Sunday, September 5, 2010

ಗಾಂದಿ ನಗಗರದ ಸಿದ್ಧ ಸೂತ್ರಗಳಿಗೆ ಸೆಡ್ಡು ಹೊಡೆದ ಚಿತ್ರ..

ತುಂಬಾ ದಿನಗಳ ನಂತರ ನೋಡುವಂತ ಒಂದು ಚಿತ್ರ ಬಂದಿದೆ ಕೊಟ್ಟ ಕಾಸಿಗಂತೂ ಮೋಸವಿಲ್ಲ


ಯೋಗರಾಜ್ ಭಟ್ ರಿಗೆ ಸಿನಿಮಾ ಬಗ್ಗೆ ಪ್ರೀತಿ ಇದೆ ಏನಾದರೂ ವಿಭಿನ್ನ ವಾದುದನ್ನು ಚಿತ್ರರಂಗಕ್ಕೆ ನೀಡಬೇಕು ಎನ್ನುವ ಹಂಬಲವೇ ಪಂಚರಂಗಿ ಎಂಬ ಸಿನಿಮಾ ಆಗಿದೆ..
ಮುಂಗಾರು ಮಳೆ ಮೂಲಕ "ಮಳೆ" ಎಂಬ ಫಾರ್ಮುಲಾ ಕೊಟ್ಟ ಬಟ್ಟರು ಪಂಚರಂಗಿ ಮೂಲಕ " ಮಾತುಗಾರಿಕೆ"ಯ ಫಾರ್ಮುಲಾ ಬಳಸಿದ್ದಾರೆ..ಆಫ್ ಕೋರ್ಸ ಅದು ಇಲ್ಲಿ ಯಶಸ್ವೀಯಾಗಿದೆ...ಇನ್ನು ಉಳಿದ ನಿದೇಶಕರಿಗೆ ಫಾರ್ಮುಲಾ ಹಳತು ಮಾಡುವ ಕೆಲಸ.
ಇಲ್ಲಿ, ಸುಂದರ ಪರಿಸರಗಳು, ಮನಸ್ಸಿಗೆ ಮುದ ನೀಡುವ ಹಾಸ್ಯಗಳು,ಭರಪೂರಿತ ಸಾಂಗುಗಳು, ಯಡವಟ್ಟು ಹೀರೋಗಳು, ಆಕೆಗೊಬ್ಬ ಹೀರೋಯಿನ್ಗಳು...ಎಲ್ಲವೂ ಗಳುಗಳು..ಎಲ್ಲವೂ ನಿರ್ಜಿವ ನಾಯಕಿ " ನಿನ್ಯಾಕೆ ಎಲ್ಲರಿಗೂ ಗಳು ಎಂದು ಸೇರಿಸುತ್ತೀಯ" ಎಂದು ಕೇಳಿದ ಪ್ರಶ್ನೇಗೆ ಕೊನೆಯಲ್ಲಿ ಸಮುದ್ರ ದಂಡೆಯಲ್ಲಿ ನಾಯಕ ನೀಡುವ ಉತ್ತರ ಮನಸ್ಸಿಗೆ ಕಾಡುತ್ತದೆ..
ಇಲ್ಲಿ ಹಾಸ್ಯ ಇದೆ ಹಾಗೆ ಬದುಕಿನ ಸುಂದರ ವಿಡಂಬನೆ ಇದೆ..ಹುಡುಗರ ಪರಿತಾಪಗಳಿವೆ..ಬದುಕಿನ ಬಗ್ಗೆ ಆಸಕ್ತಿ ಇಲ್ಲದೆ ಎಲ್ಲರನ್ನು ಬಯ್ಯುವ ನಾಯಕನ ಬಗ್ಗೆ ಭಟ್ಟರು ಎರಡುವರ ತಾಸಿನಲ್ಲಿ ಎಲ್ಲವೂ ಬಿಟ್ಟಿಡುತ್ತಾರೆ. ನಾಯಕನಿಗೆ ಜಗತ್ತು ಒಂದು ಗುಜರಿ ಅಂಗಡಿ ಇಂತಹ ನಾಯಕನಿಗೆ ಜೊತೆಯಾಗುವವಳು ಅಂಬು

