Thursday, September 30, 2010

ಅಯೋಧ್ಯೆ ತೀರ್ಪು..ಸುದ್ದಿಮನೆಯ ಹಾಡು...

ಬಹು ನಿರೀಕ್ಷಿತ ಅಯೊಧ್ಯೆ ತೀರ್ಪು ಹೊರಬಿದ್ದಿದೆ..ಮಾಧ್ಯಮ ಮಂದಿ ಎಚ್ಚರಿಸುವಂತೆ ಏನೂ ಆಗಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಮೂಗು ದಾರ ಹಾಕಿದ್ದು ಕಾರಣವಾದರೂ, ಪತ್ರಿಕೆಗಿಂತ, ಟಿವಿ ಮಾದ್ಯಮದವರ ಅವಸ್ಥೆ ಕಂಡು ನಮ್ಮ ಸುದ್ದಿಮನೆಯಲ್ಲಿ ನಗುವುದೊಂದೆ ಬಾಕಿ..ಕನ್ನಡದ ಪ್ರತಿಷ್ಟತ ನ್ಯೂಸ್ ಚಾನೆಲ್ ಒಂದು ಬೆಳಗಿನ್ನಿಂದಲೆ ಒದರುತ್ತಾ ಸಾಗುತ್ತಿತ್ತು..ಅದಕ್ಕೆ ಲೆಕ್ಕವಿಲ್ಲ ದಷ್ಟು ಬ್ರೇಕಿಂಗ್ ನ್ಯೂಸ್ ಗಳು ಬರುತ್ತಿದ್ದವು. ಬೆಳಿಗ್ಗೆ ಬೆಳಿಗ್ಗೆ ನಿರೂಪಕಿ ಮೀನ್ಸ್ ಆಂಕರ್ ಕೆಳಿದ ಪ್ರಶ್ನೆ ಅಭಾಸದ ಪರಮಾವಧಿ ಎಂದರೆ ತಪ್ಪಾಗಲಿಕ್ಕಿಲ್ಲ.. ಎಲ್ಲಾ ಕಡೆ ಗಲಾಟೆ, ದೊಂಬಿ ಆಗಬಾರದು ಎಂದು ಪೋಲೀಸ್ ಸರ್ಪಗಾವಲು ಇದ್ದಿದ್ದರೆ..ಆಕೆ ಪೋನ್ ಇನ್ ಕಾಲ್ ಅಲ್ಲಿ ಇವತ್ತು ಗಲಾಟೆ ಆಗುವ ಸಂಭವ ಕಾಣುತ್ತಿದೆಯಾ ಎಂದು ಮೂರು-, ನಾಲ್ಕು ಬಾರಿ ಕೆಳಿದಳು. ಆಕೆಯ ಪ್ರಕಾರ ಗಲಾಟೆ ಆದರೆ ಮತ್ತೊಂದು ಬ್ರೆಕಿಂಗ್ ನ್ಯೂಸ್ ಆಗುತ್ತದೆ ಎಂದು ಭಾವಿಸಿರಬೇಕು..ಮೀಡಿಯಾಗಳು ದುರಂತದ ಹಾದಿಯಲ್ಲಿ ಸಾಗುತ್ತಿರುವ ಉದಾಹರಣೆ ಗೆ ಈದು ಹೊಸ ಸೆರ್ಪಡೆ..ಅಷ್ಟೆ.
ಇನ್ನು ನಮ್ಮ ಸುದ್ದಿ ಮನೆಯಲ್ಲಿ...
ಅಯೋಧ್ಯೆ ಎಂದರೆ ಬಹಳ ದೊಡ್ಡ ನ್ಯೂಸ್ ಆಗುವ ಪೇಪರ್..ಆ ದಿನ ನನ್ನ ಪ್ರತಿನಿತ್ಯದ ಪೇಜ್ನ್ನು ಅಯೋಧ್ಯೆ ಗಾಗಿ ಮೀಸಲಿಟ್ಟಿದದರಿಂದ ಸ್ವಲ್ಪ ಆರಾಮದಿಂದಿದ್ದೆ ಆದರೆ ಗಂಟೆ 12 ದಾಟುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಧಾವಂತ ಆರಂಭವಾಗಿತ್ತು. ಇಂದು ಅಯೋಧ್ಯೆ ತೀರ್ಪು ಏನಾಗಲಿದೆಯೂ..ಎಂಬ ಬಗ್ಗೆ ಆಲೋಚಿಸುತ್ತಿದ್ದೆ..ಹಾಗಾಗಿ ನನ್ನಿಂದ ಒಂದ್ಕ್ಷರವನ್ನು ಬರೆಯಲಾಗಲಿಲ್ಲ..ಆಫೀಸಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದೆ..ಎಲ್ಲರ ಕಂಪ್ಯೂಟರ್ ಮೇಲೂ (ಅದರ ಅಕ್ಕ-ಪಕ್ಕದಲ್ಲೂ) ಅಯೋಧ್ಯೆಯ ನ್ಯೂಸ್ ಗಳ ಪುರಾಣಗಳು..ಜನರಲ್ ಡೆಸ್ಕ್ನಲ್ಲಿದ್ದ ಎಲ್ಲರೂ ಅದರ ಬಗ್ಗೆ ಉತ್ಸುಕರಾಗಿದ್ದರು. ಇಂದು ಆಫೀಸ್ ನಲ್ಲಿ ಯಾರಿಗೂ ರಜಾ ನೀಡದ್ದರಿಂದ ಕಚೇರಿ ತುಂಬಿ ತುಳುಕುತ್ತಿತ್ತು.
