಎಲ್ಲವೂ ಬಿಟ್ಟಿಡುತ್ತಾರೆ. ನಾಯಕನಿಗೆ ಜಗತ್ತು ಒಂದು ಗುಜರಿ ಅಂಗಡಿ ಇಂತಹ ನಾಯಕನಿಗೆ ಜೊತೆಯಾಗುವವಳು ಅಂಬು

ಕಥೆಗಳು.
ನಾಯಕ ಭರತ್(ದಿಗಂತ್) ಬೊಂಬೆಗಳಿಗೆ ಸೀರೆ ಉಡಿಸುವ ಹಾಗೆ ಕನ್ನಡ ಎಂ.ಎ ಮಾಡುತ್ತಿರುವ ಬೀರುಬೀಸನೇ ಹುಡುಗ..ಅಪ್ಪ..ಅಮ್ಮ,ಅಣ್ಣ, ತನ್ನ ಜ್ಯೊತಿಷಿ ಮಾವ, ನಾಯಿ ಹಾಗೆ ಬಸ್ ಚಾಲಕ ಹಾಗೂ ಆತನ ಕುರುಡು ತಂದೆ ಎಲ್ಲರೂ ಇಬ್ಬರು ಹೆಣ್ಮಕ್ಕಳಿರುವ ಸಮುದ್ರ ಕಿನಾರೆಯಲ್ಲಿರುವ ಮನೆಗೆ ಹೆಣ್ಣು ನೋಡಲು ಬರುತ್ತಾರೆ..ಭರತ್ ನಿಗೆ ನಿದ್ರಾರೋಗದ ಕಾಯಿಲೆ
ಪಕ್ಕದಲ್ಲಿ ಬಾಂಬ್ ಬಿದ್ದರೂ ಆತನಿಗೆ ಅರಿವಾಗುವುದಿಲ್ಲವಂತೆ..ಇನ್ನೊಬ್ಬಳನ್ನು ಪ್ರೀತಿಸುತ್ತಿದ್ದರೂ ಅಪ್ಪ&ಅಮ್ಮನಿಗೆ ತಿಳಿಸದೆ ಅವರ ಒತ್ತಾಯಕ್ಕೆ ಹೆಣ್ನು(ಲತಾ) ನೋಡುವ ಲಕ್ಕಿ..ಎಲ್ಲವೂ ಸಾಂಗ ಎನ್ನುವಾಗ ಲಕ್ಕಿಯ ಮನದನ್ನೆಯ ಎಂಟ್ರಿ... ಇವಿಷ್ಟರ ನಡುವೆ ನಡೆಯುವ ನಾಯಕ (ಭರತ್) ನಾಯಕಿ( ಅಂಬಿಕಾ) ನಡುವೆ ನಡೆಯುವ ಪ್ರೀತಿ ಎಲ್ಲವೂ ಬೊಂಬಾಟ್.. ಸಮುದ್ರ ದಂಡೆಯ ಮೇಲೆ ತನ್ನ ನಾಯಕಿ ನಿಧಿ ಸುಬ್ಬಯ್ಯ ಪ್ರೇಮ ನಿವೇದನೆ ಮಾಡುವಾಗ ಥೇಟರ್ ನಲ್ಲಿ ಕೂತ ಹುಡುಗರಿಗೆ ತಮ್ಮ ಗೆಳತಿಯ ನೆನಪಾಗುವುದರಲ್ಲಿ ಮಾತೇ ಇಲ್ಲ. ಚಿತ್ರದ ಮೊದಲಾಧ ಮೊದಮೊದಲು ಬೋರ್ ಅನಿಸಿದರೂ ಅದು ನಮ್ಮ ಅರಿವಿಗೆ ಬರುವಷ್ಠರಲ್ಲಿ ಕಥೆ ಹಿಡಿತ ಪಡೆದುಕೊಳ್ಳುತ್ತದೆ. ಒಂದು ಸಿಂಪಲ್ ಸ್ಟೋರಿಗೆ ಭಟ್ಟರು ಸುಣ್ಣ ಬಣ್ಣ ಬಳಿದಿದ್ದಾರೆ..ಆದರೆ ಅದು ನಮಗೆ ಆಪ್ತವಾಗುತ್ತದೆ. ಇಲ್ಲಿಯವರೆಗಿನ ಎಲ್ಲಾ ಚಿತ್ರಗಳಲ್ಲಿ ಮನೆಗಳನ್ನು ಒಂದುಗೂಡಿಸಿ ಪ್ರೇಮಿಗಳನ್ನು ದೂರ ಮಾಡುವ ಪರಿಪಾಠ ಬೆಳೆಸಿದ್ದ ಅವರು ಬದಲಾಗಿದ್ದಾರೆ.
ಅನಂತನಾಗ್ ಎರಡೇ ಸೀನ್ ಗಳಲ್ಲಿ ಕಾಣುತ್ತಾರಾದರೂ ತುಂಬಾ ಸುಂದರವಾಗಿ ಪಾತ್ರ ನಿಭಾಯಿಸಿದ್ದಾರೆ ಕೊನೆಗೆ ಲಕ್ಕಿ ಮನದನ್ನೆ ಬಂದ ನಂತರ ಆಗುವ ಅವಾಂತರಗಳೆನು? ಲತಾ ಲಕ್ಕಿ ಮದುವೆ ಆಗುತ್ತದೆಯೆ? ನಾಯಕ,ನಾಯಕಿ ಏನಾಗುತ್ತರೆ ಇವೆಲ್ಲ ನೋಡಲು ಚಿತ್ರಮಂದಿರ ನಿಮಗಾಗಿ ಕಾಯುತ್ತಿದೆ.ಮನೋಮುರ್ತಿ ಸಂಗೀತದಲ್ಲಿ ಮೂಡಿಬಂದ ಹೆಚ್ಚಿನ ಹಾಡುಗಳು ಸುಂದರ..ಬಲು ಸುಂದರ..ಲೈಫು ಇಷ್ಟೇನೆ..ಗೀತೆಯಲ್ಲಿ ಸಂಗೀತಕ್ಕಿಂತ ಭಟ್ಟರ ಪದಗಳು ಆಪ್ತವಾಗುತ್ತದೆ." ಉಡಿಸುವೇ ಬೆಳಕಿನ ಸೀರೆಯ", "ಹುಡುಗರು ಬೇಕು..." " ಪಂಚರಂಗಿ ಹಾಡುಗಳು" ಎಲ್ಲವೂ ಮುದ ನೀಡುತ್ತದೆ. ಒಂದೇ ಬಾರಿಗೆ ಹೇಳುವುದಾದರೆ ಸಂಭಾಷಣೆ ಚಿತ್ರದ ಹೀರೂ..ಹಿರೋಯಿನ್ ಎಲ್ಲಾ. ವಿ.ತ್ಯಾಗರಾಜನ್ ಕ್ಯಾಮರಾ ಕೆಲಸ ಸುಂದರವಾಗಿದೆ..ಸುಮುದ್ರದಾಚೆ ಬಾಗಿದ ತೆಂಗಿನ ಮರದ ಮೇಲೆ ಕುಳಿತ ನಾಯಕ ,ನಾಯಕಿಯನ್ನು ತೋರಿಸುವಾಗ ಅವರ ಶ್ರಮಕ್ಕೆ ಭೇಷ್ ಎನ್ನಲೇಬೆಕು. ಉಡಿಸುವೆ ಬೆಳಕಿನ ಸೀರೆಯ ನ್ರತ್ಯ ಸಂಯೋಜನೆ ಹಾಗೂ ಕಲಾ ನಿರ್ದೇಶನ ಶಶಿಧರ ಅಡಪ ಶ್ರಮಕಾಣುತ್ತದೆ.
ಭಟ್ಟರ ಅಶರೀರವಾಣಿ...ಹಾಗೆ ಅವರ ಪದಗಳು..ಶಾಲಿವಾಹನ ಶಕೆ ಮನೆಗಳು..ಹೆಂಗಳೆಯರು..ಹೆಂಗಸುಗಳು..ಕೆಮ್ಮಿದರೆ ಬೀಳುವ ಮನೆಗಳು..ಕೆಂಪು ಹೆಂಚು ಗಳು..ಸಮುದ್ರಕ್ಕೆ ಬಾಗಿರುವ ಮನೆಗಳು...ಮುದ್ದು ಜಡೆಗಳು...ಒದ್ದೆ ಕೊಡೆಗಳು ಎಲ್ಲವೂ ಆಪ್ತವಾಗುತ್ತದೆ. ಜಯಂತ್ ಕಾಯ್ಕಿಣಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಒಟ್ಟಾರೆ ಚಿತ್ರ ಕಾಡುವುದಂತೂ ಸುಳ್ಳಲ್ಲ. ಕೊನೆಯಲ್ಲಿ ನಾಯಕನ ಸಂದಿಗ್ಧತೆಯನ್ನು ಉತ್ತಮವಾಗಿ ನಿರೂಪಿಸಿದ್ದಾರೆ.

ನೀನು ನಮ್ಮವನಲ್ಲ... ನಿನ್ನ ಗೆಲುವು ಮಾತ್ರವೇ ನಮ್ಮದು !

ಹಣ, ವರ್ಚಸ್ಸು, ರಾಜಕೀಯ ಪ್ರಭಾವ ಇಷ್ಟು ಇದ್ದ ಮಾತ್ರಕ್ಕೆ ಡಾಕ್ಟರ್‌ಗಳೆನ್ನಿಸಿಕೊಳ್ಳುತ್ತಿರುವ ರಾಜಕಾರಣಿಗಳ ಪಟಾಲಂನ ನಡುವೆ ನಿಜಕ್ಕೂ ಅರ್ಹತೆಯಿರುವ ಶ್ರಮಿಕ, ಪ್ರತಿಭಾನ್ವಿತ ವ್ಯಕ್ತಿಗಳು ತೆರೆಯ ಹಿಂದೆಯೇ ಉಳಿಯುತ್ತಿದ್ದಾರೆ. ಯಾವುದೋ ವಿದೇಶೀ ವಿಶ್ವವಿದ್ಯಾಲಯ ಈ ಅಪ್ಪಟ ಪ್ರತಿಭೆಗಳನ್ನೇ  ಬೊಟ್ಟು ಮಾಡಿ ಡಾಕ್ಟರೇಟ್‌ ನೀಡಿದಾಗ, ಪ್ರತಿಭೆಗಳನ್ನು ಗುರುತಿಸಲಾಗದೇ ಕೈಕಟ್ಟಿ ಕೂತು,ಯಾರದೋ ವಶೀಲಿಯ ಕಡತ ತಿದ್ದುತ್ತಿರುವ  ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿಗಳಿಗೆ  ಮಂಗಳಾರತಿ ಆಗಬಹುದು; ವಿಶ್ವನಾಥನ್‌ ಆನಂದ್‌ ಗೆ ಡಾಕ್ಟರೇಟ್‌ ಸಿಕ್ಕಬಹುದು !