ಕಥೆಗಳು.
ನಾಯಕ ಭರತ್(ದಿಗಂತ್) ಬೊಂಬೆಗಳಿಗೆ ಸೀರೆ ಉಡಿಸುವ ಹಾಗೆ ಕನ್ನಡ ಎಂ.ಎ ಮಾಡುತ್ತಿರುವ ಬೀರುಬೀಸನೇ ಹುಡುಗ..ಅಪ್ಪ..ಅಮ್ಮ,ಅಣ್ಣ, ತನ್ನ ಜ್ಯೊತಿಷಿ ಮಾವ, ನಾಯಿ ಹಾಗೆ ಬಸ್ ಚಾಲಕ ಹಾಗೂ ಆತನ ಕುರುಡು ತಂದೆ ಎಲ್ಲರೂ ಇಬ್ಬರು ಹೆಣ್ಮಕ್ಕಳಿರುವ ಸಮುದ್ರ ಕಿನಾರೆಯಲ್ಲಿರುವ ಮನೆಗೆ ಹೆಣ್ಣು ನೋಡಲು ಬರುತ್ತಾರೆ..ಭರತ್ ನಿಗೆ ನಿದ್ರಾರೋಗದ ಕಾಯಿಲೆ
ಪಕ್ಕದಲ್ಲಿ ಬಾಂಬ್ ಬಿದ್ದರೂ ಆತನಿಗೆ ಅರಿವಾಗುವುದಿಲ್ಲವಂತೆ..ಇನ್ನೊಬ್ಬಳನ್ನು ಪ್ರೀತಿಸುತ್ತಿದ್ದರೂ ಅಪ್ಪ&ಅಮ್ಮನಿಗೆ ತಿಳಿಸದೆ ಅವರ ಒತ್ತಾಯಕ್ಕೆ ಹೆಣ್ನು(ಲತಾ) ನೋಡುವ ಲಕ್ಕಿ..ಎಲ್ಲವೂ ಸಾಂಗ ಎನ್ನುವಾಗ ಲಕ್ಕಿಯ ಮನದನ್ನೆಯ ಎಂಟ್ರಿ... ಇವಿಷ್ಟರ ನಡುವೆ ನಡೆಯುವ ನಾಯಕ (ಭರತ್) ನಾಯಕಿ( ಅಂಬಿಕಾ) ನಡುವೆ ನಡೆಯುವ ಪ್ರೀತಿ ಎಲ್ಲವೂ ಬೊಂಬಾಟ್.. ಸಮುದ್ರ ದಂಡೆಯ ಮೇಲೆ ತನ್ನ ನಾಯಕಿ ನಿಧಿ ಸುಬ್ಬಯ್ಯ ಪ್ರೇಮ ನಿವೇದನೆ ಮಾಡುವಾಗ ಥೇಟರ್ ನಲ್ಲಿ ಕೂತ ಹುಡುಗರಿಗೆ ತಮ್ಮ ಗೆಳತಿಯ ನೆನಪಾಗುವುದರಲ್ಲಿ ಮಾತೇ ಇಲ್ಲ. ಚಿತ್ರದ ಮೊದಲಾಧ ಮೊದಮೊದಲು ಬೋರ್ ಅನಿಸಿದರೂ ಅದು ನಮ್ಮ ಅರಿವಿಗೆ ಬರುವಷ್ಠರಲ್ಲಿ ಕಥೆ ಹಿಡಿತ ಪಡೆದುಕೊಳ್ಳುತ್ತದೆ. ಒಂದು ಸಿಂಪಲ್ ಸ್ಟೋರಿಗೆ ಭಟ್ಟರು ಸುಣ್ಣ ಬಣ್ಣ ಬಳಿದಿದ್ದಾರೆ..ಆದರೆ ಅದು ನಮಗೆ ಆಪ್ತವಾಗುತ್ತದೆ. ಇಲ್ಲಿಯವರೆಗಿನ ಎಲ್ಲಾ ಚಿತ್ರಗಳಲ್ಲಿ ಮನೆಗಳನ್ನು ಒಂದುಗೂಡಿಸಿ ಪ್ರೇಮಿಗಳನ್ನು ದೂರ ಮಾಡುವ ಪರಿಪಾಠ ಬೆಳೆಸಿದ್ದ ಅವರು ಬದಲಾಗಿದ್ದಾರೆ.