3.30 ಆದಾಗ ಎಲ್ಲರ ಕಂಪ್ಯೂಟರ್ ನಲ್ಲೂ ಅಯೋಧ್ಯೆಗೆ ಸಂಬಂಧ ಪಟ್ಟ ವೆಬ್ ತಾಣಗಳು ಕಂಪ್ಯೂಟರ್ ಮೇಲೆ ರಾರಾಜಿಸಿದ್ದವು. ನಾನು ಸಿಎನ್ಎನ್ ಐಬಿನ್ ಚಾನೆಲ್ಗಳ ಮೇಲೆ ಕಣ್ಣಿಟ್ಟಿದ್ದೆ. ಪ್ರತಿಕ್ಷಣ ಹೊಸ ಹೊಸ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. 4 ಗಂಟೆಗೆ ತೀರ್ಪು ಪ್ರಕಟಗೊಳ್ಳುತ್ತದೆ ಎಂದಾಗ ಸ್ವಲ್ಪ ನಿರಾಳ. ಹಾಗೆ ನನ್ನ ಸಪ್ಲಿಮೆಂಟ್  ಪೇಜ್ ನೋಡಿ ಮುಗಿಸಿದಾಗ ಗಂಟೆ ಸರಿಯಾಗಿ 4 ಆಗಿತ್ತು.. ರಿಪೋರ್ಟಿಂಗ್ ಸೆಕ್ಷನ್ ನಲ್ಲಿ ಆಗಲೇ ಯಾರ್ಯಾರ ಪ್ರತಿಕ್ರಿಯೆ ತೆಗೆದುಕೊಳ್ಳಬೇಕೆಂಬ ಚರ್ಚೆ ಆರಂಭವಾಗಿತ್ತು.. ಪ್ರತಿದಿನ 5 ಗಂಟೆಗೆ ಸಭೆಸೇರುವ ಸೀನಿಯರ್ಗಳ ತಂಡ ಅಂದು ಬೇಗನೇ ಸಭೆ ಸೇರಿ ಆಗಬೇಕಾದ ಕೆಲಸಗಳ ಬಗ್ಗೆ ತಿರ್ಮಾನಿಸಿತ್ತು. ಅಲ್ಲಿಗೆ. ಟಿವಿಯಲ್ಲಿ ಅಯೋದ್ಯೆ ಕುರಿತಾದ ತೀರ್ಪು ಹೊರಬಂದಿತ್ತು.
ತಮ್ಮ ಸ್ವಸ್ಥಾನ ದಿಂದ ಎಲ್ಲರೂ ಎದ್ದು ಡೆಸ್ಕ್ ವಿಭಾಗದಲ್ಲಿರುವ ಟಿವಿ ಹತ್ತಿರ ಸೇರಿದ್ದರು. ಕ್ಷಣ ಕ್ಷಣವೂ ಕುತೂಹಲ. ಅದರಲ್ಲಿ ಡಿಶಿಶನ್ ಎನಂತ ಹಾಕಿದ್ದಾರೆ ಆ ಚಾನೆಲ್ ಹಾಕಿ, ಈ ಚಾನೆಲ್ ಹಾಕಿ ಎಂಬ ಸಣ್ಣ ಧ್ವನಿಗಳು ಕೇಳಿಬರುತ್ತಿದ್ದರೂ..ಅಂತೂ ಎನ್ ಡಿಟಿವಿ ಯಲ್ಲಿ, ಆಜ್ ತಕ್ ಚಾನೆಲ್ ನಲ್ಲಿ ಡಿಶಶನ್ ಹೊರಬಿದ್ದದ್ದು ಕೆಳಿಸಿಕೊಂಡಾಗ ಒಂದು ಸಾರಿ ಚಪ್ಪಾಳೆ ತಟ್ಟಿ ಖುಷಿ ಪಟ್ಟೆವು. ನಂತರ ಟೀ ಕುಡಿದು ತೀರ್ಪು ಬಗ್ಗೆ ಚರ್ಚೆಗಳಾದವು ಕೆಲವರಿಗೆ ಸಮಾದಾನವಾಗಲಿಲ್ಲ.."ನನಗೂ ಸೇರಿ", ನಂತರ ಕೆಲಸದ ಸಮಯ..ಅಂತೂ ರಾಮನ ಭೂಮಿ ರಾಮನಿಗೆ ಸಿಕ್ಕತು ಅನ್ನೊದಷ್ಟೆ ಸಂತೋಷ.

No comments:

Post a Comment

ನಿಮಗನಿಸಿದ್ದು....