ವಿಶ್ವ ಚೆಸ್‌ ರಂಗದಲ್ಲಿ ಆತನದ್ದು ಧೀಮಂತ ಹೆಸರು.. ತನ್ನೀಡಿ ಬಾಳ್ವೆಯನ್ನು ಚೆಸ್‌ಗಾಗಿಯೆ ಮೀಸಲಿಟ್ಟ. ಭಾರತದ ಒಂದು ಆಟಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟವನಿಗೆ ಡಾಕ್ಟರೇಟ್‌ ಕೊಡಬೇಕು ಎಂದು ಒಂದು ವಿ.ವಿ ನಿರ್ಧರಿಸಿದ್ದು  ತಪ್ಪಾ?
ವಿಶ್ವ ನಾಥನ್‌ ಆನಂದ್‌, ಮೂರು ಬಾರಿ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಗೆದ್ದು ಭಾರತದ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ  ಶ್ರೇಷ್ಟ ಕ್ರೀಡಾಪಟು. ಸ್ಪೇನ್‌ ದೇಶದಲ್ಲಿ ನೆಲೆಸುವ ಆತ  ಭಾರತದ ಪ್ರಜೆಯೇ ಅಲ್ಲ ಎಂದು ಅನುಮಾನಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಆರ್‌.ಡಿ.ಸಹಾಯ್‌ ನಂತವರಿಗೆ  ಏನೆನ್ನಬೇಕು ಗೊತ್ತಾಗುತ್ತಿಲ್ಲ!
ಡಿಸೆಂಬರ್‌ 11,1969 ರಂದು ಚೆನೈನಲ್ಲಿ ಜನಿಸಿದ ಆನಂದ್‌ಗೆ ಮೊದಲಿನಿಂದಲೂ ಚೆಸ್‌ ಎಂದರೇ ಜೀವ. ಆನಂದ್‌ ಹೇಳುತ್ತಾರೆ,‘ ನಾನು ಚೆಸ್‌ ಪಂದ್ಯಗಳನ್ನು ಆಡುವಾಗ  ನಾನು ಇಡೀ ದೇಶದ ಪ್ರತಿನಿಧಿಯಾಗಿರುತ್ತೇನೆ. ನನ್ನ ಸೋಲು, ಗೆಲುವು ಎಲ್ಲಾ ಈ ರಾಷ್ಟ್ರಕ್ಕೆ ಮೀಸಲಾಗಿರುತ್ತದೆ. ಆದ್ದರಿಂದ ಪ್ರತಿ ಪಂದ್ಯ ಆಡುವಾಗಲೂ ನಾನು ನನ್ನ  ದೇಶದ ಗೆಲುವನ್ನೇ ಬಯಸುತ್ತೇನೆ ...’ ಈ ಮಾತುಗಳಿಗೆ ಕನಿಷ್ಠ ಗೌರವವನ್ನು ಕೊಡುವ ಸೌಜನ್ಯವೂ ನಮ್ಮವರಿಗಿಲ್ಲವಲ್ಲಾ... ಇಂತಹ ಅಪ್ಪಟ ದೇಶಪ್ರೇಮಿ ಕ್ರೀಡಾಪಟುವಿಗೆ  ಸರ್ಕಾರ  ಆತನ ಪೌರತ್ವದ ಬಗ್ಗೆ ಗುಮಾನಿ ವ್ಯಕ್ತಪಡಿಸಿ ನೀನು ನಮ್ಮವನೇ ಅಲ್ಲ ಎಂದುಬಿಡುತ್ತದಲ್ಲಾ... ಓಲಿಂಪಿಕ್‌ ಮೊದಲಾದ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತೀಯ ಸ್ಪರ್ಧಾಳುಗಳ ಹಿನ್ನೆಡೆಯಾಗುತ್ತಿರುವುದಕ್ಕೆ ಕಾರಣ ಇಲ್ಲಿಯೇ ಇದೆ ಅನಿಸುತ್ತದೆ.
ಮೊನ್ನೆ ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಕಾಂಗ್ರೆಸ್‌ ಆಫ್‌ ಮ್ಯಾಥಾಮೆಟಿಕ್ಸ್ ನಲ್ಲಿ ನೀಡಲು ಉದ್ದೇಶಿಸಲಾಗಿದ್ದ ಹೈದರಾಬಾದ್‌ ವಿವಿಯ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಚ್‌ಆರ್‌ಡಿ ಅಧಿಕಾರಿಗಳ ಇಂತಹ ಹೇಳಿಕೆಯಿಂದಾಗಿ ಪ್ರಶಸ್ತಿ ನೀಡಲಾರದಂತಾಯಿತು.
ಇಂತಹ ಪ್ರಶಸ್ತಿಗಳಿಂದಾಗಿ ಆತನಿಗೆ ಎನೂ ಆಗಬೇಕಾದದ್ದಿಲ್ಲ. ಆದರೆ ಎಷ್ಟೇ ಪ್ರಶಸ್ತಿ ಬಂದರೂ ತವರಿನ ಪ್ರಶಸ್ತಿ ಒಂದು ಪಟ್ಟು ಹೆಚ್ಚೇ ಗೌರವ ಮೂಡಿಸುತ್ತದೆ. ಆ ಕಾರಣಕ್ಕಾಗಿಯೇ ಆನಂದ್‌ ಇದನ್ನು  ಸ್ವೀಕರಿಸಲು ಒಪ್ಪಿಕೊಂಡಿದ್ದರು. ಈಗ ಕೊಟ್ಟರೂ ಬೇಡ ಎನ್ನುವ ಸ್ಥಿತಿ ಅವರದ್ದು...
ಪದವಿಯ ನೀಡುವ ಬಗ್ಗೆ   ಆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಒಂದು ಕ್ಷಣ ಆನಂದ್‌ ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಆಶ್ಚರ್ಯಚಕಿತವಾಗುವುದರ ಜೊತೆಗೆ ಬೆಚ್ಚಿಬಿದ್ದರು.  ಇದೇ ಪ್ರಶ್ನೆಯನ್ನು ನಿಮ್ಮ  ಸೋನಿಯಾ ಗಾಂಧಿಗೆ ಕೇಳಿ ಎಂದು  ಚೆಸ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು... ಮತ್ತೂ ಆನಂದ್‌ ಭಾರತೀಯನೆಂಬುದನ್ನು ಖಾತ್ರಿ ಮಾಡಲು ಇನ್ನೂ ಸಮಾಲೋಚನೆ ನಡೆಸಬೇಕು ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತಾಗ ,ಆನಂದ್‌ ಪತ್ನಿ ಅರುಣಾ ಭಾರತೀಯ  ಪೌರತ್ವದ ದಾಖಲೆಗಳನ್ನು ಹೇಳುವ  ಭಾರತೀಯ ಪಾಸ್‌ಪೋರ್ಟ್‌ ವಿವರಗಳನ್ನು ಫ್ಯಾಕ್ಸ್ ಮೂಲಕ ಕಳುಹಿಸಿದರೂ ಅತ್ತ ಗಮನ ಹರಿಸುವ ತಾಳ್ಮೆಯನ್ನು ತೋರಲಿಲ್ಲ ಅಧಿಕಾರಿಗಳು.
 ತಿರಂಗಾ ನೆರಳಲ್ಲಿ ಆಡುವುದೇ ಖುಷಿ...
 ‘ನನಗೆ ಪ್ರಶಸ್ತಿ ಪುರಸ್ಕಾರ ಎಲ್ಲವೂ ನಂತರದ ಪ್ರಶ್ನೆ. ನನ್ನ ದೇಶದ ತಿರಂಗಾ ಅಡಿಯಲ್ಲಿ ಆಡುತ್ತಿರುವುದಕ್ಕೆ ನನಗೆ ಸಂತಸವಿದೆ. ಮತ್ಯಾವುದೂ ನನಗೆ  ಇಷ್ಟು ಖುಷಿ ಕೊಡಲಾರದು. ನನ್ನ ದೇಶವೇ ನನಗೆ ಬಹು ದೊಡ್ಡ ಪ್ರಶಸ್ತಿ’ ಎನ್ನುತ್ತಾರೆ ಆನಂದ್‌.
ಇಷ್ಟೆಲ್ಲಾ ಆದ ಬಳಿಕ  ಕ್ಷಮೆ ಕೇಳಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್‌ ಸಿಬಲ್‌ ‘ಮತ್ತೊಂದು ಕಾರ್ಯಕ್ರಮದಲ್ಲಿ  ಪದವಿ ನೀಡುತ್ತೇವೆ ’ ಎಂದು ಎಳೆಮಕ್ಕಳ ಕಣ್ಣೀರೊರೆಸುವಂತೆ ಮಾತನಾಡಿದ್ದಾರೆ. ಅಷ್ಟಕ್ಕೂ ಎಂದಿಗೂ ಪ್ರಶಸ್ತಿ, ಪದವಿಗಳ ಆಸೆಗೆ ಬಿದ್ದು  ಆಟದ ನಿಜವಾದ ಸಂತಸವನ್ನು ಹಾಳು ಮಾಡಿಕೊಳ್ಳಲು ಒಪ್ಪದ ಮಾಸ್ಟರ್‌ ಸಹಜವಾಗಿಯೇ ತನಗೆ ಆ ಪದವಿಯೇ ಬೇಡ ಎಂದರೂ, ಅಭಿಮಾನಿಗಳ ಒತ್ತಾಯದ ಮೇಲೆ ಸ್ವೀಕರಿಸುವ ಮಾತನಾಡಿದ್ದಾರೆ.
ಇಲ್ಲಿರುವುದು ನಮ್ಮನೆ ಅಲ್ಲಿರುವುದು ಸುಮ್ಮನೆ...
ಆನಂದ್‌ ಹೆಚ್ಚಾಗಿ ಸ್ಪೇನ್‌ ದೇಶದಲ್ಲಿ ವಾಸಿಸಲು ಕಾರಣವೂ ಇದೆ. ವಿಶ್ವ ಚೆಸ್‌ನ ಹೆಚ್ಚಿನ ಚಾಂಪಿಯನ್‌ ಷಿಪ್‌ ಪಂದ್ಯಾಟಗಳು ನಡೆಯುವುದು, ಬೆಲ್ಜಿಯಂ(ಫಿಡೆ ವಿಶ್ವ ಚಾಂಪಿಯನ್‌ ಟೂರ್ನಮೆಂಟ್‌), ಮ್ಯಾಡ್ರಿಡ್‌,ಸ್ವಿಜರ್‌ಲ್ಯಾಂಡ್‌ ಸೇರಿದಂತೆ ಮುಂತಾದ ಕೆಲವು ಯೂರೋಪ್‌ ದೇಶಗಳು ಹಾಗೂ ರಷ್ಯಾ,ಅಮೇರಿಕದಲ್ಲಿ ನಡೆಯುತ್ತದೆ. ಆ ಕಾರಣಕ್ಕಾಗಿ ಅವರು ಆ ದೇಶದಲ್ಲಿ ನೆಲೆಸಿದ್ದಾರೆಯೇ ಹೊರತೂ ಬೇರೇ ಯಾವ ಮೋಜಿಗೂ ಅಲ್ಲ. ಇದನ್ನು ಈ ರಾಜಕಾರಣಿಗಳು ಅರಿತ್ತದ್ದರೆ ಆತನಿಗೆ ಅವಮಾನವಾಗುವ ಸಂದರ್ಭವೆ ಬರುತ್ತಿರಲಿಲ್ಲ.
ಜಾಗತೀಕರಣದಲ್ಲಿ ಇದೆಲ್ಲಾ ಮಾಮೂಲಿ
ಇಂದು ವಿಶ್ವವೆ ಒಂದು ಗ್ರಾಮವಾಗಿರುವ ಸಂದರ್ಭದಲ್ಲಿ  ದೇಶ- ದೇಶಗಳ ನಡುವಿನ ಗಡಿ ಶಿಥಿಲವಾಗುತ್ತಿದೆ.   ಇನ್ನೊಂದು ದೇಶದಲ್ಲಿದ್ದುಕೊಂಡು ಸ್ವಂತ ದೇಶಕ್ಕೆ ಆಡುವ ಪರಿಪಾಠ ಸಾಮಾನ್ಯವಾಗಿದೆ. ಅದಕ್ಕಾಗಿ ದೇಶದ ಹೆಸರಾಂತ ಕ್ರೀಡಾಪಟುಗಳನ್ನು  ಆತ ನಮ್ಮ ದೇಶದ ಪ್ರಜೆಯೇ ಅಲ್ಲ ಎಂದು ಅವಮಾನಿಸುವುದು ಸರಿಯಲ್ಲ.

ಚಿತ್ರವೆಂದರೆ..ಮಾತನಾಡುತ್ತಿರಬೇಕು..ಇದರ ಹಾಗೆ...

ಶಿಲ್ಪಕಲೆಗಳು ನಮ್ಮ ಪಾರಂಪರಿಕ ಆಸ್ತಿಗಳು.. ಅದನ್ನು ಅಲ್ಲಿಯೇ ಹೋಗಿ ನೋಡಬೇಕು.ಅದಾಗದಿದ್ದರೆ, ಅಂತಹ ಪ್ರದೇಶಗಳ ಚಿತ್ರ ಪ್ರದರ್ಶನ ನಡೆದಾಗ ಅದನ್ನು ನೋಡುವ ಮನಸ್ಸಿರಬೇಕು..