ಅನಂತನಾಗ್ ಎರಡೇ ಸೀನ್ ಗಳಲ್ಲಿ ಕಾಣುತ್ತಾರಾದರೂ ತುಂಬಾ ಸುಂದರವಾಗಿ ಪಾತ್ರ ನಿಭಾಯಿಸಿದ್ದಾರೆ ಕೊನೆಗೆ ಲಕ್ಕಿ ಮನದನ್ನೆ ಬಂದ ನಂತರ ಆಗುವ ಅವಾಂತರಗಳೆನು? ಲತಾ ಲಕ್ಕಿ ಮದುವೆ ಆಗುತ್ತದೆಯೆ? ನಾಯಕ,ನಾಯಕಿ ಏನಾಗುತ್ತರೆ ಇವೆಲ್ಲ ನೋಡಲು ಚಿತ್ರಮಂದಿರ ನಿಮಗಾಗಿ ಕಾಯುತ್ತಿದೆ.ಮನೋಮುರ್ತಿ ಸಂಗೀತದಲ್ಲಿ ಮೂಡಿಬಂದ ಹೆಚ್ಚಿನ ಹಾಡುಗಳು ಸುಂದರ..ಬಲು ಸುಂದರ..ಲೈಫು ಇಷ್ಟೇನೆ..ಗೀತೆಯಲ್ಲಿ ಸಂಗೀತಕ್ಕಿಂತ ಭಟ್ಟರ ಪದಗಳು ಆಪ್ತವಾಗುತ್ತದೆ." ಉಡಿಸುವೇ ಬೆಳಕಿನ ಸೀರೆಯ", "ಹುಡುಗರು ಬೇಕು..." " ಪಂಚರಂಗಿ ಹಾಡುಗಳು" ಎಲ್ಲವೂ ಮುದ ನೀಡುತ್ತದೆ. ಒಂದೇ ಬಾರಿಗೆ ಹೇಳುವುದಾದರೆ ಸಂಭಾಷಣೆ ಚಿತ್ರದ ಹೀರೂ..ಹಿರೋಯಿನ್ ಎಲ್ಲಾ. ವಿ.ತ್ಯಾಗರಾಜನ್ ಕ್ಯಾಮರಾ ಕೆಲಸ ಸುಂದರವಾಗಿದೆ..ಸುಮುದ್ರದಾಚೆ ಬಾಗಿದ ತೆಂಗಿನ ಮರದ ಮೇಲೆ ಕುಳಿತ ನಾಯಕ ,ನಾಯಕಿಯನ್ನು ತೋರಿಸುವಾಗ ಅವರ ಶ್ರಮಕ್ಕೆ ಭೇಷ್ ಎನ್ನಲೇಬೆಕು. ಉಡಿಸುವೆ ಬೆಳಕಿನ ಸೀರೆಯ ನ್ರತ್ಯ ಸಂಯೋಜನೆ ಹಾಗೂ ಕಲಾ ನಿರ್ದೇಶನ ಶಶಿಧರ ಅಡಪ ಶ್ರಮಕಾಣುತ್ತದೆ.
ಭಟ್ಟರ ಅಶರೀರವಾಣಿ...ಹಾಗೆ ಅವರ ಪದಗಳು..ಶಾಲಿವಾಹನ ಶಕೆ ಮನೆಗಳು..ಹೆಂಗಳೆಯರು..ಹೆಂಗಸುಗಳು..ಕೆಮ್ಮಿದರೆ ಬೀಳುವ ಮನೆಗಳು..ಕೆಂಪು ಹೆಂಚು ಗಳು..ಸಮುದ್ರಕ್ಕೆ ಬಾಗಿರುವ ಮನೆಗಳು...ಮುದ್ದು ಜಡೆಗಳು...ಒದ್ದೆ ಕೊಡೆಗಳು ಎಲ್ಲವೂ ಆಪ್ತವಾಗುತ್ತದೆ. ಜಯಂತ್ ಕಾಯ್ಕಿಣಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಒಟ್ಟಾರೆ ಚಿತ್ರ ಕಾಡುವುದಂತೂ ಸುಳ್ಳಲ್ಲ. ಕೊನೆಯಲ್ಲಿ ನಾಯಕನ ಸಂದಿಗ್ಧತೆಯನ್ನು ಉತ್ತಮವಾಗಿ ನಿರೂಪಿಸಿದ್ದಾರೆ.

1 comment:

  1. ತುಂಬಾ ಚೆನ್ನಾಗಿದೆ, ಹೀಗೆ ಮುಂದುವರೆಯಲಿ ನಿಮ್ಮ ಪಯಣ. ಹಾಗೇ ನಮ್ಮಗಳ ಬ್ಲಾಗ್ ಗೆ ಹೋಗಿ ಬನ್ನಿಗಳು.
    ನಾವುಗಳು, ನೀವುಗಳು, ನಾವೆಲ್ಲರುಗಳು ಹೊಸ ವಷ೵ ಆಚರಣೆ ಮಾಡುಗಳು

    -ಡಿ.ಎಸ್. ಗೋದಾವರಿ
    ಹೊಸದಿಗಂತ

    ReplyDelete

ನಿಮಗನಿಸಿದ್ದು....