ಹಂಪಿಯ ವಿಠ್ಠಲ ದೇವಸ್ಥಾನದ ಪಡಸಾಲೆಯಲ್ಲಿ ಕುಳಿತು ಭಕ್ತನ ಜೊತೆ ಪೂಜಾರಿ ಮಾತನಾಡುತ್ತಿರುವ ಚಿತ್ರ. ಇನ್ನೋಂದು ಚಿತ್ರದಲ್ಲಿ...ಹಂಪಿಯ ಭವ್ಯ ಕಲ್ಲಿನ ರಥದ ಎದುರು ರಾಜ ತನ್ನ ಸಾಮ್ರಾಜ್ಯದ ಮುಂದಿನ ಹಾದಿಯ ಬಗ್ಗೆ ಯೊಜನೆ ರೂಪಿಸುತ್ತಿದ್ದಾನೆ...
ತಮ್ಮ ಜೀವನದ 64 ವರ್ಷಗಳನ್ನು ಚಿತ್ರಗಳ ಬ್ಯಾನರ್  ಬರೆಯುವುದು, ಚಿತ್ರಮಂದಿರದ ಎದುರು ಹಾಕುವ ನಾಯಕರ ದೊಡ್ಡ ಕಟೌಟ್ ಗಳನ್ನು ಬಿಡಿಸುವುದರಲ್ಲೇ ಕಳೆದ ಕೆ.ಚೆನ್ನಪ್ಪ ಅವರ ಕುಂಚದಿಂದ ಮೂಡಿಬಂದ ಅದ್ಭುತ ಚಿತ್ರಗಳಿವು...
  ಚಿತ್ರಕಲಾ ಪರಿಷತ್ ನಲ್ಲಿ ನಡೆದ ಇವರ ಕುಂಚಕಲಾ ಪ್ರದರ್ಶನದಲ್ಲಿ 25 ಚಿತ್ರಗಳು ವೀಕ್ಷಕರನ್ನು ಆಕರ್ಷಿಸುತ್ತಿತ್ತು.
ಎಲ್ಲಿಯೂ ಏಕತಾನತೆಯನ್ನು ಸೃಷ್ಟಿಸದ ಇಲ್ಲಿಯ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ನೆರಳು ಬೆಳಕಿನ ಸೆಳೆತದಲ್ಲಿ ದೇವಸ್ಥಾನದ ಎದುರು ಆನೆಯೊಂದು ದಾಟಿ ಹೊಗುತ್ತಿರುವ ಚಿತ್ರದಲ್ಲಿ ಅವರ ಕಲಾವಂತಿಕೆಯ ಪ್ರದರ್ಶನವಾಗುತ್ತದೆ.
    ಇಲ್ಲಿನ ಚಿತ್ರಗಳ ಬಗ್ಗೆ ಚೆನ್ನಪ್ಪ ಅವರನ್ನು  ಮಾತನಾಡಿಸಿದಾಗ, ತುಂಬಾ ಆಸ್ಥೆ ವಹಿಸಿ ಚಿತ್ರ ಬರೆದಿದ್ದೆನೆ.. ಪ್ರತಿಯೊಂದು ಚಿತ್ರ ಬರೆಯುವಾಗಲೂ ಹಲವಾರು ತಿಂಗಳುಗಳ ಶ್ರಮ ಹಾಕಿದ್ದೇನೆ. ಕೆಲವೇ ದಿನದಲ್ಲಿ ಮೂಡಿ ಬಂದ ಚಿತ್ರಗಳೂ ಇವೆ... ಎನ್ನುತ್ತಾರೆ.
   
ಚಿತ್ರಗಳನ್ನು ರಚಿಸುವಾಗ ಇದನ್ನು ಪ್ರದರ್ಶನ ಮಾಡಬೇಕೆಂಬ ಯಾವ ಉದ್ದೇಶವೂ ಇರಲಿಲ್ಲ ಆದರೆ ಈಗ ಪ್ರದರ್ಶನ ವಾಗುತ್ತಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ತಮ್ಮ ಧನ್ಯವಾದ ಸಲ್ಲಿಸುತ್ತಾರೆ.
ಕಲೆಗೆ ಯಾಕೆ ಹಣದ ಟ್ಯಾಗ್..
  ಇಲ್ಲಿನ ಎಲ್ಲಾ ಚಿತ್ರಗಳು ಮಾರಾಟಕ್ಕಿವೆ.ಆದರೆ ಯಾವ ಚಿತ್ರಗಳ ಮೇಲೂ ಅದರ ಬೆಲೆಯ ಸೂಚನೆಯಿರಲಿಲ್ಲ... ಹೀಗೇಕೆ ಎಂದು ಕೇಳಿದಾಗ ಅವರು ನೀಡಿದ ಉತ್ತರ ಸೊಗಸಾಗಿತ್ತು.
   ನಾನು ಯಾವ ಚಿತ್ರಗಳಿಗೂ ಬೆಲೆ ಕಟ್ಟಲು ಇಷ್ಟಪಡುವುದಿಲ್ಲ. ಏನಾದರೂ ಬೆಲೆ ಕಟ್ಟದರೆ ನನ್ನ ಶ್ರಮ ಇಷ್ಟೇನಾ ಎಂದು ಬೇಸರವಾಗುತ್ತದೆ...ಕಲೆಗೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಾಗುವುದಿಲ್ಲ . ಚಿತ್ರರಸಿಕರೇ ಕಟ್ಟಿದ ಬೆಲೆ ನನಗೆ ಒಪ್ಪಿಗೆಯಾದರೆ ಆ ಚಿತ್ರವನ್ನು ಅವರಿಗೆ ನೀಡುತ್ತೇನೆ....

ಮನಸಾರೆ...   
ಮಹಾರಾಷ್ಟ್ರದ ಎಲಿಫೆಂಟಾ ಗುಹೆಯಲ್ಲಿರುವ ತ್ರಿಮೂರ್ತಿ ಶಿಲ್ಪಕಲೆ ಚಿನ್ನಪ್ಪ ಅವರ ಕೈಯಿಂದ ಕ್ಯಾನ್ವಾಸ್ ನಲ್ಲಿ ಮೂಡಿದೆ. ಹಾಗೆಯೇ ಮದವುಕ್ಕಿದ ಆನೆಯ ಚಿತ್ರ, ಒರಿಸ್ಸಾದ ಕೊನಾರ್ಕ್ ದೇಗುಲದ ಎದುರು ಭರತನಾಟ್ಯ ಮಾಡುತ್ತಿರುವ ಯುವತಿ, ಹಂಪಿಯ ಮುಖ್ಯದ್ವಾರದ ಎದುರು ನೀರು ತೆಗೆದುಕೊಂಡು ಹೊಗುತ್ತಿರುವ ಹೆಂಗಸರ ಚಿತ್ರ,ಕೇರಳದ ತ್ರಿಚಿಯಲ್ಲಿರುವ ದೇವಸ್ಥಾನದ ಒಳಾವರಣದ ದಿವ್ಯ ಚಿತ್ರ...ಹೀಗೆ ಮನಸಾರೆ ಬಿಡಿಸಿದ ಚಿತ್ರಗಳೆಲ್ಲವೂ ಮನಸ್ಸಿಗೆ ತಾಕುತ್ತವೆ; ಮನಸಲ್ಲುಳಿಯುತ್ತವೆ.  
ಮಾಸ್ಟರ್ ಪೀಸ್..
 ಪ್ರದರ್ಶನಕ್ಕೆ ಬಂದಿದ್ದ ಕಲಾ ವಿದ್ಯಾರ್ಥಿಯೊಬ್ಬನನ್ನು ಮಾತಿಗೆಳೆದರೆ, ಈ ಚಿತ್ರಗಳೆಲ್ಲಾ ಮಾಸ್ಟರ್ ಫೀಸ್ ಗಳು ಸಾರ್.. ಸುಲಭಕ್ಕೋಲಿಯೋ ಕಲೆಯಲ್ಲ ಇದು... ಎನ್ನುತ್ತಾನೆ.
ಪ್ರತಿ ಚಿತ್ರಗಳಲ್ಲೂ ಅವರಿದ್ದಾರೆ...
 ಚಿತ್ರಗಳನ್ನು ವೀಕ್ಷಿಸಿದ ರಂಗಭೂಮಿ ಕಲಾವಿದೆ ಬಿ.ಜಯಶ್ರೀ... ಇಲ್ಲಿನ ಎಲ್ಲಾ ಚಿತ್ರಗಳಲ್ಲೂ ನನಗೆ ಚಿನ್ನಪ್ಪ ಅವರು ಇದ್ದ ರೀತಿಯೆ ಕಾಣುತ್ತಿದೆ.. ಇಲ್ಲಿನ ಕೆಲವು ಚಿತ್ರಗಳಲ್ಲಿ ಬೌಧ್ಧ ಬಿಕ್ಕುಗಳಿದ್ದಾರೆ..ರಾಜನಿದ್ದಾನೆ..ಪೂಜಾರಿ ಇದ್ದಾನೆ..ಆದರೆ ಅವರೆಲ್ಲರೂ ನೆಪ ಮಾತ್ರ ನಿಜವಾಗಿಯೂ ಅಲ್ಲಿರುವುದು ಚಿನ್ನಪ್ಪ ಎಂದು ಹೇಳುತ್ತಾರೆ.


Friday, August 27, 2010

ಶಾಂತವಾಗಿ ನೋಡಿ...ಮೌನ ಸಿನಿಮಾವಾಗಿದೆ

  ಅದು ಹಾಸ್ಯ ಸಿನಿಮಾ ಎಂದರೆ ಹೌದು; ಹಾಗೆಂದುಕೊಳ್ಳುವಂತೆಯೇ ಇದೆ! ಕಲಾತ್ಮಕ ಚಿತ್ರವೆಂದರೆ, ಅದೂ ನಿಜವೇ! ಒಂದೇ ಮಾತಿನಲ್ಲಿ ಹೇಳಿ ಮುಗಿಸುವುದಾದರೆ ವೌನವಾಗಿ ಮಾತಿಗಿಳಿಯುವ ಸುಂದರ ಚಿತ್ರ. ಇರಾನ್ ಕೊರ್ಲಿನ್ ತನ್ನ ಜೀವನದ ಕೆಲವು ಅಂಶಗಳನ್ನಿಟ್ಟುಕೊಂಡೇ ಸುಂದರ ಚಿತ್ರವೊಂದನ್ನು ಹೆಣೆದಿದ್ದಾನೆ. ಒಂದರ್ಥದಲ್ಲಿ 75% ರೀಯಲ್ 25% ರೀಲ್ ಅನ್ನಿಸುವ ‘ದಿ ಬ್ಯಾಂಡ್  ವಿಸಿಟ್ ಚಿತ್ರ
 ಎಣಿಕೆಯಂತೆ ಇದು ಯಾರೆಂದರೆ ಯಾರ ನಿರಿಕ್ಷೇಯನ್ನೂ ಹುಸಿಗೊಳಿಸದ ಚಿತ್ರ. ಮಾತನ್ನೇ ಬಂಡವಾಳ ಮಾಡಿಕೊಂಡ ಇಂದಿನ ಸಿನಿಮಾಗಳ ನಡುವೆ ಈ ಚಿತ್ರ ತುಂಬಾ ವಿಭಿನ್ನ. ಹೆಸರೇ ಹೇಳುವಂತೆ ಒಂದು ಬ್ಯಾಂಡ್ ಸೆಟ್  ಹುಡುಗರು ಬೇರೆ ಪ್ರದೇಶಕ್ಕೆ ಹೋಗಿ ಅಲೆಮಾರಿಯಾಗಿ ಬದುಕನ್ನು ಕಂಡುಕೊಳ್ಳುವ ಚಿತ್ರ. ಸಾಮಾಜಿಕವಾಗಿ ಇವತ್ತಿಗೂ ಇಂಥ ಸ್ಥಿತಿಯನ್ನು ಅನುಭವಿಸುತ್ತಿರುವವರು ಹತ್ತಿರದಿಂದ ಕಾಣಸಿಗುತ್ತಾರಾದ್ದರಿಂದ ಆವತ್ತಿನ ಬದುಕಿಗೂ ಇವತ್ತಿನ ಜೀವನ ಉಪಕ್ರಮಗಳಿಗೂ ಇರುವ ಸಾಮ್ಯತೆಯನ್ನು ಬಿಚ್ಚಿಡುತ್ತದೆ,ಆಪ್ತವಾಗುತ್ತದೆ.
        2007ರಲ್ಲಿ ತರೆಗೆ ಬಂದ ಇಸ್ರೇಲ್ ಚಿತ್ರ ದಿ ಬ್ಯಾಂಡ್ ವಿಸಿಟ್  ಇರಾನ್ ಕೊರ್ಲಿನ್ ಎಂಬ ನಿರ್ದೇಶಕನ ಚೊಚ್ಚಲ ಪ್ರಯತ್ನ. ಚಿತ್ರದ ನಾಯಕ ಹಾಗೂ ಆತನ ಮಗ ಎರಡು ಪ್ರತ್ಯೇಕ ತಲೆಮಾರುಗಳ ಪ್ರತಿನಿಧಿಗಳಂತೆ ಕಾಣುತ್ತಾರೆ. ಇಬ್ಬರ ವಿಚಾರಗಳಲ್ಲೂ ವ್ಯಕ್ತವಾಗುವ ಭಿನ್ನತೆಗಳು ಬದಲಾದ ಸಾಮಾಜಿಕ ಸ್ವರೂಪವನ್ನು ಬಿಂಭಿಸುತ್ತಾ ಮುಂದುವರೆಯುತ್ತದೆ. 2007 ನೇ ಸಾಲಿನಲ್ಲಿ ಇಸ್ರೇಲ್ನಿಂದ ಆಸ್ಕರನ ಅತ್ಯತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಸ್ಪಧಸಿತ್ತು. ಅದೃಷ್ಟ ನೆಟ್ಟಗಿರಲಿಲ್ಲ. ಪ್ರಶಸ್ತಿ ಕೈ ತಪ್ಪಿ ಹೋಯಿತು.
ಕಥೆ ಸಾಗುವುದು ಹೀಗೆ...
  ಈಜಿಪ್ತ್ ನ ಅಲೆಗ್ಸಾಂಡ್ರಿಯಾ ಸೆರಮೋನಿಯಲ್ ಪೋಲಿಸ್ ಆರ್ಕೆಷ್ಟ್ರಾ ಎಂಟು ಮಂದಿಯನ್ನೂಳಗೊಂಡ ಬ್ಯಾಂಡ್ ಸೆಟ್ ತಂಡ. ಇವರಿಗೆ ಇಸ್ರೇಲ್ ನ  ಅರಬ್ ಇಂಟರ ನ್ಯಾಷನಲ್ ಸೆಂಟರ್ ನಿಂದ ಕಾರ್ಯಕ್ರಮ ನಡೆಸಿಕೊಡಲು ಆಹ್ವಾನ ಬರುತ್ತದೆ. ಅಂದುಕೊಂಡಂತೆ ಎಲ್ಲವೂ ಆಗದು ಎಂಬ ಸಂಗತಿಯನ್ನು ಪರೋಕ್ಷವಾಗಿ ಹೇಳಲು ಬಳಸಿಕೊಂಡ ರೂಪಕದಂತೆ ಇವರು ವಿಳಾಸ ತಪ್ಪಿ ಬೇರೆ ಪ್ರದೇಶಕ್ಕೆ ಬಂದಿಳಿಯುತ್ತಾರೆ. ಅಷ್ಟಷ್ಟೇ ಬದುಕಿನ ಅರ್ಥ ಕಂಡುಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಕೆಷ್ಟ್ರಾ ದ ನಾಯಕ ತೌಫೀಕ್ ನ ಬದುಕಿಗೆ ಇಲ್ಲಿ ವಿಚಿತ್ರ ತಿರುವು. ಯಾವುದೇ ಗುರುತು ಪರಿಚಯವಿಲ್ಲದ ಪ್ರದೇಶದಲ್ಲಿ ಹೊಸ ದಿಕ್ಕನ್ನು ಹಿಡಿಯುತ್ತಾನೆ.ಆದರೆ ಸ್ವಗತದಲ್ಲಿ ತನ್ನ ಮಗನ ಬಗ್ಗೆ ತಾನು ನಿಷ್ಠುರ ಧೋರಣೆ ತಾಳಿದ್ದೇ ತನ್ನ ಹೆಂಡತಿಯ ಸಾವಿಗೆ ಕಾರಣವಾಯಿತು ಎಂಬ ದುಃಖ. ಆತನನ್ನು ಖಿನ್ನತೆ ಆವರಿಸುತ್ತದೆ. ಈ ಬಗ್ಗೆ ಆತನಲ್ಲಿ ಜಿಗುಪ್ಸೆ ಇದೆ.ಇದರಿಂದ ಹೊರ ಬರುವ ಸಲುವಾಗಿಯೇ ಬ್ಯಾಂಡ್ ತಂಡ ಬೇಕು... ಆ ಸದ್ದಿನಲ್ಲಿ ಮನಸಿನೊಳಗಿನ ಗದ್ದಲ ಸುಮ್ಮನೇ ಅಳಿಸಿ ಹೋಗಬೇಕು...
   ಅನಾಮಿಕ ಪ್ರದೇಶದ ರೆಸ್ಟೋರೆಂಟ್ನಲ್ಲಿ ಉಳಿದುಕೊಳ್ಳುವ ಈ ತಂಡಕ್ಕೆ ಅಲ್ಲಿ ರೆಸ್ಟೋರೆಂಟ್ ಮಾಲಕಿ ಡೈನಾ ಜೊತೆಯಾಗುತ್ತಾಳೆ ಬಿಟ್ಟು ಹೋದ ಪ್ರಿಯತಮನ ಬಳಿಕ ಆಕೆಯ ಬದುಕಿಗೂ ನೆರಳಿಲ್ಲ. ಒಂದರ್ಥದಲ್ಲಿ ಬರೀ ಬರಡು ಬದುಕು ಬಾಳುತ್ತಿದ್ಗದಾಳೆ .ಇವರಿಬ್ಬರ ಬದುಕು ಚರಂಡಿ ಪಕ್ಕದ ಗೋಡೆ.


 ಡೈನಾ ಜೊತೆ ಸುಂದರ ಸಂಜೆಯಲ್ಲಿ ನಡೆಯುವ ಮಧುರ ಮಾತುಕತೆಯಿಂದ ತನ್ನ ಮಗ ಅರ್ಥವಾಗುತ್ತಾನೆ..ತೌಫೀಕ್ ಗೆ 80ರ ದಶಕದ ದಿನ ಮರುಕಳಿಸಬೇಕು ಎಂಬ ಆಸೆ..ಆದರೆ ಆತನ ಮಗ ಹೊಸ ತಲೆಮಾರಿನ ಪ್ರತಿನಿಧಿ.ಇವರಿಬ್ಬರಿಗೆ ಕೊಂಡಿಯಾಗುವವಳು ಡೈನಾ.
 ತನ್ನೋಳಗಿನ ತಾನನ್ನು ಅಡಗಿಸಿಟ್ಟ ತೌಫೀಕ್ ಅದನ್ನು ಹೊರಜಗತ್ತಿಗೆ ತೋರಿಸುವುದೇ ಚಿತ್ರದ ಒನ್ ಲೈನ್ ಕಥೆ.ಇದೆ ಈ ಚಿತ್ರದ ಪರಿಣಾಮಕಾರಿ ಅಂಶ ಇದರ ನಡುವೆ ನಡೆಯುವ ಜಂಜಾಟಗಳನ್ನು ಇರಾನ್ ಮನೋಜ್ಞವಾಗಿ ಚಿತ್ರಿಸಿದ್ದಾನೆ. 2007ರಲ್ಲಿ ಹೆಚ್ಚಿನ ಅಂತಾರಾಷ್ಟ್ರಿಯ ಪ್ರಶಸ್ತಿಗಳಿಸಿದ ಈ ಚಿತ್ರದ ಕಥೆ ಹೆಚ್ಚಿನ ಜನರ ಜೀವನದಲ್ಲಿ ಸಂಭವಿಸುವಂತದ್ದು ‘!.ಚಿಕ್ಕಪುಟ್ಟ ವಿಷಯಗಳಿಗೆ ಯಡವಟ್ಟುಗಳಾಗುವ ಬದುಕಿನ ಸುಂದರ ವಿಡಂಬನೆ ಚಿತ್ರದಲ್ಲಿದೆ.
ನನಗೇಕೋ ವಿಶೇಷ ವ್ಯಕ್ತಿ ಅನಿಸಿದ..


ಚಿತ್ರ ನೋಡಿದೆ, ಕಾಡುವ ಚಿತ್ರಗಳೆಂದರೆ ಒಂದು ಪಟ್ಟು ಹೆಚ್ಚಿಗೆ ಖುಷಿಯಾಗುತ್ತದೆ.ತೌಫೀಕ್ ನ ಪಾತ್ರ ಕಾಡುತ್ತಿತ್ತು ಇರಾನ್ ನೆನಪಾಗುತ್ತಿದ್ದ..
ಇಂತದ್ದೂಂದು ಅಂತರ್ಗತ ಕಥೆ ನಿರ್ದೇಶಕನಿಗೆ ಹೊಳೆದಿದ್ದಾದರೂ ಹೇಗೆ ಎನ್ನುವ ಕುತೂಹಲ ಕಾಡುತ್ತಿತ್ತು. ಇಂಟರನೆಟ್ ನ ಕಿಂಡಿಯಲ್ಲಿ ಇರಾನ್ ಎಂದು ಬರೆದಾಗ ಸಿಕ್ಕಿದ್ದಿಷ್ಟು..
  ಇಸ್ರೇಲ್ನ ಟಿವಿಗಳಲ್ಲಿ ಬರುತ್ತಿದ್ದ ಸಾಂಪ್ರದಾಯಿಕ ಆರ್ಕೆಷ್ಟ್ರಾ ಗಳು ಟಿವಿಗಳ ಖಾಸಗೀಕರಣದಿಂದ ಮರೆಯಾದವು. ಒಂದು ಕಾಲದಲ್ಲಿ ಇಡಿ ಇಸ್ರೇಲ್ ಜನತೆಯನ್ನು ಹಿಡಿದಿಟ್ಟಿದ್ದ ಆ ಕಾರ್ಯಕ್ರಮ ಟಿವಿ ಚಾನೆಲ್ಗಳಲ್ಲಿ ಬರುವ ಆಧುನಿಕ ಕಾರ್ಯಕ್ರಮದ ನಡುವೆ ಮರೆಯಾದವು.ಇದೆ ಕಥೆಗೆ ನನ್ನ ಜೀವನದ ಕೆಲವು ಘಟನೆಗಳನ್ನು ಸೇರಿಸಿ ಈ ಚಿತ್ರ ಮಾಡಿದ್ದೆನೆ ಎನ್ನುತ್ತಾನೆ.
 ನಿರ್ಜನ ಪ್ರದೇಶಗಳನ್ನು ನಿರ್ಲಜ್ಜವಾಗಿ ಕಾಮೆರಾದಲ್ಲಿ ಸರೆಹಿಡಿದ ರೀತಿಯಂತೂ ಅದ್ಬುತ.ಬರಡು ಬದುಕಿಗೆ ಮಾದರಿ ಎಂಬಂತೆ ತೋರಿಸಿರುವ ಪ್ರತಿಮೆಗಳು...ಒಂದಕ್ಕಿಂತ ಒಂದು ದೃಶ್ಯ ವೈಭವ ಚಿತ್ರವನ್ನುನ್ನು ಸುಂದರವಾಗಿಸಿದೆ. ಸುತ್ತಲೂ ಕತ್ತಲೆ..ಬೋಳು ಬೆಂಚು...ತಲೆ ಮೇಲೆ ಮಂದಬೆಳಕಿನ ಟ್ಯೂಬ್ ಲ್ಐಟು..ತೌಫೀಕ್  ಹಾಗೂ ಡೈನಾ ಮಾತಾಡುವಾಗ ಕ್ಯಾಮೆರಾ ಕಲೆಗಾರಿಕೆ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.
ಕೊನೆ ಕಾಲಂ
 ಪ್ರಪಂಚದಲ್ಲಿ ಹಲವು ಚಿತ್ರಗಳಿವೆ.ನೋಡಿದಾಗ ತಣಿಸುವ..ಇಲ್ಲದಿದ್ದಲ್ಲಿ ಕುಣಿಸುವ..ಚಿತ್ರಗಳ ನಡುವೆ.ಕಾಡುತ್ತದೆ..ದಿ ಬ್ಯಾಂಡ್ ವಿಸಿಟ್..ಇದರ ಡಿವಿಡಿ ಹುಡುಕಿಕೊಂಡು ಚಿತ್ರ ನೋಡಿ,ಮನಸ್ಸು ಹಗುರಾಗುತ್ತದೆ..ಜೀವನದಲ್ಲಿ ಕಳೆದುಕೊಂಡದ್ದು ಸಿಗುತ್ತದೆ. ಈಗೀಗ ಕಾಡುವ ಚಿತ್ರಗಳು ಬರುವುದು ತುಂಬಾ ಕಡಿಮೆ.

Saturday, August 21, 2010

ಮುಂಗಾರು ಮತ್ತೆ ಹಿತ ನೀಡಬಹುದೇ...

 ತನ್ನ ಜೀವನದ ಅಮೂಲ್ಯ ಘಟ್ಟವನ್ನು ಕತ್ತಲ ಕೋಣೆಯಲ್ಲಿ ಕಳೆದು ಬ್ರಹ್ಮಚಾರಿಯಾಗಿಯೆ ಉಳಿದಿರುವ ಮೂವಳ್ಳಿನಾರಾಯಣ್ ಎಂಬುವವರ ಕಥೆ ಆಧರಿಸಿದ ಚಿತ್ರ.. ನಿಜ..ಚಿತ್ರ ನೋಡದೆ ಆ ಚಿತ್ರದ ಬಗ್ಗೆ ಬರೆಯಬಾರದು ಎಂಬ ಧೃಡ ನಿರ್ಧಾರದಲ್ಲಿದ್ದೆ ..ಆದರೆ ದೃಶ್ಯ ಮಾಧ್ಯಮಗಳಲ್ಲಿ ಆ ಚಿತ್ರದ ಬಗ್ಗೆ ಮೊದಲು ಅಷ್ಟೊಂದು ಪ್ರಚಾರ ಸಿಕ್ಕಿರಲಿಲ್ಲಲ್ಲ ವಾಗಿತ್ತು.. ಬಿಎಂಟಿಸಿ ಬಸ್ಗಳಲ್ಲಿ ಹೋಗುವಾಗ ಹೊಸ ಚಿತ್ರಗಳ ಬ್ಯಾನರ್ ಗಳನ್ನುನೋಡುವ ಹವ್ಯಾಸ ನನಗಿದೆ..ಹೀಗೆ ಒಂದು ಸಾರಿ ನೋಡುವಾಗ ಆ ಚಿತ್ರದ ಬ್ಯಾನರ್ ನೋಡಿದ್ದೆ....ಭಾರತದ ಒಂಭತ್ತು ಪ್ರಧಾನಿಗಳಿಗೆ ತಿಳಿಯದೆ ಹೋದ ಕಥೆ....  ಮತ್ತೆ ಮುಂಗಾರು....ಕಡಲ ತೀರದ ಕವಿತೆ.   
ಮುಂಗಾರು ಮಳೆ ಎಂಬ ಮೃದುಲ ಹಿಟ್ ಚಿತ್ರ... ಮೊಗ್ಗಿನ ಮನಸು ಎಂಬ ಹುಡುಗಿಯರ ಬಾಳ ಕವಿತೆಯ ಚಿತ್ರ ಮಾಡಿ ಜನರಿಗೆ ನೀಡಿದ್ದ ಎಂ.ಕೃಷ್ಣಪ್ಪ ನವರ ಚಿತ್ರ... ಮುಂಗಾರು ಮತ್ತೆ ಬರಲು ಈ ಕಥೆಯೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ..ಶ್ರೀನಗರ ಕಿಟ್ಟಿ ಹಾಗು ತನ್ನ ಹನ್ನೋಂದು ಮಂದಿ ಗೆಳೆಯರ ಕತೆ ಈ ರೀಲ್ನಲ್ಲಿ....ನಾರಾಯಣ ಮತ್ತು ತನ್ನ ಹನ್ನೋಂದು ಮಂದಿ ಗೆಳೆಯರ ಕಥೆ ರಿಯಲ್ನಲಲ್ಲಿ?...  ನಿಜಕ್ಕು...ಕಲಿಯದವರು,ಕಲಿತವರು,ಜೀವನದಲ್ಲಿ ಗೆದ್ದವರು,ಸೋತವರು ಎಲ್ಲರಿಗೂಬಾಂಬೆ ಎಂಬ ಮಾಯೆ ತನ್ನ ಕೈ ಚಾಚಿ ತಬ್ಬಿಕೊಲತ್ತಾಳೆ.ನಾರಾಯಣ್ ಅವರ ಜೀವನದಲ್ಲಿ ಆದದ್ದು ಅದೆ..ಹೊಟ್ಟೆ ಹೊರೆಯುವುದಕ್ಕಾಗಿ ಮಾಯಾಕೂಪದ ನಗರಿಗೆ ಪಾದ ಬೆಳೆಸಿದ ಅವರಿಗೆ ಮೋಸವಾಗಲಿಲ್ಲ.. ಯಾಕೆಂದರೆ ಬಾಂಬೆ ಯಾವತ್ತು ಯಾರಿಗೂ ಮೋಸಮಾಡುವುದಿಲ್ಲ ತುತ್ತು ಅನ್ನಕ್ಕೆ ಅಲ್ಲಿ ಎಂದೂ ಭರವಿಲ್ಲ. ಆದರೆ ಭದ್ರತೆ ಬಗ್ಗೆ ಅಲ್ಲಿಯಾರೂ ಖಾತ್ರಿಕೊಡುವುದಿಲ್ಲ.ನಾವೆ ನೋಡಿಕೊಳ್ಳಬೆಕು...ನಾರಾಯಣ ಹಾಗೂ ಅವರ ಹನ್ನೂಂದು ಮಂದಿ ಗೆಳೆಯರಿಗೆ ಹಡಗಿನಲ್ಲಿ ಕೆಲಸ ಸಿಕ್ಕಿತು...ಆದರೆ ಅವರ ಜೀವನದ ಹಡಗು ವಿರುದ್ದ ದಿಕ್ಕಿಗೆ ತಿರುಗಿತು..ಹಡಗು ಭಾರತೀಯ ಗಡಿ ದಾಟಿ ಪಾಕಿಸ್ತಾನದ ಬಾಗಿಲಿನಲ್ಲಿ ನಿಂತಿತ್ತು...ಮುಂದೆ 24 ವರ್ಷಗಳ ಕತ್ತಲ ಕೋಣೆಯ ಶಿಕ್ಷೆ ಜಾರಿ...ಅದರೆ ಇಷ್ಟಾದರೂ ಭಾರತದ ಪ್ರಧಾನಿಯಾಗಿದ್ದ.ಪ್ರಧಾನಿಯಾದ ಯಾರಿಗೂ ಈ ವಿಷಯ ಗಮನಕ್ಕೆ ಬರಲಿಲ್ಲ..ಇದೆ ಈ ಚಿತ್ರದ ಸಾರ.. ಹಾಗಂತ ನಿರ್ದೇಶಕ ದ್ವಾರ್ಕಿ ಅವರ ಶ್ರಮ ಕಥೆ ಕಟ್ಟುವಲ್ಲಿ ನಿಜವಾಗಿಯೂ ಇದೆ.ಚಿತ್ರಕ್ಕೋಂದು ಪ್ರೇಮ ಕಥೆ ನೀಡಿ ಸುಂದರ ಚಿತ್ರವಾಗಿಸಿದ್ದಾರೆ..!!! ನಾರಾಯಣ ಪಾಕ್ ಕಾಲಾಪಾನಿಗೆ ಹೊಗುವಾಗ ಅವರ ವರ್ಷ 24 ಬಿಡುಗಡೆಯಾದಾಗ..48..ಯೌವ್ವನ ಕತ್ತಲ ಕೋಣೆಯಲ್ಲಿ ನಶಿಸಿ ಹೊಗಿತ್ತು....
ಕಥೆ ಇರಬೇಕು ಮನಸ್ಸಿಗೆ ಮುಟ್ಟುವ ಹಾಗೆ... 
ಬೆಂಗಳೂರೆಂದರೆ... ಸುಮ್ಮನೆ ಸರಿದು ಹೋಗುವ ಮೊಡವಲ್ಲ...ಇಲ್ಲಿನ ಗಲ್ಲಿ ಗಲ್ಲಿ ಜನರ ನಡುವೆ ಒಂದು ಕಥೆ ಇರುತ್ತದೆ. ಆ ಕಥೆ ಮಾತ್ರ ಸಿನಿಮಾವಾಗುತ್ತದೆ ಎಂಬ ಕಾಲವಿತ್ತು... ಹೌದು....ಹಿಂದೊಂದು ಕಾಲ ಹಾಗೆಯೆ ಇತ್ತು...ಯಾಕೆಂದರೆ ಆಗ ಗಾಂದಿನಗರ ಎಂಬ ಸಿನಿಮಾ ಲೋಕ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿತ್ತು..ಯಾವತ್ತು ಕಥೆ ನಮ್ಮ ಸುಪ್ತ ಮನಸ್ಸಿಗೆ ಇಷ್ಟವಾಗಬೇಕು...ಹಾಗೆ ಅಂತಹ ಕಥೆಯನ್ನು ಕ್ಯಾಮೆರಾ ಕಣ್ಣಿನಲ್ಲಿ ತೋರಿಸುವ ಕಲೆ ಇರಬೇಕು..

Sunday, August 8, 2010

ಅವನೆಂಬ ನಿಗೂಢವೂ... ಆತನ ಸಿನಿಮಾಗಳೆಂಬ ಗುಂಗೀ ಹುಳವೂ!




ಬಹುಶಃ ಆತನೊಬ್ಬನೇ ಇರಬೇಕು!
 45 ವರ್ಷದ ಚಿತ್ರ ಜೀವನದ ಇತಿಹಾಸದಲ್ಲಿ ಆತನ ಗಮನ ಸಸ್ಪೆನ್ಸ್ ಥ್ರಿಲ್ಲರ್‌ ಬಿಟ್ಟರೆ ಬೇರೆ ಯಾವ ಪ್ರಕಾರಗಳತ್ತಲೇ ಹರಿದಿಲ್ಲ... ಲವ್‌ಸ್ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್‌ ಯಾವುದಾದರೂ ಸರಿ ಅಲ್ಲೊಂದು ಸಸ್ಪೆನ್ಸ್ ನೀಡದಿದ್ದರೆ ಅದು ಆತನ ಮಟ್ಟಿಗೆ ಚಿತ್ರವೆ ಅಲ್ಲ....
  
 ‘ಜನರು ಚಿತ್ರ ನೋಡಬೇಕಾದರೆ ಅವರಿಗೆ ಚಿತ್ರಮಂದಿರದ ಕುರ್ಚಿಯಲ್ಲಿ ಒಂದು ನಿಮಿಷವೂ ಬಿಡದೆ ಕೂರುವಂತೆ ಮಾಡುವ ತಾಕತ್ತು ಚಿತ್ರದಲ್ಲಿ ಇರಬೇಕು. ಅದು ಸಸ್ಪೆನ್ಸ್ ಚಿತ್ರಗಳಿಂದ ಮಾತ್ರ ಸಾಧ್ಯ’ಅನ್ನುತ್ತಾನೆ,ಆಲ್‌ಫ್ರೆಡ್‌ ಹಿಚ್‌ಕಾಕ್‌
ಕೌತುಕ,ಹಾಸ್ಯ,ಕಾಮ ಈ ಮೂರು ವಿಷಯಗಳು ಅತನ ಚಿತ್ರದ ಕಥಾವಸ್ತು. 45ವರ್ಷಗಳವರೆಗೆ, 50ಕ್ಕಿಂತ ಹೆಚ್ಚು ಚಿತ್ರಕಥೆಗಳು ಈ ಮೂರು ಕಥಾವಸ್ತುವಿನ ಮೇಲೆ ಆತನ ತಲೆಯಲ್ಲಿ ಮೂಡಿದ್ದು ಆಶ್ಚರ್ಯವೇ ಸರಿ...
ಬಾಲ್ಯ
ಆಲ್‌ಫ್ರೆಡ್‌ ಜೋಸೆಫ್‌ ಹಿಚ್‌ಕಾಕ್‌..ಇದೆ ಆಗಸ್ಟ್ 13ಕ್ಕೆ ಅತನ 111ನೆ ವರ್ಷದ ಹುಟ್ಟುಹಬ್ಬ.1899 ರಲ್ಲಿ ಇಂಗ್ಲೆಂಡ್‌ನ ಲೆಯ್‌ಟಾನ್‌ಸ್ಟೀನ್‌ ಊರಿನ ಅಪ್ಪಟ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ.ಲಂಡನ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದಾಗ ಅತನ ಕಣ್ಣಲ್ಲಿ ಚಿತ್ರರಂಗ ಹೊಕ್ಕುವ ಮಿಂಚು ಸುಳಿದಾಡಿತ್ತು.
 ಅದಕ್ಕಾಗಿ ಅತ ಪ್ಲೇಯರ್‌‌ ಲಾಸ್ಕಿ ಸ್ಟುಡಿಯೋದಲ್ಲಿ ಚಿತ್ರಗಳ ಟೈಟಲ್‌ ಕಾರ್ಡ್‌ ಹಾಗೂ ಮೂಕಿ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಮಾಡುತ್ತಾ ತನ್ನ ಚಿತ್ರ ಜೀವನ ಆರಂಭಿಸಿದ..
 ಅಲ್ಲಿ ಆತ, ಕಲಾನಿರ್ದೇಶನ,ಚಿತ್ರಕಥೆ ರಚನೆ,ಎಡಿಟಿಂಗ್‌ನ ಒಳಗೂ ಹೊರಗೂ ಅರಿತುಕೊಂಡು, 1922ರಲ್ಲಿ ಸಹಾಯಕ ನಿರ್ದೇಶಕನಾಗುತ್ತಾನೆ. ಅದೇ ವರ್ಷ ಮಿಸೆಸ್‌.ಪೀಬಾಡಿ ಚಿತ್ರ ನಿರ್ದೇಶಿಸಿದ.ಆದರೆ ಆತನ ನಿಧನದ ನಂತರವೂ ಆ ಚಿತ್ರ ಬಿಡುಗಡೆಯಾಗಲೇ ಇಲ್ಲ.ನಂತರ 1925ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮಾಡಿದ ವೊದಲ ಚಿತ್ರ ದಿ ಪ್ಲೇಶರ್‌ ರ್ಗಾಡನ್‌. ಇದು ಮೂಕಿ ಚಿತ್ರವಾಗಿತ್ತು.1929ರಲ್ಲಿ ಈತನ ವೊದಲ ವಾಕ್‌ ಚಿತ್ರ ಬ್ಲಾಕ್‌ಮೇಲ್‌ ಬಿಡುಗಡೆಯಾಗುವ ಸಮಯದಲ್ಲಿ ದೊಡ್ಡ ಪರದೆಯ ಮೇಲೆ ಚಿತ್ರ ಬರುವುದೆಂದರೆ ವಿಸ್ಮಯ ಎನ್ನುವ ಕಾಲವಾಗಿತ್ತು. ಅಂತದ್ದರಲ್ಲಿ....ಚಿತ್ರಗಳು ಮಾತನಾಡುತ್ತವೆ ಎಂದರೆ.... ದೊಡ್ಡ ಪರದೆಯ ಮೇಲೆ ತನ್ನ ಕಲ್ಪನೆಯ ಚಿತ್ರಗಳು ಮಾತನಾಡುವುದನ್ನು ನೋಡಿ ಒಂದು ಕ್ಷಣ ಆತನೇ ದಿಗ್ಬ್ರಾಂತನಾಗಿದ್ದ...
   1934ರಲ್ಲಿ ಮೆನ್‌ ವು ನೊ ಟು ಮಚ್‌ ಚಿತ್ರ ಆತನಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು.ಕೌಟುಂಬಿಕ ಸಂಬಂಧಗಳ ಬಗ್ಗೆ ತನಿಖೆ ನಡೆಸುವ ಸಸ್ಪೆನ್ಸ್ ಚಿತ್ರದ ಮೂಲಕ ಚಿತ್ರ ಜನರ ಬಳಿ ಸೇರಿತ್ತು....
ತನ್ನ ಕಣ್ಣಲ್ಲಿ ಅರಳುವ ಚಿತ್ರಗಳನ್ನೆ ಯಥಾವತ್ತಾಗಿ ಕ್ಯಾಮೆರಾ ಕಣ್ಣಿನಲ್ಲೂ ತೋರಿಸುವ ಚಾಕಚಕ್ಯತೆ ಆತನಲ್ಲಿತ್ತು.ಅದಕ್ಕಾಗಿಯೇ ಆತ ಯಶಸ್ವಿಯಾದ...
ದಿ 39 ಸ್ಟೆಪ್ಸ್(1935),ಸೀಕ್ರೇಟ್‌ ಎಜೆಂಟ್‌(1936)ಹೀಗೆ ಚಿತ್ರಗಳು ವರ್ಷಕ್ಕೂಂದರಂತೆ ಬರುತ್ತಿತ್ತು.ಜಮೈಕಾ ಇನ್‌(1939) ಆತನ ಕೊನೆಯ ಬ್ರಿಟಿಷ್‌ ಚಿತ್ರ...
ತಾನೂ ಕೇವಲ ಬ್ರಿಟಿಷ್‌ ಚಿತ್ರಗಳಿಗೆ ಸೀಮಿತವಾಗಬಾರದು ಎಂದುಕೊಂಡವನೇ ಡಾಪ್ನೇ ಡು ಮೋರಿಯರ್‌ಅವರ ಕಾದಂಬರಿಯನ್ನು 1940ರಲ್ಲಿ ರಿಬೆಕ್ಕಾ ಚಿತ್ರ ಮಾಡಿ ಅದರಲ್ಲಿ ಯಶಸ್ವಿಯಾದ.

   ಪ್ರಮುಖ ಚಿತ್ರಗಳು ಇಡಿ ಹಾಲಿವುಡ್‌ ಚಿತ್ರಜಗತ್ತಿನಲ್ಲಿ ಹಿಚ್‌ಕಾಕ್‌ ಚಿತ್ರಗಳೆಂದರೆ ಜನರನ್ನು ಸೆಳೆಯುವಂತೆ ಮಾಡಿದ್ದು 1941ರಲ್ಲಿ ಬಂದ ಸಸ್ಪೀಶಿಯನ್‌ ಚಿತ್ರ.ತನ್ನ ಗಂಡ ಒಬ್ಬ ಕೊಲೆಗಾರ ಎಂದು ಚಿಂತಿಸುವ ಮಹಿಳೆಯ ಕಥೆ ಆಧಾರಿತ ಚಿತ್ರವನ್ನು ಕೌಟುಂಬಿಕ ಚೌಕಟ್ಟಿನೊಳಗೆ ಅದ್ಭುತವಾಗಿ ಆತ ಚಿತ್ರಿಸಿದ್ದ.ಹಾಲಿವುಡ್‌ನಲ್ಲಿ ಹಿಚ್‌ಕಾಕ್‌ ಯುಗ ಆರಂಭವಾಗಿದ್ದು ಈ ಚಿತ್ರದ ಮೂಲಕ.
 ಆತನ ಚಿತ್ರಗಳಲ್ಲೆ ಮತ್ತೆ ಮತ್ತೆ ಮನಸ್ಸಿಗೆ ಕಾಡುವ ಚಿತ್ರ 1943ರ ಶಾಡೋ ಆಫ್‌ ಡೌಟ್‌. ಕೊಲೆಯಾದ ತನ್ನ ಅಂಕಲ್‌ನನ್ನು ಅಮೇರಿಕಾದ ಮಧ್ಯಮವರ್ಗದ ಜನರಲ್ಲಿ ಕಾಣುವ ಅಮಾಯಕ ಯುವತಿಯ ಕಥೆ ಇದರಲ್ಲಿ ಆಕೆಯ ಪಾತ್ರ ಪೋಷಣೆ ಅದ್ಭುತವಾಗಿ ದಾಖಲಾಗಿತ್ತು.
ಹಿಚ್‌ಕಾಕ್‌ನ ಪರ್ವಕಾಲ
   ಈತ ಈಗಲೂ ನೆನಪಾಗುತ್ತಾನೆ ...1950 ರಿಂದ 60ರ ಕಾಲ ಹಿಚ್‌ಕಾಕ್‌ ಚಿತ್ರಗಳ ಪರ್ವಕಾಲ. ಒಂದರ ಹಿಂದೆ ಒಂದರಂತೆ ನೆನಪಿಸಿಕೊಳ್ಳುವ,ಕಾಡುವ ಚಿತ್ರಗಳನ್ನು ಕೊಟ್ಟಿದ್ದು ಅತ ಈ ಕಾಲದಲ್ಲಿ ಐ ಕಾನ್‌ಫೆಸ್‌(1953),ಹೆಸರಲ್ಲೆ ಕ್ರಾಂತಿ ಮಾಡಿದ ಚಿತ್ರ ಡಯಲ್‌ ಎಂ ಫಾರ್‌ ಮರ್ಡ್‌ರ್‌(1954),ಟು ಕ್ಯಾಚ್‌ ಎ ಥೀಫ್‌(1955),ಮೆನ್‌ ವು ನೊ ಟು ಮಚ್‌ ಚಿತ್ರದ ರೀಮೇಕ್‌(1956),ಹಾಸ್ಯಾತ್ಮಕ ಸಸ್ಪೆನ್ಸ್ ಚಿತ್ರ ದಿ ಟ್ರಬಲ್‌ ವಿತ್‌ ಹ್ಯಾರಿ(1955),ಡಾಕೊಡ್ರಾಮಾ(1956) ಎಲ್ಲವೂ ಆತನಿಗೆ ಹೆಸರು ತಂದುಕೊಟ್ಟಿತು.
ಕೊನೆಗೆ ನಿರ್ಮಾಪಕ
ವರ್ಷಕ್ಕೆ ಒಂದು ಎರಡರಂತೆ ಹಿಚಕಾಕ್‌ ಚಿತ್ರ ಮಾಡುತ್ತಲೆ ಇದ್ದ ಅತನ 1969 ರಲ್ಲಿ ಬಿಡುಗಡೆಯಾದ ಟೋಪೆಜ್‌ ಚಿತ್ರದ ಸೋಲು ಆತನಿಗೆ ಅರಗಿಸಿಕೊಳ್ಳಲಾಗಲಿಲ್ಲ.ಕೊನೆಗೆ ಆತನೆ ಚಿತ್ರ ನಿರ್ಮಿಸುವ ನಿರ್ಧಾರಕ್ಕೆ ಬಂದು 1972ರಲ್ಲಿ ಫ್ರೇನ್‌ಜಿ ಚಿತ್ರ ಮಾಡಿದ ಅದರ ಚಿತ್ರಕಥೆ ತಯಾರಿಸಿ ಚಿತ್ರ ಬಿಡುಗಡೆಯಾಗಲು ತೆಗೆದುಕೊಂಡಿದ್ದು ಬರೋಬ್ಬರಿ ನಾಲ್ಕು ವರ್ಷ....
ಒಬ್ಬ ಅಮಾಯಕ ಮನುಷ್ಯ ಸಿರಿಯಲ್‌ ಕಿಲ್ಲರ್‌ ಆಗುವ ಕಥಾಹಂದರವಿದ್ದ ಈ ಚಿತ್ರ ಹಾಲಿವುಡ್‌ ನಲ್ಲಿ ಮತ್ತೆ ಹಿಚ್‌ಕಾಕ್‌ ಯುಗ ಮರಳಿಸಿತ್ತು.. 1976ರಲ್ಲಿ ಬಂದ ಫ್ಯಾಮಿಲಿ ಪ್ಲಾಟ್‌ ಈ ಸಸ್ಪೆನ್‌‌ಸ ಥಿಲ್ಲರ್‌ ಹರಿಕಾರನ ಕೊನೆಯ ಚಿತ್ರ...
ಕೊನೆಗಾಲ
  50ಕ್ಕಿಂತ ಹೆಚ್ಚು ತನ್ನ ಮೂರು ಕಥಾವಸ್ತುವಿನ ಹಂದರದಿಂದ ಹೊರಬೀಳದೆ ಇದ್ದರೂ, ತನ್ನ ಚಿತ್ರದಲ್ಲಿ ಎಲ್ಲೂ ಜನರಿಗೆ ಬೇಸರವಾಗದಂತೆ ಚಿತ್ರಮಂದಿರದ ಕುರ್ಚಿಯಲ್ಲಿ ಭದ್ರವಾಗಿ ಕೂರುವಂತೆ ಮಾಡುತ್ತಿದ್ದ್ದ... ಹೀಗೆ ಹೇಳುವ ಬದಲು ಆತನ ಚಿತ್ರವೆಂದರೆ ಜನ ಕುರ್ಚಿ ಬಿಟ್ಟು ಎಳುತ್ತಿರಲ್ಲಿಲ್ಲ ಎನ್ನುವುದೇ ಸಮಂಜಸವಾಗುತ್ತದೆ.ತನ್ನ ಕೊನೆಗಾಲದಲ್ಲಿ ಹೃದಯದ ತೊಂದರೆ ಹಾಗೂ ಲಿವರ್‌ ಫೇಲ್ಯೂರ್‌ ನಿಂದ ವೀಪರೀತ ಸಮಸ್ಯೆಗೊಳಗಾಗಿದ್ದ ಹಿಚ್‌ಕಾಕ್‌ ಎಂಬ ಮಹಾನ್‌ ಸಸ್ಪೆನ್ಸ್ ಥಿಲ್ಲರ್‌ ದೈತ್ಯ ಎಪ್ರಿಲ್‌ 28ರಂದು ಜಗತ್ತಿನಿಂದ ಮರೆಯಾದ.
ಕೊನೆಹನಿ
   ವಿಶ್ವ ಚಿತ್ರರಂಗದ ವೊದಲ ಚಿತ್ರ ದಿ ಗ್ರೇಟ್‌ ಟ್ರೈನ್‌ ರಾಬರಿಯಿಂದ ಇತ್ತಿಚೇಗೆ ಬಿಡುಗಡೆಯಾದ ಚೆಲುವೆಯೇ ನಿನ್ನ ನೋಡಲು...ಚಿತ್ರದವರೆಗೆ ಸಿನಿಮಾ ಸಮುದ್ರದ ಇತಿಹಾಸ ಬಹಳ ದೊಡ್ಡದು.
ಇಲ್ಲಿ ಬಂದು ಜೀವನ ಕಂಡುಕೊಂಡವರಿದ್ದಾರೆ ಹಾಗೇ ಕಳೆದುಕೊಂಡವರು ಇದ್ದಾರೆ. ಚಿತ್ರಗಳಲ್ಲಿ ಹೊಸ ಹೊಸ ಪ್ರಕಾರಗಳನ್ನು ಹುಡುಕುವ ನಿರ್ದೇಶಕರ ನಡುವೆ ಹಿಚ್‌ಕಾಕ್‌ ನಂತವರೂ ಬಲು ಅಪರೂಪವಾಗುತ್ತಾರೆ.

Friday, July 30, 2010

ಸಿನಿಮಾ ಎಂದರೆ ಬರಿ ಬೆಳ್ಳಿ ಪರದೆಯಲ್ಲ ಅದೊಂದು ಜೀವನ....

ಅವನು ಯಾವ ಚಿತ್ರವನ್ನೂ ಹಣಗಳಿಸಬೇಕು,ಜನರಿಗೆ ಮಾಧ್ಯಮಗಳ ಬಗ್ಗೆ ಪರಿಚಯವಾಗಬೇಕು ಎಂದು ಮಾಡಿದವನೇ ಅಲ್ಲ.ತನ್ನಿಷ್ಟಕ್ಕಾಗಿ ಚಿತ್ರಿಸುತ್ತಿದ್ದ ಅಲ್ಲಿ ಸಮಾಜದ ಒಳಿತು ಕೆಡುಕು ಗಳನ್ನು ಹೊರಗೆ ಹಾಕುತ್ತಿದ್ದ ಬದುಕಿನ ಆಡುಂಬೋಲಗಳಿಗೆ ತನ್ನದೆ ಆದ ಯೋಚನೆಯಲ್ಲಿ ಚಿತ್ರ ರೂಪವನ್ನು ನೀಡುತ್ತಿದ್ದ. ಅದೇ ಅವನ ಗೆಲುವನ್ನು ಬರೆಯುತ್ತದೆ ಎಂಬ ಯಾವ ಸುಳಿವೂ ಆತನಿಗಿರಲಿಲ್ಲ;ಗೆದ್ದುಬಿಟ್ಟ!
ಆತನ ಹೆಸರು ಫಾಸ್‌ ಬೈಂಡರ್‌...
      ಜರ್ಮನ್‌ ಚಿತ್ರ ಜಗತ್ತು ಇವನನ್ನು ಮರೆತರೂ, ವಿಶ್ವದ ಚಿತ್ರಪ್ರೇಮಿಗಳು ಈತ ನಿರ್ದೇಶಿಸಿದ ಚಿತ್ರಗಳ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಬೈಂಡರ್‌ ಮೂಸೆಯಲ್ಲಿ ಅರಳುವ ಸಿನಿಮಾಗಳು ವಾಸ್ತವ ಜಗತ್ತನ್ನು ಪರಿಚಯಿಸುತ್ತವೆ. ಬಾಲ್ಯದಲ್ಲಿ ಕಂಡ ,ಕಷ್ಟ-ಸುಖಗಳ ಬಗ್ಗೆ, ಬದುಕಿನ ಜಂಜಾಟ, ಆರ್ಥಿಕತೆಯ ತೋಳಲಾಟದ ಬಗ್ಗೆ ಫಾಸ್‌ ಮಾತ್ರ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಆತನ ಚಿತ್ರಕ ಶಕ್ತಿಗೆ ಸಲಾಂ ಹೊಡೆಯುತ್ತದೆ ಚಿತ್ರರಂಗ.ಬರೇ 37 ವರ್ಷ ಮಾತ್ರ ಬದುಕಿದ ಈತ 16 ವರ್ಷಗಳನ್ನು ಚಿತ್ರರಂಗದಲ್ಲಿಯೇ ಕಳೆದುಬಿಟ್ಟ.ಈ ವೇಳೆಯಲ್ಲೇ 44 ಚಿತ್ರ ನಿರ್ದೇಶಿಸಿ ತನ್ನ ಪ್ರಚಂಡ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದ. ಈ ಚಿತ್ರಗಳು ಎಂದಿಗೂ ನಮ್ಮ ನಿರೀಕ್ಷೆಯನ್ನು ಹುಸಿ ಮಾಡಲಾರವು.
ಹಾಗೆ ಕಳೆಯಿತು ಬಾಲ್ಯ...
 1945ರ ಮೇ11ರಲ್ಲಿ ಜರ್ಮನ್‌ ನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ ಬೈಂಡರ್‌ ಗೆ ಬಡತನ ಆಟದ ವಸ್ತುವಾಯಿತು.ಅಪ್ಪ ಸಾಮಾನ್ಯ ಫಿಸಿಶಿಯನ್‌,ತಾಯಿ ಅನುವಾದಕಿ. ಕಲಿಯಲು ಹೆಚ್ಚೇನೂ ಆಸಕ್ತಿ ವಹಿಸಲಿಲ್ಲ. ಜರ್ಮನ್‌ ಆರ್ಥಿಕತೆಯ ಬಗ್ಗೆ ನನಗೇನೂ ತಿಳಿದಿದೆ ಅದನ್ನು ನನ್ನ ಮಾಧ್ಯಮದಲ್ಲಿ ತೋರಿಸಬೇಕು ಅನ್ನುವ ಅವನ ಅದಮ್ಯ ಆಸೆ ಸಿನಿಮಾ ಮಾಧ್ಯಮದೆಡೆಗೆ ಆತನನ್ನು ತಿರುಗಿಸಿತು.ಕಣ್ಣಲ್ಲಿ ಚಿತ್ರಗಳ ಬಗ್ಗೆ ವಿಪರೀತ ಕನಸುಗಳನ್ನು ಹೊತ್ತುಕೊಂಡು 1965 ರಲ್ಲಿ ಬರ್ಲಿನ್‌ ಫಿಲ್ಮ್ ಆಂಡ್‌ ಟೆಲಿವಿಷನ್‌ ಅಕಾಡೆಮಿಗೆ ಪ್ರವೇಶ ಪರೀಕ್ಷೆ ಬರೆಯುತ್ತಾತನೆ. ಅಲ್ಲಿ ಆತ ಫೇಲ್‌!!
ಇಂತಹ ಅಕಾಡೆಮಿಗೆ ಪ್ರವೇಶ ಪಡೆದು ಅವರು ಹೇಳುವ ರೀತಿಯಲ್ಲಿ ಚಿತ್ರ ನಿರ್ದೇಶಿಸುವ ಬದಲು ತನ್ನ ಕಲ್ಪನೆ ಗೆ ಬಂದಂತೆ ಚಿತ್ರ ಮಾಡಬೇಕು ಎನ್ನುವ ಪ್ರಯತ್ನವಾಗಿ ಅದೇ ವರ್ಷ ದಿ ಸಿಟಿ ಟ್ರ್ಯಾಂಪ್‌ ಎನ್ನುವ ಹತ್ತು ನಿಮಿಷದ ಕಿರು ಚಿತ್ರ ನಿರ್ಮಿಸಿ ಅದರಲ್ಲಿ ಯಶಸ್ವಿಯಾಗುತ್ತಾತನೆ. ಗ್ರಂಥ ಬರೆಯುವ ಮುನ್ನ ಪೀಠಿಕೆ ಎಂಬಂತೆ ಇದ್ದ ಆ ಚಿತ್ರ ಆತನ ಬದುಕಿನ ದಿಕ್ಕನ್ನೇ ಬದಲಿಸುತ್ತದೆ ಅಂದರೆ ಆ ಹತ್ತು ನಿಮಿಷಕ್ಕಾಗಿ ಆತ ಅದೆಷ್ಟು ಕಷ್ಟಪಟ್ಟಿರಬೇಡ?
  ಕಿರು ಚಿತ್ರ ನಿದೇಶಿಸಿದ ಧೈರ್ಯ ಆತನನ್ನು ಬೆಳ್ಳಿತೆರೆಗೆ ಎಳೆಯಿತು.ಅ ಕಾರಣಕಕ್ಕೆ ಅತ 1969ರಲ್ಲಿ ಲವ್‌ ಇಸ್‌ ಕೋಲ್ಡರ್ ದೆನ್‌ ಡೆತ್‌ ಚಿತ್ರ ಮಾಡಿದ.ಪ್ರೇಮ-ಜೀವನ-ಸಾವು ಎಂದು ಮೂರು ವಿಷಯಗಳನ್ನಿಟ್ಟುಕೊಂಡು ಬದುಕಿನ ಪ್ರತಿ ಎಳೆಯನ್ನು ಸವಿವರವಾಗಿ ಬಿಡಿಸಿಟ್ಟ.ಚಿತ್ರ ಬಾಕ್ಸ ಆಫೀಸ್‌ ನಲ್ಲಿ ಮುಗ್ಗರಿಸಿತು.ಅದು ತಮ್ಮದೇ ತಪ್ಪು ಎಂಬುದು ಜರ್ಮನ್‌ ಜನತೆಗೆ ಅನಂತರ ತಿಳಿಯಿತು.ಅದೇವರ್ಷ ಕಾಟ್‌ಜೆಲ್‌ಮೆಚ್‌ರ್‌ ಎಂಬ ಚಿತ್ರ ಮಾಡಿದ ಸುಮಾರಾಗಿ ಗೆದ್ದಿತು.
ಇದು ಮೊದಲ ಗೆಲುವು..
  ಬಿವೇರ್‌ ಆಫ್‌ ಹೋಲಿ ವೋರ್‌ (1971) ಹೀಗೆ ಪ್ರತಿ ವರ್ಷ ಸಿನಿಮಾ ಮಾಡುತ್ತಲೆ ಬಂದ.ಆದರೂ ತಾನಿನ್ನೂ ಒಂದೇ ಒಂದು ಹಿಟ್‌ ಚಿತ್ರ ನೀಡಲಿಲ್ಲ ಎಂಬ ಕೊರಗು ಆತನನ್ನು ಕಾಡುತ್ತಲೇ ಇತ್ತು. 1972 ರಲ್ಲಿ ಆತ ನಿರ್ದೇಶಿಸಿದ ಮರ್ಚೆಂಟ್‌ ಆಫ್‌ ಪೋರ್‌ ಸಿಸನ್ಸ್ ಚಿತ್ರ ವನ್ನು ಜನ ಬಹುವಾಗಿ ಇಷ್ಟಪಟ್ಟರು.ಇಲ್ಲಿ ಬರುವ ಪ್ರತಿ ಪಾತ್ರವನ್ನು ಅಷ್ಟು ಮುತುವರ್ಜಿಯಿಂದ ಪೋಷಿಸಿದ್ದ.ಒಬ್ಬ ಪೋಲಿಸ್‌ ಅಧಿಕಾರಿ ಅಮಾನತುಗೊಂಡು ಹಣ್ಣು ವ್ಯಾಪಾರ ಮಾಡಲು ಅರಂಭಿಸುವ ಕತೆ ಇದರಲ್ಲಿತ್ತು ಜರ್ಮನ್‌ ಜನತೆ,ಆರ್ಥಿಕ ಸಂಕಷ್ಟ. ಕುರುಡು ಪ್ರೀತಿ,ಕಾಮ ಎಲ್ಲವನ್ನು ಬಿಡಿಸಿಟ್ಟ.ಈ ಚಿತ್ರ ಆತನ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಯ್ತ.ಕನಸು ಕಂಗಳಲ್ಲಿ ಬಣ್ಣದ ಬದುಕಿಗೆ ಬಂದಿದ್ದ ಬೈಂಡ್‌ರ್‌ನನ್ನು ಅಲ್ಲಿನ ಜನ ತುಂಬು ತೋಳಿನಲ್ಲಿ ಅಪ್ಪಿಕೊಂಡರು.
ಪ್ರಶಸ್ತಿ ತಂದ ಚಿತ್ರ..
  ಮರ್ಚೆಂಟ್‌ ಆಫ್‌ ಪೋರ್‌ ಸಿಸನ್ಸ್ ಚಿತ್ರಜನ ಮೆಚ್ಚಿದರೂ ಪ್ರಶಸ್ತಿ ಗಳಿಸಲಿಲ್ಲ.ಅದರೂ ಆತ ಎಂದು ಅದಕ್ಕಾಗಿ ಹಂಬಲಿಸಿದವನೇ ಅಲ್ಲ. ಅದರೂ ಟೀಕಿಸುವವರು ಅದೇ ಕಾರಣವನ್ನೆ ನೆಪ ಮಾಡಿಕೊಂಡು ಹಂಗಿಸುತ್ತಿದ್ದರು.1974 ರಲ್ಲಿ ಬಂದ ಅಲಿ-ಫಿಯರ್‌ ಈಟ್ಸ ದ ಸೋಲ್‌ ಅತನಿಗೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿತು. ಆ ವರ್ಷ ದ ಕ್ಯಾನ್ಸ್ ಫಿಲ್ಪ್ರಶಸ್ತಿ ಬಾಚಿಕೊಂಡಿತು.ಜರ್ಮನ್‌ ಕೆಲಸಗಾರ್ತಿ ಹಾಗೂ ಮೊರೆಕಕ್ೂದ ಅಲೆಮಾರಿ ಕಾರ್ಮಿಕನ ನಡುವಿನ ಪ್ರೇಮ ಕಥೆ ಆಧಾರಿತ ಈ ಚಿತ್ರ ಜನರ ಮನಸೂರೆಗೊಂಡಿತು. ಕಾದಂಬರಿ ಆಧಾರಿತ ಚಿತ್ರಕಕ್ು ಸೈ..ಬರಿ ಸಮಾಜ,ಜೀವನ ಬಗ್ಗೆ ಮಾತ್ರ ಚಿತ್ರ ಮಾಡುತಾ್ತನೆ,ಅತ ಕಂಡ ಬದುಕು ಎಲ್ಲರದ್ದೂ ಆಗಿರುವುದಿಲ್ಲ ಎಂದವರಿಗೆ 1977 ರಲ್ಲಿ ವಾಲ್ಡಿಮರ್‌ ನಬಕ್ೀವ್‌ರ ಕಾದಂಬರಿಯನ್ನು ಡಿಸ್ಪೈರ್‌ ಎಂಬ ಚಿತ್ರ ಮಾಡಿದ.
ಕೊನೆಗಾಲ..
  1982 ನಿರ್ದೇಶಿಸಿದ ಕಾವರಲ್ಲೂ ಆತನ ಕೊನೆಯ ಚಿತ್ರ. ಬದುಕಿನ ಉತ್ತುಂಗ ಕಾಲದಲ್ಲಿ ಕೋಕೆನ್‌ ದಾಸನಾಗಿದ್ದ .ವಿಪರೀತ ಮಾದಕ ದ್ರವ್ಯ ಸೇವನೆ ಆತನ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿತ್ತು.1982ರ ಜೂನ್‌ 10 ರಂದು ಮ್ಯೂನಿಚ್‌ನ ಅಪಾರ್ಟಮೆಂಟ್‌ನಲ್ಲಿ ಶವವಾಗಿ ಬಿದ್ದಿದ್ದ. ನಿದ್ರೆ ಮಾತ್ರ ಸೇವಿಸಿದ್ದರಿಂದ ಹೃದಾಯಾಘಾತ ವಾಗಿತ್ತು ಎಂದು ನಂತರ ಬಂದ ಶವ ಪರೀಕ್ಷೆ ವರದಿಗಳು ತಿಳಿಸಿದವು.ಅದರೆ ಅಲ್ಲಿನ ಜನತೆ ಹಾಗು ಆತನ ಅಭಿಮಾನಿಗಳು ಆತನ ಏಳಿಗೆಯನ್ನು ಸಹಿಸಲಾರದೆ ಆತನ ವಿರೋಧಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸುತ್ತಾರೆ.
ಮುಂದಿನ ಚಿತ್ರಕ್ಕೆ ಚಿತ್ರಕತೆ ಸಿದ್ಧಪಡಿಸಿದ್ದ..
 ಆತನ ಕೋಣೆಯಲ್ಲಿ ಆತ ತನ್ನ ಮುಂದಿನ ಚಿತ್ರ ರೋಸಾ ಲುಕ್ಸಂಬರ್ಗ್‌ಗಾಗಿ ಚಿತ್ರಕಥೆ ಸಿದ್ಧಪಡಿಸಿ, ಪ್ರಖ್ಯಾತ ನಟಿ ರೋಮಿಯನ್ನು ಮುಖ್ಯ ಪಾತ್ರದಲ್ಲಿ ಕಾಣಲು ಬಯಸಿದ್ದ.
ಜರ್ಮನ್‌ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಚಿತ್ರಗಳನ್ನು ರೂಪಿಸಿ ಭವಿಷ್ಯದ ಭಾಷ್ಯ ಬರೆದ ಬೈಂಡರ್‌.ಅತಿ ಚಿಕಕ್ ವಯಸ್ಸಿಗೆ ಮರೆಯಾಗುತ್ತಾನೆ ಎಂದು ಯಾರು ಭಾವಿಸಿರಲಿಕ್ಕಿಲ್ಲ.ಆದರೆ ಆತನ ಚಿತ್ರಗಳು ಈಗಲೂ ನೆನಪಾಗುತ್ತವೆ...ನಮ್ಮನ್ನು ಕಾಡುತ್ತವೆ

Tuesday, April 27, 2010

ಮಹಾಭಾರತವೆಂಬ ಯುದ್ದವು?ಕುರುಕ್ಷೇತ್ರವೆಂಬ ಕೃತಿಯು ?...

        ಪ್ರಕಾರ ಈ ರೀತಿಯ  ಪುಸ್ತಕ ಓದುತ್ತಿರುವುದು ಇದೆ ಮೊದಲು. ಅಲ್ಲದೆ ಕನ್ನಡ ದಲ್ಲಿ ಇಂತಹ ಆಯೋಗದ ಪುಸ್ತಕಗಳು ತುಂಬಾ ಕಡಿಮೆ. ನಿಜಕ್ಕೂ ಅಮೂಲ್ಯವಾದ ಕೃತಿ. 'ಧರ್ಮ  ಎಂದರೇನು? ', ' ನ್ಯಾಯ-ಅನ್ಯಾಯ ಗಳ ಪರಾಮರ್ಶೆ ', 'ಧರ್ಮ ಕ್ಷೇತ್ರೇ ಕುರುಕ್ಷೇತ್ರೆ ಹೇಗೆ' ಎನ್ನುವ ವಿಚಾರವನ್ನು ಬಯಲಿಗೆಳೆಯುತ್ತದೆ . ಈ ಪುಸ್ತಕ ಓದಿದಾಗ  ಮಹಾಭಾರತದ ಜಿಜ್ಞಾಸೆ ಆರಂಭ ವಾಗುತ್ತದೆ ,                                           
ಇಲ್ಲಿ ಬರುವ ಧರ್ಮ ದೇವತೆಯ ಮುಂದೆ ಯುದ್ದ ಅಪರಾಧಿಗಳು ತಪ್ಪೋಪ್ಪಿಕೊಳ್ಳುವಂತೆ ,ಯುದ್ದದ ಪ್ರತ್ಯಕ್ಷದರ್ಶಿ  ಸಂಜಯ, ಕೌರವರ ಹಿರಿಯ ದುರ್ಯೋಧನ , ಮೇಧಾವಿ ಭೀಷ್ಮ ,ಬಿಲ್ಲೋಜ ದ್ರೋಣ ,ದಾನಶೂರ ಕರ್ಣ ,ಆತನ ಸಾರಥಿ ಶಲ್ಯ , ಕೌರವರ ಮಾವ ಶಕುನಿ,ಗುರುಪುತ್ರ ...ಅಲ್ಲ ಬ್ರಾಹ್ಮಣ  ದ್ರೋಣರ ಮಗ ಅಶ್ವತ್ತಾಮ, ಪಾಂಡವರ ಸೇನಾಪತಿ ದೃಷ್ಟದ್ಯುಮ್ನ,ದ್ರೋಣರ ವೈರೀ ,ಬಾಲ್ಯಕಾಲ ಸ್ನೇಹಿತ ದ್ರುಪದ  , ಪಾಂಡವರ ಹಿರಿಯ ಧರ್ಮರಾಯ, ಪಾಂಚಾಲಿ ದ್ರುಪದಿ ಪಾಂಡವರ ತಾಯಿ ಕುಂತಿ , ವೇದವ್ಯಾಸರ ಮಗ ವಿದುರ,ಮುನಿ ಶೌನುಕ (ಕೃಷ್ಣ ನ ಪಾತ್ರದ ಬಗ್ಗೆ ಹೇಳುವವರು ) ಇವರೆಲ್ಲರೂ ತಮ್ಮ ತಮ್ಮ ತಪ್ಪು ಗಳನ್ನೂ ವಿವರಿಸುತ್ತಾರೆ , ಹಾಗೆ ತಪ್ಪುಗಳಿಗೆ ಸಮಾಧಾನ ನೀಡುತ್ತಾರೆ
             ಈ ಕೃತಿ  ಓದಿದಾಗ  ಇಡಿ ಕುರುಕ್ಷೇತ್ರ ಯುದ್ದದಲ್ಲಿ ಹಲವಾರು ಮೋಸಗಳು ನಡೆದಿವೆ ಎಂದರೆ ತಪ್ಪಾಗಲಾರದು. ಇಲ್ಲಿ ಬರುವ ಭೀಷ್ಮ, ಶಲ್ಯ , ಕರ್ಣ , ದ್ರೋಣ  ಎಲ್ಲರೂ ಉಭಯ ಸಂಕಟಿಗಳೇ," ಭೀಷ್ಮ ಇದ್ದು ಕೌರವರಿಗೆ ಸಹಾಯ ಮಾಡಿ, ಸತ್ತು ಪಾಂಡವರಿಗೆ ನೆರವಾಗುತ್ತಾನೆ".ಅಲ್ಲದೆ ತನ್ನನ್ನು ಸಾಯಿಸುವ ಉಪಾಯವನ್ನು ಆತನೇ ಶತ್ರು ಗಳಿಗೆ ನೀಡುತ್ತಾನೆ. ಇದು ಕ್ಷತ್ರಿಯಧರ್ಮಕ್ಕೆ ವಿರುದ್ಧ.ಚಕ್ರವ್ಯೂಹದಲ್ಲಿ  ಅಭಿಮನ್ಯುವನ್ನು ಮೋಸದಿಂದ ದ್ರೋಣ ,ಕರ್ಣನ ಮೂಲಕ ಆತನ ಕೈ ಕತ್ತರಿಸುವಂತೆ ಮಾಡಿದ್ದೂ," ಅಶ್ವತ್ತಾಮ ಹಥ: ಕಂಜರೆ:" ಎಂದು  ಧರ್ಮರಾಯ ಹೇಳುವ ಸಂಧರ್ಭ ದಲ್ಲಿ ಕೊನೆಯ ಶಬ್ದ ಹೇಳುವಾಗ ಶ್ರೀ ಕೃಷ್ಣ ಶಂಖ  ಊದಿ ಅದನ್ನು ಕೇಳಿಸದಂತೆ ಮಾಡಿದ್ದು,ಅದನ್ನು ಕೇಳಿ ದ್ರೋಣ ತನ್ನ ಮಗ ಸತ್ತಿದ್ದಾನೆ ಎಂದು ಭ್ರಮಿಸಿ ಅಲ್ಲೇ ಕುಸಿದು ಕುಳಿತಾಗ ದ್ರೋಣರನ್ನು ಸಾಯಿಸಲೆಂದೇ ಹುಟ್ಟಿದ್ದ ದ್ರುಷ್ಟದ್ಯುಮ್ನು ಅವರನ್ನು ಸಾಯಿಸುವುದು, ಕರ್ಣನ ರಥ ಹುದುಗಿದಾಗ ಮೋಸದಿಂದ ಆತನನ್ನು ಸಾಯಿಸುವುದು, ಶಲ್ಯನ ಮೋಸ, ಇದಕ್ಕೆಲ್ಲ ಸಮಾಧಾನದ ಹೇಳಿಕೆ ಸಿಗುತ್ತದೆ. ಅಶ್ವತ್ತಾಮ ಪಾಂಡವರ ಶಿಬಿರದಲ್ಲಿ ಮಾಡುವ ಕೊಲೆ ಹಾಗು ಭ್ರೂಣ ಹತ್ಯೆಯು ಪ್ರತ್ಯಕ್ಷ ಅಪರಾಧವಾಗಿ ಕಾಣುತ್ತದೆ . ವಾರನಾವತಾದ್ ಪ್ರಕರಣ ,ದ್ರೌಪದಿ ವಸ್ತ್ರಾಪಹರಣ ,ಇವೆಲ್ಲ ಧರ್ಮದೇವತೆಯ ಮುಂದೆ ಸಾಂಧರ್ಭಿಕ ಅಪರಾಧವಾಗಿ ಕಾಣುತ್ತದೆ . ಅದಕ್ಕೆ ಸರಿಯಾದ ಶಿಕ್ಸೆಯು ಅವ್ರಿಗೆ ಲಭಿಸುತ್ತದೆ. ರಾಜನೀತಿ, ಜಾತಿಸಮಸ್ಯೆ, ಆತ್ಮ ಸಂತೃಪ್ತಿ ,ಎಲ್ಲವು ಕುರುಕ್ಷೇತ್ರದಲ್ಲಿ ಇದೆ . ಕೊನೆಯಲ್ಲಿ ನ್ಯಾಯಮೂರ್ತಿ ಅದ ಧರ್ಮದೇವತೆಯ ನಿಡುವ ಸಮಾಧಾನ ಹೇಳಿಕೆಯು ಪ್ರಮುಖವಾದುದು " ಧರ್ಮದ ಅಂಕೆಯಲ್ಲಿ "ನ್ಯಾಯ "ದ ಅಂಕೆಯಲ್ಲಿ "ಕಾರ್ಯ"ಇದ್ದರೆ ಜನಜೀವನ ಸುಭದ್ರ ವಿಪರೀತವಾದರೆ ಅನರ್ಥ " ಎಂಬಂಥ ಮಾತುಗಳು ತಾತ್ವಿಕ ವಿಚಾರ ಮಾಡಿಸುವಂತೆ ಮಾಡುತ್ತದೆ .


ನಿಜಕ್ಕೂ ,ಹಲವಾರು ವಿಚಾರಗಳು ಇಲ್ಲಿ ಮೂಡುತ್ತದೆ , ಕೋರ್ಟ್ ನಲ್ಲಿ ವಿಚಾರಣೆ ನಡೆಸುವ ರೀತಿ ಯಲ್ಲಿ ವಿಚಾರಣೆ ಮಾಡಿ ಕೊನೆಯಲ್ಲಿ ನ್ಯಾಯನಿರ್ಣಯ ಮಾಡುವುದು ಖುಷಿ ಕೊಡುತ್ತದೆ. ನಿರೂಪಣೆಯ ಅದ್ಭುತವಾಗಿದೆ .ಓದಿಸಿಕೊಂಡುಹೋಗುವ ಕೃತಿ "ಕುರುಕ್ಷೇತ್ರಕ್ಕೊಂದು ಆಯೋಗ ".